![Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ](https://www.udayavani.com/wp-content/uploads/2025/02/delta-plane-415x234.jpg)
![Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ](https://www.udayavani.com/wp-content/uploads/2025/02/delta-plane-415x234.jpg)
Team Udayavani, Jan 30, 2025, 2:18 AM IST
ಕಾಪು: ಮಕ್ಕಳ ಸ್ಕಾಲರ್ಶಿಪ್ನ ಬಗ್ಗೆ ದಾಖಲಾತಿ ಪಡೆಯಲು ಸೇವಾ ಸಿಂಧು ಕೇಂದ್ರಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಉದ್ಯಾವರದಲ್ಲಿ ನಡೆದಿದೆ.
ಉದ್ಯಾವರ ನಿವಾಸಿ ಇಮಾಮ್ ಸಾಹೇಬ್ ಮುಲ್ಲಾ (40) ಹಲ್ಲೆಗೊಳಗಾದ ವ್ಯಕ್ತಿ. ಅವರು ಜ. 28ರಂದು ಸಂಜೆ ತನ್ನ ಪತ್ನಿ ಶೈನಾಜ್ ಬಾನು ಜತೆ ತಮ್ಮ ಮಕ್ಕಳ ಸ್ಕಾಲರ್ಶಿಪ್ ನ ಬಗ್ಗೆ ದಾಖಲಾತಿ ಪಡೆಯಲು ಉದ್ಯಾವರ ಸೇವಾ ಸಿಂಧು ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಪರಿಚಯದ ಜಾವೇದ್ ಮತ್ತು ಸಿದ್ದು ಕೂಡಾ ಅಲ್ಲಿಗೆ ಬಂದಿದ್ದ ವೇಳೆ ತಮಾಷೆಗೆಂದು ನಡೆದ ಜಗಳ ವಿಪರೀತಕ್ಕೆ ತೆರಳಿತ್ತು.
ಇಮಾಮ್ ಅವರು ಅಂಗಡಿಯ ಹೊರಗಡೆ ಬಂದಾಗ ಜಾವೆದ್ ಮತ್ತು ಸಿದ್ದು ಹೊಡೆದಿದ್ದರು. ಬಳಿಕ ಅಲ್ಲಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೋಳಾರಗುಡ್ಡೆ ತಲುಪಿದಾಗ ಜಾವೆದ್, ಸಿದ್ದು ಹಾಗೂ ಜಾವೇದ್ನ ಸಂಬಂಧಿಕನೋರ್ವ ಹಲ್ಲೆ ನಡೆಸಿ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಉದ್ಯಾವರದ ಸಂಪಿಗೆ ನಗರದಲ್ಲಿರುವ ಜಾವೇದ್ ಮನೆಗೆ ವಿಷಯ ತಿಳಿಸಲು ಹೋದಾಗ ಜಾವೇದ್, ಸಲೀಂ ಹಾಗೂ ಜಾವೇದ್ನ ಸಂಬಂಧಿಕರು ಮೂವರು ಮಹಿಳೆಯರು ಮತ್ತೆ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಗಾಯಾಳು ಇಮಾಮ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ
Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್ಪಾಲ್
ಸಿಎಸ್ಟಿ – ಮಂಗಳೂರು ಎಕ್ಸ್ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್ಗೇ ಸಚಿವ ಕೆ.ಎನ್.ರಾಜಣ್ಣ ಸಡ್ಡು!
ನಾವು ಕಾನ್ವೆಂಟ್ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು
Tragedy: ಡೆ *ತ್ನೋಟ್ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!
You seem to have an Ad Blocker on.
To continue reading, please turn it off or whitelist Udayavani.