Law: ನ್ಯಾಯಾಂಗದ ಮೂಲಕ ವಿಚ್ಛೇದನ, ಸಹ ಜೀವನ ನೋಂದಣಿ ಕಡ್ಡಾಯ?
ಉತ್ತರಾಖಂಡ ಸಮಾನ ನಾಗರಿಕ ಸಂಹಿತೆ ಮಸೂದೆ ಅಂಶ ಬಹಿರಂಗ
Team Udayavani, Jan 28, 2024, 1:03 AM IST
ಹೊಸದಿಲ್ಲಿ: ನ್ಯಾಯಾಂಗ ಪ್ರಕ್ರಿಯೆ ಮೂಲಕವೇ ವಿಚ್ಛೇದನಕ್ಕೆ ಅವಕಾಶ, ಪೂರ್ವ ಷರತ್ತಿನೊಂದಿಗೆ ಮರುವಿವಾಹಕ್ಕೆ ನಿರ್ಬಂಧ, ಸಹ ಜೀವನ (ಲಿವ್ ಇನ್ ರಿಲೇಶನ್ಶಿಪ್) ನೋಂದಣಿ ಕಡ್ಡಾಯ…
ಉತ್ತರಾಖಂಡ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯಲ್ಲಿ ಇರುವ ಅಂಶಗಳಿವು. ಇದರ ಜತೆಗೆ, ಎಲ್ಲ ಧರ್ಮಗಳಲ್ಲೂ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕಲ್ಪಿಸುವ ಅಂಶವೂ ಇದರಲ್ಲಿದೆ ಎಂದು ಮೂಲಗಳು ತಿಳಿಸಿವೆ. ಫೆ.5ರಂದು ಉತ್ತರಾಖಂಡ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಈ ವೇಳೆ, ಮಸೂದೆ ಮಂಡಿಸಿ ಅಂಗೀಕರಿಸಲಾಗುತ್ತದೆ.
ಹೆಣ್ಣುಮಕ್ಕಳ ವಿವಾಹದ ವಯೋಮಾನವನ್ನು ಈಗಿರುವ 18ರಿಂದ 21ಕ್ಕೇರಿಸುವ ಪ್ರಸ್ತಾವವನ್ನು ಸಂಹಿತೆಯಲ್ಲಿ ಸೇರಿಸಲಾಗಿಲ್ಲ. “ಎರಡು ಮಕ್ಕಳ ನೀತಿ’ ಕುರಿತ ವಿಚಾರವೂ ಯುಸಿಸಿಯಲ್ಲಿ ಇಲ್ಲ. ಮದುವೆಯಿಂದ ಹಿಡಿದು ಸಹ ಜೀವನದವರೆಗೆ ಮಹಿಳೆಯರಿಗೆ ಎಲ್ಲ ಹಂತಗಳಲ್ಲೂ ಸಮಾನ ಹಕ್ಕುಗಳು ದೊರೆಯಬೇಕು ಮತ್ತು ದೌರ್ಜನ್ಯ, ಬ್ಲ್ಯಾಕ್ವೆುಲ್. ಅಪರಾಧ, ಅನ್ಯಾಯದಿಂದ ಆಕೆಯನ್ನು ರಕ್ಷಿಸಬೇಕು ಎಂಬ ಉದ್ದೇಶವನ್ನು ಯುಸಿಸಿ ಹೊಂದಿದೆ. ಇದೇ ಕಾರಣಕ್ಕೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ವಿಚ್ಛೇದನ ಮತ್ತು ಲಿವ್ ಇನ್ ಸಂಬಂಧದ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾನೂನು ಮೂಲಕವೇ ವಿಚ್ಛೇದನ ಕಡ್ಡಾಯವಾಗುವ ಕಾರಣ, ಯುಸಿಸಿ ಜಾರಿಗೆ ಬಂದ ಬಳಿಕ ಇಸ್ಲಾಂ ಧರ್ಮದಲ್ಲಿರುವ ಇದ್ದತ್(ಪತ್ನಿಯು ತನ್ನ ಪತಿಯ ಮರಣಾನಂತರ ಅಥವಾ ವಿಚ್ಛೇದನದ ಅನಂತರ ಮರುಮದುವೆಯಾಗುವವರೆಗೆ ಕಾಯಬೇಕಾದ ನಿರ್ದಿಷ್ಟ ಅವಧಿ) ಮತ್ತು ಖುಲಾ(ಪತ್ನಿಯೇ ಪತಿಗೆ ವಿಚ್ಛೇದನ ನೀಡುವ ಕ್ರಮ) ಪದ್ಧತಿ ನಿಷೇಧಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal ಕೋರ್ಟ್ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
Supreme court ಯೂಟ್ಯೂಬ್ ಲೈವ್ ಸ್ಟ್ರೀಮ್ ಚಾನೆಲ್ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.