Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
ಜಾನಪದ ಅಕಾಡೆಮಿ 2023ನೇ ಸಾಲಿನ ವಾರ್ಷಿಕ ಗೌರವ ಪ್ರಕಟ, 30 ಜಿಲ್ಲೆಗಳ ತಲಾ ಒಬ್ಬರಿಗೆ ಪ್ರಶಸ್ತಿ
Team Udayavani, Nov 5, 2024, 3:23 AM IST
ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಸೋಮವಾರ ಪ್ರಕಟಿಸಿದ್ದು, ವಿವಿಧ ಜಾನಪದ ಪ್ರಕಾರಗಳಲ್ಲಿ ಸಾಧನೆ ಮಾಡಿರುವ 30 ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆ.
“ಡಾ| ಜೀ.ಶಂ.ಪ. ತಜ್ಞ’ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಕರ್ನಾಟಕ ಜಾನಪದ ವಿ.ವಿ.ಯ ನಿವೃತ್ತ ಉಪಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಮತ್ತು “ಡಾ| ಬಿ.ಎಸ್. ಗದ್ದಗಿಮಠ ತಜ್ಞ’ ಪ್ರಶಸ್ತಿಗೆ ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ| ಮಂಜುನಾಥ್ ಬೇವಿನಕಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ತಜ್ಞ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ, ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ.
2023ನೇ ಸಾಲಿನ ಗೌರವ ಪ್ರಶಸ್ತಿ
* ಕೆ.ಎಂ. ರಾಮಯ್ಯ, ಬೆಂಗಳೂರು ದಕ್ಷಿಣ (ಏಕತಾರಿ, ತಂಬೂರಿ ಪದಗಳು)
* ಓಬಮ್ಮ, ದೊಡ್ಡಬಳ್ಳಾಪುರ (ಸೋಬಾನೆ ಪದ)
* ರಂಗಯ್ಯ, ಮಾಗಡಿ (ಪಟ ಕುಣಿತ)
* ತೋಪಣ್ಣ, ಕೋಲಾರ (ಕೀಲು ಕುದುರೆ ಕುಣಿತ)
* ದೊಡ್ಡ ಕೂರ್ಲಪ್ಪ, ಚಿಕ್ಕಬಳ್ಳಾಪುರ (ತಮಟೆ ವಾದನ)
* ಕದರಮ್ಮ, ಕೊರಟಗೆರೆ (ಜಾನಪದ ಹಾಡುಗಾರ್ತಿ)
* ಕಾಟಮ್ಮ, ಜಗಳೂರು (ಕಥನ ಕಾವ್ಯ)
* ಸಿರಿಯಮ್ಮ, ಚಳ್ಳಕೆರೆ (ಮಹಾಕಾವ್ಯ)
* ಟೀಕಪ್ಪ, ಸಾಗರ (ಡೊಳ್ಳು ಕುಣಿತ)
* ದೇವಕಿ ಕೆ.ಸಿ., ವೀರಾಜಪೇಟೆ (ಊರ್ಟಿ ಕೋಟ್ ಆಟ)
* ಗುರುಬಸವಯ್ಯ, ಮಳವಳ್ಳಿ (ತಂಬೂರಿ ಪದ)
* ವೀರಭದ್ರಯ್ಯ, ಅರಕಲಗೂಡು (ತಣ್ತೀಪದ ಗಾಯನ ಮತ್ತು ಏಕತಾರಿ ತಂಬೂರಿಗಳ ತಯಾರಕ)
* ನಾಗರಾಜಪ್ಪ ವೈ.ಪಿ., ಕಡೂರು (ಕರಡಿಗೆ ವಾದ್ಯ ಕಲಾವಿದ)
* ಗುರುಸಿದ್ಧಯ್ಯ, ನಂಜನಗೂಡು (ತಂಬೂರಿ ಪದ)
* ಶ್ರೀಮತಿ ಅಪ್ಪಿ, ಉಡುಪಿ (ಜನಪದ ಸೂಲಗಿತ್ತಿ)
* ಲೀಲಾವತಿ, ಪುತ್ತೂರು (ನಾಟಿವೈದ್ಯ)
* ಗೌರಮ್ಮ, ಯಳಂದೂರು (ಸೋಬಾನೆ ಪದ ಅಂಥ ಕಲಾವಿದರು)
* ಶಿವನಪ್ಪ ಚಂದರಗಿ, ಬೈಲಹೊಂಗಲ (ಡೊಳ್ಳು ಕುಣಿತ)
* ಹನಮಂತ ವೆಂಕಪ್ಪ ಸುಗತೇಕರ, ಬಾಗಲಕೋಟೆ (ಗೊಂದಳಿ ಪದ)
* ಇಮಾಂಬಿ ಇಮಾಮಸಾಬ ದೊಡ್ಡಮನಿ, ಸಿಂದಗಿ (ತಣ್ತೀಪದ)
* ಬಸಪ್ಪ ಹಡಗಲಿ, ಗದಗ (ಗೀಗೀ ಪದ)
* ದಳವಾಯಿ ಚಿತ್ತಪ್ಪ, ಸಂಡೂರು (ಜನಪದ ಮಹಾ ಕಾವ್ಯಗಳು)
* ಸಾವಕ್ಕಾ ಓಲೇಕಾರ, ಶಿಗ್ಗಾವಿ (ಸೋಬಾನೆ, ಸಂಪ್ರದಾಯದ ಪದ)
* ಈರಯ್ಯ ಮೊಗೇರ, ಭಟ್ಕಳ (ಕಾರಿನ್ ಮನೆ ಕುಣಿತ-ಹೌಂದೇರಾಯನ ಕುಣಿತ)
* ಅಕ್ಕಮ್ಮ, ಸೇಡಂ (ಸಂಪ್ರದಾಯದ ಪದ)
* ಏಸಪ್ಪಾ, ಬೀದರ (ಶಹನಾಯಿ ವಾದಕರು)
* ಶಾಂತಮ್ಮ, ಮಸ್ಕಿ (ಬುರ್ರಕಥೆ)
* ರೇವಣಪ್ಪ, ಯಲಬುರ್ಗಾ (ಡೊಳ್ಳಿನ ಹಾಡು, ಕುಣಿತ)
* ಡಾ| ರಾಮಪ್ಪ ಬಸವಂತಪ್ಪ ಮೂಲಗಿ, ಹುಬ್ಬಳ್ಳಿ (ಹಂತಿ ಪದ)
* ಅಮರಯ್ಯಸ್ವಾಮಿ ಹಿರೇಮಠ, ಸುರಪುರ (ಭಜನೆ)
2022ನೇ ಸಾಲಿನ ಪುಸ್ತಕ ಬಹುಮಾನ
ಬಿ.ಎಸ್. ಸ್ವಾಮಿ ಬೆಂಗಳೂರು, ಡಾ| ಕುರುವ ಬಸವರಾಜು ಬೆಂಗಳೂರು ಮತ್ತು ಡಾ| ನಾಗ ಎಚ್. ಹುಬ್ಳಿ, ಝಾರ್ಖಂಡ್
2023ನೇ ಸಾಲಿನ ಪುಸ್ತಕ ಬಹುಮಾನ
ವ.ನಂ. ಶಿವರಾಮು, ಮೈಸೂರು ಮತ್ತು ಡಾ| ವಿಜಯಶ್ರೀ ಸಬರದ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Duty Neglect: ಹೊಲಿಗೆ ಬದಲು ಫೆವಿಕ್ವಿಕ್ ಹಾಕಿದ್ದ ನರ್ಸ್ ಅಮಾನತು
Court: ರೂಪಾ ಮೌದ್ಗಿಲ್- ರೋಹಿಣಿ ಸಿಂಧೂರಿಗೆ “ಒನ್ ಮಿನಿಟ್ ಅಪಾಲಜಿ’ ಓದಲು ಸಲಹೆ
BJP Crisis: ಲಿಂಗಾಯತ ದಾಳಕ್ಕೆ ಶಾಸಕ ಯತ್ನಾಳ್ ನೇತೃತ್ವದ ಭಿನ್ನರ ತಂಡ ಯತ್ನ
BJP Crisis: ಬಂಡೆದ್ದ ಯತ್ನಾಳ್ ತಂಡ ಉಚ್ಚಾಟಿಸಿ: ಬಿ.ವೈ.ವಿಜಯೇಂದ್ರ ಬಣ ಆಗ್ರಹ
Ration Card: ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ತೊಂದರೆ ಇಲ್ಲ: ಆಹಾರ ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
ಈಶಾನ್ಯ ಭಾರತದ ಮುಕುಟ ದಿಬ್ರೂಗಢ ಅಸ್ಸಾಂನ ಎರಡನೇ ರಾಜಧಾನಿ
ಎರಡು ವಾರಗಳಿಂದ ಮೀನಿಗೆ ತೀವ್ರ ಬರ; ಶೇ. 20ರಷ್ಟು ಬೋಟು, ದೋಣಿಗಳಿಂದ ಮಾತ್ರ
Alert: ಭಾರತದ ಮಗ್ಗುಲಿಗೆ ಬಂದ ಗಾಜಾ ಹಮಾಸ್ ಉಗ್ರರು!
New System: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ, ಜೀವಾವಧಿಗೆ ಟೋಲ್ ಪಾಸ್
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಕ್ಷಣಗಣನೆ: ಕೋಟ್ಜಿ ಗಾಯಾಳು; ದಕ್ಷಿಣ ಆಫ್ರಿಕಾಕ್ಕೆ ಆಘಾತ