![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
Rajasthan: ಕೈ, ಕಮಲ: ಸಿಂಧ್ಯಾ ಬೆಂಬಲಿಗರಿಗೆ ಮನ್ನಣೆ
Team Udayavani, Oct 25, 2023, 11:18 PM IST
![JYOTHIRADITHYA SINDHIYA](https://www.udayavani.com/wp-content/uploads/2023/10/JYOTHIRADITHYA-SINDHIYA-620x382.jpg)
ಚುನಾವಣೆ ಹೊಸ್ತಿಲಿನಲ್ಲಿರುವ ಮಧ್ಯ ಪ್ರದೇಶದಲ್ಲಿ ಸಚಿವ ಜೋತಿ ರಾಧಿತ್ಯ ಸಿಂಧ್ಯಾ ಬೆಂಬಲಿಗರಿಗೆ ಹೆಚ್ಚಿನ ಪ್ರಮಾಣ ದಲ್ಲಿ ಟಿಕೆಟ್ಗಳು ಸಿಗುತ್ತಿವೆ. ನ.17ರಂದು ಚುನಾವಣೆ ಯಲ್ಲಿ ಸಿಂಧ್ಯಾ ಅವರ 25 ಕಟ್ಟಾ ಬೆಂಬಲಿಗರ ಪೈಕಿ 18 ಮಂದಿಯನ್ನು ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ಸೇರ್ಪಡೆಗೊಳಿಸಿದೆ.
ಈ ಪೈಕಿ 10 ಮಂದಿ ಹಾಲಿ ಸಚಿವರುಗಳಾದ ಪ್ರದ್ಯುಮ್ನ ಸಿಂಗ್ ತೋಮರ್, ತುಳಸಿ ಸಿಲಾವತ್, ರಾಜ ವರ್ಧನ್ ಸಿಂಗ್, ಪ್ರಭುರಾಮ್ ಚೌಧರಿ, ಗೋವಿಂದ್ ಸಿಂಗ್ ರಜಪೂತ್, ಬಿಸಾಹು ಲಾಲ್ ಸಿಂಗ್, ಹರ್ದೀಪ್ ಸಿಂಗ್ ದಾಂಗ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರದ್ಯುಮ್ನ ಸಿಂಗ್ ಲೋಧಿ, ಸುರೇಶ್ ಧಕಡ್ ಅವರ ಹೆಸರಿದೆ. ಅಲ್ಲದೇ ಹಾಲಿ 5 ಮಂದಿ ಶಾಸಕರನ್ನೂ ಮತ್ತೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಘೋಷಿಸಲಾಗಿದೆ. ವಿಶೇಷವೆಂದರೆ ಈ ಹಿಂದೆ 2020ರ ಚುನಾವಣೆಯಲ್ಲಿ ಸೋತಿದ್ದಂಥ ಸಿಂಧ್ಯಾ ಅವರ 3 ಬೆಂಬಲಿಗರಿಗೂ ಮತ್ತೆ ಬಿಜೆಪಿ ಸ್ಪರ್ಧೆಗೆ ಅವಕಾಶ ನೀಡಿದೆ. ಈ ಮೂಲಕ ಬಿಜೆಪಿಯ ಹಳೆಯ ಸದಸ್ಯರು ಹಾಗೂ ಸಿಂಧ್ಯಾ ಬೆಂಬಲಿಗರ ಬಣದ ನಡುವೆ ಶೀತಲ ಸಮರ ಮತ್ತಷ್ಟು ಹೆಚ್ಚಿದೆ ಎನ್ನಲಾಗಿದೆ. ಆದಾಗ್ಯೂ ಸಿಂಧ್ಯಾ ಬೆಂಬಲಿಗರಿಗೆ ಬಿಜೆಪಿ ಮಾನ್ಯತೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಜೋತಿರಾಧಿತ್ಯ ಅವರ ವರ್ಚಸ್ಸು ಹೆಚ್ಚಿಸಿದಂತಾಗಿದೆ. ಇತ್ತ ಸಿಂಧ್ಯಾರನ್ನು ತೊರೆದು ಮತ್ತೆ ಕಾಂಗ್ರೆಸ್ ಸೇರ್ಪ ಡೆಗೊಂಡ ಮಾಜಿ ಬೆಂಬಲಿಗರಿಗೂ ಕಾಂಗ್ರೆಸ್ ಮಾನ್ಯತೆ ನೀಡಿರುವುದು ಕೈ ಪಾಳಯದಲ್ಲೂ ಕಿಚ್ಚು ಹೊತ್ತಿಸಿದೆ ಎಂಬ ಅಭಿಪ್ರಾಯಗಳು ಮೂಡಿದೆ.
ಟಾಪ್ ನ್ಯೂಸ್
![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![suicide](https://www.udayavani.com/wp-content/uploads/2024/07/suicide-1-150x84.jpg)
Chhattisgarh; ಎರಡು ಪ್ರತ್ಯೇಕ ಅವಘಡದಲ್ಲಿ ಬಾವಿಗೆ ಬಿದ್ದು 9 ಮಂದಿ ಮೃತ್ಯು
![Sudhamurthy](https://www.udayavani.com/wp-content/uploads/2024/07/Sudhamurthy-1-150x90.jpg)
Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?
![ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್](https://www.udayavani.com/wp-content/uploads/2024/07/lalu-150x83.jpg)
RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್
![1-aaaa](https://www.udayavani.com/wp-content/uploads/2024/07/1-aaaa-150x84.jpg)
Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ
![pune](https://www.udayavani.com/wp-content/uploads/2024/07/pune-150x83.jpg)
Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.