Kasaragod: ಬೈಕ್ – ಸ್ಕೂಟರ್ ಢಿಕ್ಕಿ: ಯುವಕನ ಸಾವು
Team Udayavani, Oct 10, 2024, 1:21 AM IST
ಕಾಸರಗೋಡು: ರಾ.ಹೆದ್ದಾರಿ ಮೈಲಾಟಿ ಪೆಟ್ರೋಲ್ ಬಂಕ್ ಸಮೀಪ ಬೈಕ್ ಹಾಗು ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಪೊಯಿನಾಚಿ ಮೊಟ್ಟದ ರಾಜೇಂದ್ರನ್ ಅವರ ಪುತ್ರ ಮಣಿಕಂಠನ್(24) ಸಾವಿಗೀಡಾದ ಘಟನೆ ನಡೆದಿದೆ.
ಅ.8 ರಂದು ರಾತ್ರಿ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಪ್ರಜ್ವಲ್(23) ಗಾಯಗೊಂಡಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷಿಕ ನಾಪತ್ತೆ
ಉಪ್ಪಳ: ಮೀಂಜ ಪಂಚಾಯತ್ ಚಾರ್ಲ ದೇರಂಬಳ ನಿವಾಸಿ ದಿ|ಪದ್ಮನಾಭ ಶೆಟ್ಟಿ ಅವರ ಪುತ್ರ ಕೃಷಿಕ ಹರೀಶ್ ಶೆಟ್ಟಿ(43) ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.
ಅ.7 ರಿಂದ ನಾಪತ್ತೆಯಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ಸೈಬರ್ ಸೆಲ್ನ ನೆರವು ಪಡೆದು ತನಿಖೆ ನಡೆಸಿದಾಗ ಮೊಬೈಲ್ ಫೋನ್ ಮಡಿಕೇರಿಯಲ್ಲಿ ಕಾರ್ಯಾಚರಿಸಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಮಡಿಕೇರಿಗೆ ತೆರಳಿ ಶೋಧ ನಡೆಸುತ್ತಿದ್ದಾರೆ.
ಆರೋಪಿ ಆತ್ಮಹತ್ಯೆ
ಕುಂಬಳೆ: ಯುವಕನನ್ನು ಕೊಲೆಗೈದು ಮೃತದೇಹವನ್ನು ಪಾಳು ಬಾವಿಗೆಸೆದ ಪ್ರಕರಣದ ಆರೋಪಿ ಮುನವರ್ ಖಾಸಿಂ(28) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತೋಡಿಗೆ ಬಿದ್ದು ಸಾವು
ಕಾಸರಗೋಡು: ಕಳ್ಳಾರ್ ಚುಳ್ಳಿಕ್ಕರ ಎರುಮಪ್ಪಳ್ಳದ ಜೋಸೆಫ್ (99) ತೋಡಿಗೆ ಬಿದ್ದು ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.