![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 11, 2024, 1:38 AM IST
ಹೊಸದಿಲ್ಲಿ: ದಾನಿಗಳ ವೀರ್ಯ ಅಥವಾ ಮಹಿಳೆಯ ಅಂಡಾಣುವಿನಿಂದ ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದಕ್ಕೆ ಹೇರಿರುವ ನಿಷೇಧ ಪುನರ್ ಪರಿಶೀಲನೆ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ತಜ್ಞರು ಮತ್ತು ಕಾನೂನು ಪರಿಣತರ ಜತೆಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ನ್ಯಾ| ಬಿ.ವಿ. ನಾಗರತ್ನ ಮತ್ತು ನ್ಯಾ| ಸಂಜಯ್ ಕರೋ ಲ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅರಿಕೆ ಮಾಡಿದ್ದಾರೆ.
2023ರ ಮಾ. 14ರಂದು ಕೇಂದ್ರ ಸರಕಾರವು ಬಾಡಿಗೆ ತಾಯ್ತನ (ನಿಯಂತ್ರಣ) ತಿದ್ದುಪಡಿ ಕಾಯ್ದೆಯಲ್ಲಿ ಮಕ್ಕಳನ್ನು ಹೊಂದಲು ಬಯಸುವ ಪತಿಯ ವೀರ್ಯ, ಪತ್ನಿಯ ಅಂಡಾಣುವನ್ನು ಬಾಡಿಗೆ ತಾಯಿಗೆ ನೀಡಿ ಮಗುವನ್ನು ಹೊಂದಬೇಕು, ಬೇರೆ ದಾನಿಗಳಿಂದ ಪಡೆದ ಅಂಶವನ್ನು ಬಳಸು ವಂತಿಲ್ಲ ಹಾಗೂ ವಿಧವೆ ಬಾಡಿಗೆ ತಾಯಿ ಯು ದಾನಿಗಳ ಅಂಶದಿಂದಲೇ ಮಗು ಹೇರಬೇಕೆಂದು ತಿದ್ದುಪಡಿ ತಂದಿತ್ತು.
ಮರು ಪರಿಶೀಲನೆ ಏಕೆ ?: ಆರೋಗ್ಯ ಸಮಸ್ಯೆ ಇರುವ ಕೆಲವು ದಂಪತಿಯಲ್ಲಿ ವೀರ್ಯ, ಅಂಡಾಣುವನ್ನು ನೀಡಿ ಮಗು ಪಡೆಯಲು ಸಾಧ್ಯವಿಲ್ಲ. ಅಂಥ ಸಂದ ರ್ಭಗಳಲ್ಲಿ ದಾನಿಗಳ ನೆರವು ಬೇಕಾಗುತ್ತ ದೆ. ಆದರೆ ಸರಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೋಷಕರಾಗುವ ಅಭಿಲಾ ಶೆಗಳೇ ಮುದುಡಿ ಹೋಗಿವೆ ಎಂದು ಸುಪ್ರೀಂನಲ್ಲಿ ಅರ್ಜಿ ದಾಖಲಾಗಿದ್ದ ಕಾರ ಣ ಮರು ಪರಿಶೀಲನೆ ನಡೆಯುತ್ತಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.