Karkala: ಭಾರೀ ಗಾಳಿ-ಮಳೆಯಿಂದ ಹಲವೆಡೆ ಹಾನಿ
Team Udayavani, Jul 23, 2024, 12:46 AM IST
ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರಗಳು ಬಿದ್ದು ಹಾನಿಯಾಗಿದೆ.
ನಗರದ ಬಸ್ ನಿಲ್ದಾಣ ಸಮೀಪದ ಮನ್ನಾರ ದೇವಸ್ಥಾನದ ಪಕ್ಕ ಮರಬಿದದು ರಿಕ್ಷಾ ಹಾಗೂ ಬೈಕ್ ಜಖಂಗೊಂಡಿದೆ. ನಿಟ್ಟೆ ಗ್ರಾಮದ ಬೇರಂದೊಟ್ಟು ಎಂಬಲ್ಲಿ ಪ್ರೇಮ ಶೆಟ್ಟಿ ಅವರ ಮನೆಗೆ ಮರ ಬಿದ್ದು 30 ಸಾವಿರ ರೂ. ನಷ್ಟ ಆಗಿದೆ. ಚೇತನಹಳ್ಳಿಯಲ್ಲಿ ಸುಜಾತ ಅವರ ಮನೆಗೆ ಮರಬಿದ್ದು 20 ಸಾವಿರ ರೂ.ನಷ್ಟ ಆಗಿದೆ. ವಿಷ್ಣಮೂರ್ತಿ ನಗರ ಕಲ್ಲಂಬಾಡಿ ಪದವಿನಲ್ಲಿ ಸಂಜೀವ ಅವರ ಮನೆಯ ಹೆಂಚು ಹಾರಿ ಹೋಗಿ 10 ಸಾವಿರ ರೂ. ನಷ್ಟವಾಗಿದೆ.
ಮಾಣಿಕ್ಯಪಾದೆಯಲ್ಲಿ ಸೋಣ ಅವರ ಮನೆಯ ಗೋಡೆ ಕುಸಿದು ಬಿದ್ದು 30 ಸಾವಿರ ರೂ. ನಷ್ಟವಾಗಿದೆ. ಇರ್ವತ್ತೂರು ಗ್ರಾಮದ ನಿವಾಸಿ ಆನಂದ ಶೆಟ್ಟಿ ಅವರ ಮನೆಗೆ ಅಡಿಕೆ ಮರಬಿದ್ದು ಹಾನಿಯಾಗಿದೆ. ಕಡ್ತಲದ ಸ.ಕಿ.ಪ್ರಾ ಶಾಲೆಯ ಕಟ್ಟಡದ ಹೆಂಚುಗಳು ಹಾರಿಹೋಗಿವೆ. ಕಾರ್ಕಳ ಕಿಂಗ್ಸ್ ಬಾರ್ ಬಳಿ ಸುಧಾ ಅವರ ಮನೆಗೆ ಮರಬಿದ್ದು 1 ಲಕ್ಷ ರೂ. ನಷ್ಟವಾಗಿದೆ.
ಅನಂತಶಯನ ಬಳಿ ಮರಬಿದ್ದು ಸ್ಕೂಟರೊಂದು ಜಖಂಗೊಂಡಿದೆ. ನೀರೆ ಗ್ರಾಮದಲ್ಲಿ ಮೀನಿನ ಅಂಗಡಿಗೆ ಮರ ಬಿದ್ದು ಹಾನಿಯಾಗಿದೆ. ಕೋಟಿ ಚೆನ್ನಯ ಥೀಂ ಪಾರ್ಕ್ ಬಳಿ ಎರಡು ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಟ್ರಾನ್ಸ್ಫಾರ್ಮರ್ನಲ್ಲಿ ದೋಷ ಕಾಣಿಸಿಕೊಂಡಿದೆ. ಪಕ್ಕದಲ್ಲಿರುವ ಕಾರ್ಮಿಕರ ಶೆಡ್ ಸಂಪೂರ್ಣ ನೆಲಸಮವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು
Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು
Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ
Udupi:ಕರಾವಳಿ ನಿರ್ಲಕ್ಷ್ಯ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ: ಜನಪ್ರತಿನಿಧಿಗಳ ಎಚ್ಚರಿಕೆ
Udupi: ಬೆಡ್ ಶೀಟ್ ಮಾರುವ ನೆಪದಲ್ಲಿ ಅಂಬಲಪಾಡಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.