![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 25, 2021, 11:53 PM IST
ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಆತಿಥೇಯರು ಮುಗ್ಗರಿಸಿದರೆ, ಭಾರತೀಯರು ಈ ಎರಡರಲ್ಲೂ ಯಶಸ್ವಿಯಾದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ಗಳಲ್ಲಿ 5 ವಿಕೆಟಿಗೆ 164 ರನ್ ಪೇರಿಸಿತು. ಇದನ್ನು ಬೆನ್ನತ್ತಿದ ಲಂಕನ್ನರು 18.3 ಓವರ್ಗಳಲ್ಲಿ 126 ರನ್ಗಳಿಗೆ ಆಲೌಟಾದರು. ಅಲ್ಲಿಗೆ ಭಾರತ 38 ರನ್ಗಳಿಂದ ಜಯಿಸಿತು. ಲಂಕಾ ಪರ ಚರಿಥ ಅಸಲಂಕ 44 ರನ್ ಬಾರಿಸಿ ಹೋರಾಡಿದರು. ಆದರೆ ಉಳಿದ ಆಟಗಾರರು ನೆರವಿಗೆ ಬರಲಿಲ್ಲ. ಭಾರತದ ಪರ ವೇಗಿ ಭುವನೇಶ್ವರ್ ಕುಮಾರ್ ಅಮೋಘ ದಾಳಿ ಸಂಘಟಿಸಿ, 22 ರನ್ ನೀಡಿ 4 ವಿಕೆಟ್ ಪಡೆದರು.
ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್: ಸೂರ್ಯಕುಮಾರ್ ಭಾರತ ಸರದಿಯ ಏಕೈಕ ಅರ್ಧಶತಕ ಹೊಡೆದರೆ, ಧವನ್ 46 ರನ್ ಕೊಡುಗೆ ಸಲ್ಲಿಸಿದರು. ಪೃಥ್ವಿ ಶಾ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ “ಗೋಲ್ಡನ್ ಡಕ್’ ಅವಮಾನಕ್ಕೆ ಸಿಲುಕಿದರು. ಮುಂದೆ ಶಿಖರ್ ಧವನ್-ಸಂಜು ಸ್ಯಾಮ್ಸನ್ ಯಾವುದೇ ಒತ್ತಡಕ್ಕೊಳಗಾಗಲಿಲ್ಲ. ಇದರಲ್ಲಿ ಸ್ಯಾಮ್ಸನ್ ಪಾಲು 27 ರನ್.
ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶುಭಾರಂಭ
ಧವನ್-ಸೂರ್ಯಕುಮಾರ್ ಯಾದವ್ ಸೇರಿಕೊಂಡು 3ನೇ ವಿಕೆಟಿಗೆ ಮತ್ತೂಂದು ಉತ್ತಮ ಜತೆಯಾಟ ನಡೆಸಿದರು. 48 ಎಸೆತಗಳಿಂದ 62 ರನ್ ಒಟ್ಟುಗೂಡಿತು. ಒಂದೆಡೆ ನಿಂತು ಇನಿಂಗ್ಸ್ ಬೆಳೆಸುತ್ತಿದ್ದ ಧವನ್, ಅರ್ಧಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಕೇವಲ 4 ರನ್ನಿನಿಂದ ಈ ಅವಕಾಶ ತಪ್ಪಿಸಿಕೊಂಡರು (36 ಎಸೆತ, 4 ಬೌಂಡರಿ, 1 ಸಿಕ್ಸರ್).
ಆಕರ್ಷಕ ಆಟವಾಡಿದ ಸೂರ್ಯಕುಮಾರ್ ಯಾದವ್ ಭರ್ತಿ 50 ರನ್ ಬಾರಿಸಿದರು (34 ಎಸೆತ, 5 ಬೌಂಡರಿ, 2 ಸಿಕ್ಸರ್). ಡೆತ್ ಓವರ್ ಆರಂಭವಾದೊಡನೆಯೇ ಇವರ ವಿಕೆಟ್ ಬಿತ್ತು. ಇಶಾನ್ ಕಿಶನ್ 14 ಎಸೆತಗಳಲ್ಲಿ 20 ರನ್ ಮಾಡಿ ಅಜೇಯರಾಗಿ ಉಳಿದರು. ಕೊನೆಯ 5 ಓವರ್ಗಳಲ್ಲಿ 43 ರನ್ ಬಂತು.
ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್, 164/5 (ಸೂರ್ಯಕುಮಾರ್ 50, ಶಿಖರ್ ಧವನ್ 46, ದುಷ್ಮಂಥ ಚಮೀರ 24ಕ್ಕೆ 2). ಶ್ರೀಲಂಕಾ 18.3 ಓವರ್, 126 (ಚರಿಥ ಅಸಲಂಕ 44, ಭುವನೇಶ್ವರ್ 22/4, ದೀಪಕ್ ಚಹರ್ 24/2).
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.