![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 13, 2020, 4:14 PM IST
ಕಾರ್ಕಳ: ಎ. 22ರಂದು ತಮಿಳುನಾಡಿನಿಂದ ಸಿಮೆಂಟ್ ಹೇರಿಕೊಂಡು ಕಾರ್ಕಳ ನಗರದ ಹಾರ್ಡ್ವೇರ್ ಶಾಪ್ಗೆ ಬಂದಿರುವ ಲಾರಿ ಚಾಲಕನಿಗೆ ಮೇ 9ರಂದು ಚೆನ್ನೈಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿರುವ ಹಾರ್ಡ್ವೇರ್ ಶಾಪ್ ಮಾಲಕ, ಸಿಬ್ಬಂದಿ ಗಂಟಲು ದ್ರವ ಪರೀಕ್ಷೆಗೊಳಪಡಿಸಿದ್ದು, ನೆಗೆಟಿವ್ ವರದಿಯಾಗಿದೆ.
ಕಾರ್ಕಳ ನಗರದ ಹಾರ್ಡ್ವೇರ್ ಶಾಪ್ಗೆ ಸಿಮೆಂಟ್ ತಂದಿರುವ ಲಾರಿ ಚಾಲಕನಿಗೆ ಕೋವಿಡ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಕಳದ ಜನತೆ ಬೆಚ್ಚಿಬೀಳುವಂತಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗೊಂದಲಗಳು ಹರಿದಾಡುತ್ತಿದ್ದವು. ಇದೀಗ ಹಾರ್ಡ್ವೇರ್ ಮಾಲಕ, ಅವರ ಪತ್ನಿ, ಪುತ್ರ ಹಾಗೂ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯಾಗಿರುವುದರಿಂದ ಜನರು ನಿರಾಳರಾಗುವಂತಾಗಿದೆ.
You seem to have an Ad Blocker on.
To continue reading, please turn it off or whitelist Udayavani.