Kerala: ಉಪಕುಲಪತಿ ಮರುನೇಮಕ ವಿವಾದ ಸುಪ್ರೀಂನಲ್ಲಿ ಕೇರಳ ಸರಕಾರಕ್ಕೆ ಹಿನ್ನಡೆ
Team Udayavani, Nov 30, 2023, 11:42 PM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್ನಲ್ಲಿ ಕೇರಳ ಸರಕಾರಕ್ಕೆ ಅತೀದೊಡ್ಡ ಹಿನ್ನಡೆಯಾಗಿದೆ. ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಯಾಗಿ ಗೋಪಿನಾಥ್ ರವೀಂದ್ರನ್ ಅವರನ್ನು ಮರುನೇಮಕ ಮಾಡಿ ಕೇರಳ ಸರಕಾರ ಹೊರಡಿಸಿದ್ದ ಆದೇಶ ವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರ ಬೀಳು ತ್ತಿದ್ದಂತೆ ಕೇರಳದಲ್ಲಿ ರಾಜ ಕೀಯ ಕೆಸರೆರಚಾಟ ಆರಂಭವಾಗಿದೆ.
ರವೀಂದ್ರನ್ ನೇಮಕ ಕುರಿತ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿರ್ಧಾ ರದಲ್ಲೂ ತಪ್ಪಾಗಿದೆ ಎಂದು ಹೇಳಿರುವ ಮುಖ್ಯ ನ್ಯಾ| ಡಿ.ವೈ.ಚಂದ್ರ ಚೂಡ್ ನೇತೃತ್ವದ ನ್ಯಾಯಪೀಠ, “ರಾಜ್ಯ ಪಾಲರು ಉಪಕುಲಪತಿಯನ್ನು ಮರು ನೇಮಕ ಮಾಡಿಕೊಳ್ಳಲು ಶಾಸನ ಬದ್ಧ ಅಧಿಕಾರವನ್ನು ಗಾಳಿಗೆ ತೂರಿದ್ದಾರೆ’ ಎಂದೂ ಅಭಿ ಪ್ರಾಯ ಪಟ್ಟಿದೆ. ಈ ಮರುನೇಮಕವು ಬಾಹ್ಯ ಪರಿಗಣನೆಯಿಂದ ಅಂದರೆ ರಾಜ್ಯ ಸರಕಾರದ ಅನಗತ್ಯ ಹಸ್ತಕ್ಷೇಪದಿಂದ ಪ್ರಭಾವಿತ ಗೊಂಡಿದೆ ಎಂದು ಹೇಳಿದ ನ್ಯಾಯಪೀಠ, ಮರುನೇಮಕವನ್ನು ಎತ್ತಿ ಹಿಡಿದು ಕೇರಳ ಹೈಕೋರ್ಟ್ ನೀಡಿದ್ದ ಎರಡು ತೀರ್ಪನ್ನೂ ವಜಾ ಮಾಡಿದೆ.
2017ರಲ್ಲಿ ರವೀಂದ್ರನ್ರನ್ನು ಉಪಕುಲಪತಿಯಾಗಿ ನೇಮಕ ಮಾಡಲಾಗಿತ್ತು. 2022ರಲ್ಲಿ ಅವರ ಸೇವಾವಧಿ ಪೂರ್ಣ ಗೊಂಡಿತ್ತು. ಉತ್ತರಾಧಿಕಾರಿ ಆಯ್ಕೆಗೆ ಅಧಿಸೂಚ ನೆಯೂ ಹೊರಬಿದ್ದಿತ್ತು. ಆದರೆ ಏಕಾಏಕಿ ಈ ಅಧಿಸೂಚನೆ ವಾಪಸ್ ಪಡೆದು, 4 ವರ್ಷಗಳ ಅವಧಿಗೆ ರವೀಂದ್ರನ್ರನ್ನೇ ಮರುನೇಮಕ ಮಾಡಲಾಯಿತು.
ನನ್ನ ಮೇಲೆ ಒತ್ತಡ: ರಾಜ್ಯಪಾಲ
ತೀರ್ಪು ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, “ಈ ಕೆಲಸಕ್ಕೆ ಮುಖ್ಯಮಂತ್ರಿಗಳನ್ನು ನನ್ನನ್ನು ಬಳಸಿಕೊಂಡರು. ಸಿಎಂ ಪಿಣರಾಯಿ ವಿಜಯನ್ ಅವರ ಒತ್ತಡ ತಂತ್ರದಿಂದಾಗಿ ನಾನು ಮರುನೇಮಕ ಮಾಡಿ ಕೊಳ್ಳಬೇಕಾ ಯಿತು’ ಎಂದು ಗಂಭೀರ ಆರೋಪ ಮಾಡಿ ದ್ದಾರೆ. ಅಲ್ಲದೇ “ಶಿಕ್ಷಣ ಸಚಿವರನ್ನು ದೂಷಿಸುವು ದರಲ್ಲಿ ಅರ್ಥವಿಲ್ಲ. ನನ್ನ ಕಾರ್ಯಾಲಯಕ್ಕೆ ಬಂದಿದ್ದು ಸಚಿವರಲ್ಲ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಂದುಕೊಂಡ ವ್ಯಕ್ತಿಯೊಬ್ಬರು ಬಂದು ನನ್ನ ಮೇಲೆ ಒತ್ತಡ ಹೇರಿ, ಪ್ರಭಾವ ಬೀರಲು ಯತ್ನಿಸಿದರು’ ಎಂದೂ ಹೇಳಿದ್ದಾರೆ. ತೀರ್ಪಿನ ಬಗ್ಗೆ ಸಿಎಂ ಪಿಣರಾಯಿ ಅಥವಾ ಕೇರಳ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.