Job fraud: ಕುವೈತ್ ನಲ್ಲಿ ಹಿಂಸೆ, ರಾಯಭಾರ ಕಚೇರಿ ನೆರವಿನಿಂದ ತವರಿಗೆ ಮರಳಿದ ಯುವಕರು


Team Udayavani, Sep 6, 2023, 11:32 AM IST

4-news

ವಿಜಯಪುರ: ಜಿಲ್ಲೆಯ ಅಡವಿಸಂಗಾಪುರ ಗ್ರಾಮದ ಇಬ್ವರು ಯುವಕರು ಉದ್ಯೋಗ ಅರಸಿ ಏಜೆಂಟ್ ಮೂಲಕ ಕುವೈತ್ ದೇಶಕ್ಕೆ ಹೋಗಿ, ಹಿಂಸೆ ಅನುಭವಿ ಮರಳಿರುವ ಘಟನೆ ವರದಿಯಾಗಿದೆ.

ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರ ಗ್ರಾಮದ ಎಸ್ಎಸ್ಎಲ್ ಸಿ ಓದಿರುವ ಸಚಿನ್ ಜಂಗಮಶಟ್ಟಿ, ಪದವೀಧರ ವಿಶಾಲ ಸೇಲರ್ ಎಂಬ ಯುವಕರೇ ಉದ್ಯೋಗದ ಆಸೆಗಾಗಿ ಕುವೈತ್ ದೇಶದಲ್ಲಿ ಹಿಂಸೆ ಅನುಭವಿಸಿ, ತವರಿಗೆ ಮರಳಿದವರು.

ಬಾಂಬೆ ಮೂಲದ ಇಫ್ಕಾರ ಎಂಬ ಏಜೆಂಟ್ ಮೂಲಕ ತಲಾ 1ಲಕ್ಷ ರೂ. ಹಣ ನೀಡಿದ ಈ ಇಬ್ಬರೂ ಯುವಕರು, ತರಕಾರಿ ಪ್ಯಾಕಿಂಗ್ ಉದ್ಯೋಗದ ಭರವಸೆಯಿಂದ ಕುವೈತ್ ಗೆ ಹೋಗಿದ್ದರು.

ಕುವೈತ್ ಗೆ ಹೋದ ಬಳಿಕ ಸಲ್ಮಾನ್ ಬರಾಕ್ ಎಂಬ ಮಾಲೀಕನ ಬಳಿಗೆ ಕೆಲಸಕ್ಕೆ ಸೇರಿಸಿದ್ದರು. ಆದರೆ ಬರಾಕ್ ಜಿಲ್ಲೆಯ ಯುವಕರಿಗೆ ತರಕಾರಿ ಪ್ಯಾಕಿಂಗ್ ಬದಲಾಗಿ ಒಂಟಿ ಕಾಯುವ ಕೆಲಸ ನೀಡಿದ್ದ.

ಅಲ್ಲದೇ ಪಾಸ್‌ಪೋರ್ಟ್ ಕಸಿದುಕೊಂಡು 32 ಸಾವಿರ ರೂ. ಅಂದರೆ 120 ದಿನಾರ ಮಾಸಿಕ ಸಂಬಳ ಎಂದು ಹೇಳಿ, ಅರ್ಧ ಸಂಬಳವನ್ನು ನೀಡಿರಲಿಲ್ಲ. ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಮೊಬೈಲ್ ಬಳಕೆಗೂ ಅವಕಾಶ ನೀಡುತ್ತಿರಲಿಲ್ಲ.

ಇದರಿಂದ ನೊಂದ ಯುವಕರು ರಾತ್ರಿ ವೇಳೆ ಕುಟುಂಬದ ಸದಸ್ಯರಿಗೆ ಕರೆ ಮಾಡಿ, ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಈ ಹಂತದಲ್ಲಿ ಟ್ಯಾಕ್ಸಿ ಚಾಲಕನ ನೆರವಿನಿಂದ ಭಾರತೀಯ ರಾಯಭಾರ ಕಚೇರಿಗೆ ಆಗಮಿಸಿ, ಒಂದು ವಾರ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಸರೆ ಪಡೆದುದ್ದರು.

ತಾವಿದ್ದ ಸ್ಥಳದಲ್ಲಿ ಬೇರೆ ಬೇರೆ ಮಾಲೀಕರ ಬಳಿ ಭಾರತೀಯರು 70-80 ಜನ ಇದ್ದಾರೆ. ಭಾರತೀಯ ರಾಯಭಾರ ಕಚೇರಿಯ ಸೋಮು ಹಾಗೂ ಬಾಬು ಎಂಬವರ ನೆರವು ಪಡೆದೆವು ಎಂದು ನೊಂದ ಯವಕರು ವಿವರಿಸಿದ್ದಾರೆ.

ನಮ್ಮದೇ ಗ್ರಾಮದ ಮಲಕಪ್ಪ ಸಂಗಮೇಶ ಹಾಗೂ ವಿಠ್ಠಲ ಜಕನೂರು ಎಂಬ ಇನ್ನೂ ಇಬ್ಬರು ಯುವಕರು ಅಲ್ಲಿದ್ದು, ಭಾರತಕ್ಕೆ ಮರಳು ಮುಂದಾಗಿದ್ದಾರೆ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರು, ಮಾಜಿ ಸದಸ್ಯ ಮಲ್ಲು ಕನ್ಬೂರು ಇವರ ಮೂಲಕ ಕುಟುಂಬ ಸದಸ್ಯರು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಇವರ ಮೂಲಕ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಮೂಲಕ ತವರಿಗೆ ಮರಳತಮ್ಮನ್ನು ವಿವರಿಸಿದ್ದಾರೆ.

ಕುವೈತ್ ದೇಶದಲ್ಲಿ ಹಿಂಸೆ ಅನುಭವಿಸುತ್ತಿದ್ದ ತಮ್ಮನ್ನು ಭಾರತಕ್ಕೆ ಮರಳಿ ಕರೆತರುವಲ್ಲಿ ಸಹಾಯ ಹಸ್ತ ಚಾಚಿದ ಪ್ರಧಾನಿ ನರೇಂದ್ರ ಮೋದಿ, ಸಂಸದ ರಮೇಶ ಜಿಗಜಿಣಗಿ, ರಾಯಭಾರ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.