![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 11, 2022, 7:35 AM IST
“ಡಬಲ್ ಎಂಜಿನ್ ಸರ್ಕಾರ’! - ಪಂಚರಾಜ್ಯ ಚುನಾವಣೆಗಳ ಪ್ರತಿಯೊಂದು ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಿಸಿದ ಮಂತ್ರ ಇದೇ ಆಗಿತ್ತು. ಕೇಂದ್ರದಲ್ಲೂ, ರಾಜ್ಯದಲ್ಲೂ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿ ಸುಲಭ ಎಂಬ ಗುಟ್ಟನ್ನು ಜನತೆಗೆ ಮನದಟ್ಟು ಮಾಡಿಸುವಲ್ಲಿ ಬಿಜೆಪಿ ಬಹುತೇಕ ಸಫಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮಣಿಪುರದ ವಿವಿಧೆಡೆ ನಡೆಸಿದ ಚುನಾವಣಾ ರ್ಯಾಲಿಗಳಲ್ಲಿ, “ಮಣಿಪುರದಲ್ಲಿ ಶಾಂತಿ ನೆಲೆಸಲು ಡಬಲ್ ಎಂಜಿನ್ ಸರ್ಕಾರವೇ ಕಾರಣ’ ಎಂದು ಪ್ರತಿಪಾದಿಸಿದ್ದರು. ಇದೇ ಮಂತ್ರವನ್ನು ಆಯಾ ಪ್ರದೇಶಕ್ಕೆ ತಕ್ಕಂತೆ ಮಿಕ್ಕ ರಾಜ್ಯಗಳಲ್ಲೂ ಪುನರುಚ್ಚರಿಸಿದ್ದರು.
ಮುಖ್ಯವಾಗಿ ಕೇಂದ್ರದ ಎನ್ಡಿಎ ಸರ್ಕಾರವು “ಉತ್ತರ ಪ್ರದೇಶವನ್ನು ಡಬಲ್ ಎಂಜಿನ್ ಸರ್ಕಾರದ ಪ್ರಯೋಗಶಾಲೆ’ ಎಂಬಂತೆ ಬಿಂಬಿಸಿತ್ತು. ಅದರಲ್ಲೂ ವಾರಾಣಸಿಯನ್ನು ದೇಶಕ್ಕೆ ಮಾದರಿ ಎಂದು ತೋರ್ಪಡಿಸುವಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಕೇಂದ್ರ ಸರ್ಕಾರದ ಜತೆಗೂಡಿ ಸಿಎಂ ಯೋಗಿ ಆದಿತ್ಯನಾಥರು ಕೈಗೊಂಡ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಮತ್ತೆ ಮತ್ತೆ ಕೊಂಡಾಡಿದ್ದರು.
ಮುಂಬರುವ ರಾಜ್ಯಗಳ ಚುನಾವಣೆಗಳಲ್ಲೂ ಬಿಜೆಪಿ ಇದೇ ಮಂತ್ರವನ್ನು ಪಠಿಸುವ ಸಾಧ್ಯತೆ ಇದೆ ಎಂದೇ ಅರ್ಥೈಸಲಾಗುತ್ತಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಒಂದೇ ಸರ್ಕಾರ ಇದ್ದಾಗ ನೀತಿ-ನಿಯಮಗಳ ಸಡಿಲಿಕೆ, ಉದ್ಯಮ- ಕೈಗಾರಿಕೆಗಳ ಪ್ರಗತಿಗೆ ಶರವೇಗ ಸಿಗುತ್ತದೆ ಎಂದೇ ಬಿಜೆಪಿ ಬಿಂಬಿಸುವ ಸಾಧ್ಯತೆ ಇದೆ.
Pariksha Pe Charcha: ಸಾರ್ಟ್ಫೋನ್ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.