ವಿವೇಕವಿರಲಿ ನಿಮ್ಮ ಮಾತುಗಳಲ್ಲಿ…


Team Udayavani, Mar 4, 2021, 5:30 AM IST

ವಿವೇಕವಿರಲಿ ನಿಮ್ಮ ಮಾತುಗಳಲ್ಲಿ…

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಕಿಟಿಕಿಯ ಹೊರಗಡೆ ನೋಡುತ್ತ “ಅಪ್ಪಾ, ಅಲ್ಲಿ ನೋಡು ಮರಗಳೆಲ್ಲ ಹಿಂದಕ್ಕೆ ಹಿಂದಕ್ಕೆ ಚಲಿಸುತ್ತಿವೆ’ ಅಂತ ಅಚ್ಚರಿಯಿಂದ ಮಕ್ಕಳಂತೆ ಕಿರುಚಿದ. ಅಪ್ಪ ನಕ್ಕು ಸುಮ್ಮನಾದ. ಪಕ್ಕದಲ್ಲೇ ಕುಳಿತಿದ್ದ ನವ ದಂಪತಿ ಯುವಕನ ಬಾಲಿಶ ವರ್ತ ನೆಯನ್ನು ನೋಡಿ ತಮ್ಮ ತಮ್ಮಲ್ಲಿಯೇ ನಗತೊಡಗಿದರು. ಅಷ್ಟರಲ್ಲೇ ಆ ಯುವಕ ಮತ್ತೂಮ್ಮೆ ಉದ್ಗರಿಸಿದ. ಅಪ್ಪಾ ಅಲ್ಲಿ ನೋಡು, ಆಗಸದಲ್ಲಿರುವ ಮೋಡಗಳೆಲ್ಲ ನಮ್ಮ ಜತೆ ಜತೆಯಲ್ಲಿ ಓಡುತ್ತಿವೆ.
ಈಗ ಸುಮ್ಮನಿರಲಾರದ ಆ ದಂಪತಿ ಕನಿಕರ ವ್ಯಕ್ತಪಡಿಸುತ್ತ ಯುವಕನ ತಂದೆಯನ್ನು ಉದ್ದೇಶಿಸಿ “ನಿಮ್ಮ ಮಗನನ್ನೇಕೆ ಉತ್ತಮ ಮಾನಸಿಕ ವೈದ್ಯರಿಗೆ ತೋರಿಸಬಾರದು?’ ಅಂತ ಉಚಿತ ಸಲಹೆ ಕೊಟ್ಟರು.

ದಂಪತಿಯ ಪ್ರಶ್ನೆಗೆ ಕಿಂಚಿತ್ತೂ ವಿಚಲಿತನಾಗದ ಆ ವ್ಯಕ್ತಿ ಸಮಾಧಾನದಿಂದ “ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದೇ ನಾವು ಮರಳುತ್ತಿದ್ದೇವೆ..ಬಾಲ್ಯದಿಂದಲೇ ಅಂಧನಾಗಿದ್ದ ನನ್ನ ಮಗನಿಗೆ ಈಗಷ್ಟೇ ದೃಷ್ಟಿ ಬಂದಿದೆ. 24 ವರ್ಷಗಳ ಅನಂತರ ಇದೀಗ ಅವನು ಹೊರಜಗತ್ತನ್ನು ನೋಡುತ್ತಿದ್ದಾನೆ’ ಎಂದು ಶಾಂತವಾಗಿ ಉತ್ತರಿಸಿದ.

ಅದೆಷ್ಟೋ ಸಲ ಹೀಗಾಗುತ್ತೆ. ಬೇರೆಯವರ ಸ್ಥಿತಿಯನ್ನು, ಸಮಸ್ಯೆಗಳನ್ನು ತಿಳಿದುಕೊಳ್ಳದೇ ಮಾತನಾಡುತ್ತೇವೆ. ಗೇಲಿ ಮಾಡಿ ನಗುತ್ತೇವೆ. ಪುಕ್ಕಟೆ ಸಲಹೆಗಳನ್ನು ನೀಡಿ ಬುದ್ಧಿವಂತರಂತೆ ವರ್ತಿಸುತ್ತೇವೆ. ಇತರರ ಸ್ಥಿತಿಯ ಬಗ್ಗೆ ಅರಿತುಕೊಳ್ಳದೆ ನಮ್ಮದೇ ಆದ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಆದರೆ ನಮ್ಮ ತೀರ್ಮಾನಗಳು ಅವೆಷ್ಟೋ ಬಾರಿ ತಪ್ಪಾಗಿರುತ್ತವೆ. ಇತರರನ್ನು ನೋವಿಗೆ ತಳ್ಳುತ್ತವೆ. ಅನಂತರ ನಾವೂ ಪಶ್ಚಾತ್ತಾಪಪಡುವಂತಾಗುತ್ತದೆ.

ಬದುಕಲ್ಲಿ ಎಲ್ಲರಿಗೂ ಸಮಸ್ಯೆ ಸಂಕಟ ಗಳಿರುತ್ತವೆ. ಆದರೆ ಅದು ಇತರರಿಗೆ ತಿಳಿಯದಂತೆ ಕೆಲವರು ಬದುಕುತ್ತಾರೆ. ಇನ್ನು ಕೆಲವರು ತಮಗೆ ಬಂದಿರುವ ಕಷ್ಟ ಬೇರೆ ಯಾರಿಗೂ ಬಂದಿಲ್ಲ, ತಮ್ಮ ಸಮಸ್ಯೆಯೇ ಪ್ರಪಂಚದಲ್ಲಿ ದೊಡ್ಡದು ಅಂತ ಗೋಳಾಡುತ್ತಿರುತ್ತಾರೆ. ಸಿಕ್ಕ ಸಿಕ್ಕವರಲ್ಲೆಲ್ಲ ಹೇಳಿ ಹೇಳಿ ಅಳುತ್ತಾರೆ. ಆದರೆ ವಾಸ್ತವದಲ್ಲಿ ಸಮಸ್ಯೆಗಳಿಂದ ಯಾರೂ ಹೊ ರತಲ್ಲ. ದಾರಿಯಲ್ಲಿ ಬಿದ್ದಿರುವ ಕಲ್ಲಿಗೂ ತನ್ನನ್ನು ಎಲ್ಲರೂ ತುಳಿದು ನಡೆಯುತ್ತಾರೆ ಎಂಬ ಕೊರಗಿದೆ. ಗುಡಿಯೊಳಗೆ ಆರಾಧಿ ಸಲ್ಪಡುವ ಮೂರ್ತಿಯೂ ಉಳಿಯಿಂದ ಹೊಡೆಸಿಕೊಳ್ಳುವ ಕಷ್ಟ ಅನುಭವಿಸಿದೆ.

ಇನ್ನೊಬ್ಬರ ಸ್ಥಿತಿಯನ್ನು ಅರಿಯದೆ ಮಾತನಾಡುತ್ತೇವೆ. ಶ್ರೀಮಂತರೆಲ್ಲ ಸುಖೀಗಳು ಅಂದುಕೊಳ್ಳುತ್ತೇವೆ. ಮಿತವಾಗಿ ಮಾತನಾಡುವವರನ್ನು ಗರ್ವಿಗಳು ಅಂದುಕೊಳ್ಳುತ್ತೇವೆ. ಹೀಗೆ ನಮ್ಮ ದಿನ ನಿತ್ಯದ ಆಗುಹೋಗುಗಳಲ್ಲಿ, ಅನೇಕ ವಿಚಾರಗಳಲ್ಲಿ ನಾವು ವಾಸ್ತವವನ್ನು ತಿಳಿ ಯದೆ ಮೂರ್ಖರಂತೆ ವರ್ತಿಸುತ್ತೇವೆ. ವಿವೇಚಿಸದೆ ಮಾತನಾಡುತ್ತೇವೆ. ಜಗಳ ವಾಡುತ್ತೇವೆ. ಸಂಬಂಧಗಳಿಗೊಂದು ಗೋಡೆ ಕಟ್ಟಿ ಬಿಡುತ್ತೇವೆ.

ನಮ್ಮ ಮಾತು, ವರ್ತನೆಗಳು ಬೇರೆಯವರಿಗೆ ದುಃಖ ಕೊಡುವಂತಿರಬಾರದು. ಹಾಗೆಂದು ಕೆಲವೊಂದು ಸಂದರ್ಭ ಅಚಾತುರ್ಯದಿಂದ ನಾವು ಏನೋ ಒಂದೆ ರಡು ಕೆಟ್ಟ ಪದಗಳನ್ನು ಬಳಕೆ ಮಾಡಿರ ಬಹುದು. ನಾವಾಡಿದ ಮಾತುಗಳಿಂದ ಪರರಿಗೆ ನೋವಾಗಿದೆ ಎಂದು ನಮ್ಮ ಅರಿವಿಗೆ ಬಂದಾಕ್ಷಣ ಆ ವ್ಯಕ್ತಿ ಬಳಿ ಕ್ಷಮೆಯಾಚಿಸಿದಲ್ಲಿ ನಮ್ಮ ವ್ಯಕ್ತಿತ್ವಕ್ಕೊಂದು ಶೋಭೆ ಬರುತ್ತದೆ.

ಸಂದರ್ಭಕ್ಕೆ ಅನುಗುಣವಾಗಿ ಯೋಚಿಸಿ ವರ್ತಿಸುವುದೇ ಜಾಣತನ. ಅನ್ಯರ ಸ್ಥಿತಿಯ ಬಗ್ಗೆ ಸರಿಯಾಗಿ ತಿಳಿಯದೆ ಮೇಲ್ನೋಟದಿಂದ ನಮ್ಮದೇ ತೀರ್ಮಾನಕ್ಕೆ ಬರುವುದರಿಂದ ತೊಂದರೆಗಳೇ ಹೆಚ್ಚು.

ಹೊರಗಿನಿಂದ ಕಾಣುವುದೆಲ್ಲ ಸತ್ಯವಲ್ಲ. ಬಿಳಿಯಾಗಿರುವುದೆಲ್ಲ ಹಾಲಲ್ಲ. ಯೋಚಿಸದೆ ಮಾತನಾಡಿ ಪಶ್ಚಾತ್ತಾಪ ಪಡುವ ಬದಲು ಪರಿಸ್ಥಿತಿಯನ್ನರಿತು ಪ್ರತಿಕ್ರಿಯೆ ನೀಡುವುದೇ ವಿವೇಕತನ.

- ವಿದ್ಯಾ ಅಮ್ಮಣ್ಣಾಯ, ಕಾಪು

ಟಾಪ್ ನ್ಯೂಸ್

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

1-delay

Hoax calls; ವಿಮಾನ ಬಳಿಕ, ತಿರುಪತಿ ಹೊಟೇಲ್‌ಗ‌ಳಿಗೆ ಹುಸಿ ಬಾಂಬ್‌ ಬೆದರಿಕೆ!

1-a-kho-kho

Kho Kho; ಹೊಸದಿಲ್ಲಿಯಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಝಡ್‌ ಮೋರ್‌ ಈಗ ಉಗ್ರರ ಟಾರ್ಗೆಟ್‌; ಮೊದಲ ಬಾರಿಗೆ ಮೂಲಸೌಕರ್ಯ ಸುರಂಗ ಮಾರ್ಗದ ಮೇಲೆ ದಾಳಿ

ಝಡ್‌ ಮೋರ್‌ ಈಗ ಉಗ್ರರ ಟಾರ್ಗೆಟ್‌; ಮೊದಲ ಬಾರಿಗೆ ಮೂಲಸೌಕರ್ಯ ಸುರಂಗ ಮಾರ್ಗದ ಮೇಲೆ ದಾಳಿ

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಭಾರತದಲ್ಲೂ ಹಿಜುಬ್‌ ಕರಿನೆರಳು!ಕೇಂದ್ರ ಸರಕಾರದಿಂದ ನಿಷೇಧ

ಭಾರತದಲ್ಲೂ ಹಿಜುಬ್‌ ಕರಿನೆರಳು!ಕೇಂದ್ರ ಸರಕಾರದಿಂದ ನಿಷೇಧ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.