ಚಲನಶೀಲ ಅರಿವು ನಮ್ಮ ಶಕ್ತಿ ಮತ್ತು ಸಾಧ್ಯತೆ


Team Udayavani, Oct 12, 2020, 3:51 PM IST

ಚಲನಶೀಲ ಅರಿವು ನಮ್ಮ ಶಕ್ತಿ ಮತ್ತು ಸಾಧ್ಯತೆ

ಈ ಭೂಮಿಯ ಮೇಲೆ ಏಕಕೋಶ ಜೀವಿಯಾಗಿರುವ ಅಮೀಬಾ ಆಗಿರಲಿ; ಕೋಟ್ಯಂತರ ಜೀವಕೋಶಗಳನ್ನು ಹೊಂದಿ ರುವ ನಾವಾಗಲಿ- ಜೀವಸ್ವರೂಪವಾಗಿ ಒಂದೇ. ಎಲ್ಲರಲ್ಲೂ ಎಲ್ಲದರಲ್ಲೂ ಇರುವ ಜೀವ ಒಂದೇ. ಅದು ಸಮಾನವಾದುದು. ಅದು ಬದುಕನ್ನು ಮುಂದುವರಿಸುವುದಕ್ಕಾಗಿ ಸದಾ ಹೋರಾಡುತ್ತಿರುತ್ತದೆ. ಅಮೀಬಾ ದಿಂದ ಹಿಡಿದು ಮನುಷ್ಯನ ವರೆಗೆ ಬದುಕು ಸಾಧ್ಯವಿರುವ ಈ ಭೂಗ್ರಹದ ಮೇಲಿನ ಸಜೀವಿಗಳನ್ನೆಲ್ಲ ಇಡಿಯಾಗಿ ಕಲ್ಪಿಸಿಕೊಳ್ಳಿ – ಎಲ್ಲವೂ ಪ್ರಜ್ವಲಿಸುತ್ತಿರುವ ಜೀವದ ವಿವಿಧ ಸ್ವರೂಪಗಳೇ.

ಆದರೆ ಒಂದು ವಿಚಾರವನ್ನು ಗಮನಿಸ ಬಹುದು – ಜೀವಸ್ವರೂಪವು ಸರಳವಾಗಿ ದ್ದಷ್ಟು ಸೃಷ್ಟಿಯ ಜತೆಗೆ ಹೆಚ್ಚು ಸಾಂಗತ್ಯ ದಲ್ಲಿರುತ್ತದೆ. ಅಮೀಬಾವನ್ನೇ ತೆಗೆದು ಕೊಳ್ಳೋಣ. ಅದು ನೀರಿನಲ್ಲಿ ತನ್ನಷ್ಟಕ್ಕೆ ತಾನು ತೇಲಾಡುತ್ತಿರುತ್ತದೆ. “ನಾನು ಅಮೀಬಾ’ ಎಂದು ಹೇಳಿಕೊಳ್ಳುವುದಿಲ್ಲ. ಅದು ನೀರಿನಲ್ಲಿದೆ ಎಂಬುದೂ ಯಾರಿಗೂ ಗೊತ್ತಾಗಲಿಕ್ಕಿಲ್ಲ – ಅಷ್ಟರ ಮಟ್ಟಿಗೆ ಅದು ತನ್ನಷ್ಟಕ್ಕೆ ತಾನಿರುತ್ತದೆ, ಇರುವಷ್ಟು ದಿನ ಅಸ್ತಿತ್ವಕ್ಕಾಗಿ ಹೋರಾಡು ವುದು, ಸಂತಾನ ವೃದ್ಧಿ ಮತ್ತು ಜೀವನಾವಧಿ ಪೂರ್ಣ ಗೊಂಡಾಗ ಸಾವು – ಇಷ್ಟೇ. ಅಮೀಬಾ ಮಾತ್ರ ಅಲ್ಲ; ಅದೇ ನೀರಿನಲ್ಲಿ ಇರುವ ಕೋಟ್ಯಂತರ ಇತರ ಸೂಕ್ಷ್ಮಜೀವಿಗಳ ಕತೆಯೂ ಹೀಗೆಯೇ.

ಆದರೆ ಅವುಗಳಿಗೆ ಅವುಗಳದೇ ಆದ ಅಸ್ತಿತ್ವ ಇಲ್ಲ ಎಂದು ನಾವು ಹೇಳಲಾಗದು. ಅವುಗಳದ್ದೇ ಆದ ಸಮೂಹ ಇರುತ್ತದೆ, ಒಂದು ಇನ್ನೊಂದರೊಂದಿಗೆ ಹೋರಾ ಡುತ್ತದೆ, ಬದುಕುಳಿಯುವುದಕ್ಕಾಗಿ ಕಾದಾ ಡುತ್ತವೆ, ತಮ್ಮ ವಂಶ ಚೆನ್ನಾಗಿ ಬೆಳೆಯಬಲ್ಲ ಇನ್ನೊಂದು ತಾಣವನ್ನು ಹುಡುಕುತ್ತವೆ. ತಮ್ಮ ಬದುಕನ್ನು ಎಷ್ಟು ವ್ಯವಸ್ಥಿತವಾಗಿ, ಎಷ್ಟು ನಿಯಮಬದ್ಧವಾಗಿ, ಎಷ್ಟು ಸುಸೂತ್ರವಾಗಿ ಅವು ನಿಭಾಯಿಸುತ್ತವೆ ಎಂಬುದನ್ನು ಹತ್ತಿರದಿಂದ ಗಮನಿಸಿದರೆ ತಿಳಿದೀತು. ಕೀಟಗಳು, ಹಕ್ಕಿಗಳು, ಪ್ರಾಣಿಗಳು, ಉರಗ ಗಳು… ಎಲ್ಲವುಗಳ ಬಗೆಗೂ ಈ ಮಾತು ನಿಜ.

ಅವುಗಳ ಮೆದುಳು ನಮ್ಮ ಮೆದುಳಿಗಿಂತ ಲಕ್ಷ-ನೂರು ಪಟ್ಟು ಸಣ್ಣದಿರಬಹುದು. ಆದರೆ ತಮ್ಮ ಮಟ್ಟಿಗೆ ಅವು ಸಂಕೀರ್ಣವಾದ ಬುದ್ಧಿಮತ್ತೆ, ದೇಹ- ಎಲ್ಲವನ್ನೂ ಹೊಂದಿ ರುತ್ತವೆ. ಒಂದು ಇರುವೆ ಒಂದು ಸಂಪೂರ್ಣ ಇರುವೆಯಾಗಿರಲು ಏನೆಲ್ಲ ಬೇಕೋ ಅವೆಲ್ಲವನ್ನೂ ಹೊಂದಿರುತ್ತದೆ.

ನಮಗೂ ಸೃಷ್ಟಿಯ ಉಳಿದೆಲ್ಲ ಜೀವ ಸಂಕುಲಕ್ಕೂ ಇರುವ ಒಂದೇ ಒಂದು ವ್ಯತ್ಯಾಸ ಎಂದರೆ ಅವೆಲ್ಲವುಗಳ ಅರಿವು ಮತ್ತು ಬುದ್ಧಿಮತ್ತೆ ಅಲ್ಲಲ್ಲಿಗೆ ಸ್ಥಾವರವಾಗಿದೆ. ಜೀವ ವಿಕಾಸದ ಯಾವುದೋ ಒಂದು ಕೊರತೆಯಿಂದ ಅವುಗಳಿಗೆ ಉಂಟಾಗಿರುವ ನಷ್ಟವದು. ಆದರೆ ನಮ್ಮ ಅರಿವು ಸ್ಥಾವರ ಸ್ಥಿತಿಯಿಂದ ಬಿಡುಗಡೆ ಪಡೆದು ಚಲನ ಶೀಲವಾಗಿದೆ. ಹಾಗಾಗಿಯೇ ನಾವು ಅಂದರೆ, ಮನುಷ್ಯರು ನಮ್ಮ ಸೃಷ್ಟಿಯ ಅಗತ್ಯಗಳನ್ನು ಮೀರಿ ಇನ್ನೂ ಮುಂದಕ್ಕೆ ಸಾಗುವಷ್ಟು ಆಲೋಚನ ಶಕ್ತಿಯನ್ನು ಹೊಂದಿದ್ದೇವೆ. ಇದುವೇ ನಮ್ಮ ಶಕ್ತಿ. ನಮ್ಮ ದೈಹಿಕ ಮತ್ತು ಮಾನಸಿಕ ಸಂರಚನೆಯನ್ನು ಮೀರಿದ ಅರಿವೇ ನಮ್ಮ ಶಕ್ತಿ. ಜೀವವಿಕಾಸದ ಇತಿಮಿತಿಗಳನ್ನು ಹಿಂದಿಕ್ಕುವಂತಹ ಅರಿವೇ ಮನುಷ್ಯನ ಸಾಧ್ಯತೆ.

ಈ ಸಾಧ್ಯತೆ ಮತ್ತು ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾದರೆ ನಮ್ಮ ಬದುಕು ಹೊಸ ಆಯಾಮಕ್ಕೆ ಹೊರಳಲು ಸಾಧ್ಯ. ಲೌಕಿಕ ಬದುಕಿನಲ್ಲೂ ಆಧ್ಯಾತ್ಮಿಕ ಬದುಕಿನಲ್ಲೂ ಹೊಸ ಹೊಸ ಎತ್ತರದ ಸಾಧನೆಗಳನ್ನು ಕೈಗೊಳ್ಳಲು ಸಾಧ್ಯ. ಅದಕ್ಕಾಗಿ ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಮೊತ್ತಮೊದಲಾಗಿ ಪ್ರಯತ್ನಿಸಬೇಕು.

( ಸದ್ಗುರು ಉಪದೇಶದ ಸಾರ ಸಂಗ್ರಹ)

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.