Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

ಸೂಕ್ಷ್ಮ ಪ್ರದೇಶ ಗುರುತಿಸಲು ಸಿದ್ಧರಾಗಿ

Team Udayavani, Jun 26, 2024, 11:37 PM IST

Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಯಾವುದೇ ವಿಪತ್ತು ನಡೆಯುವ ಮೊದಲೇ ಅಪಾಯ ಸಾಧ್ಯತೆಯ ಸೂಕ್ಷ್ಮ ಪ್ರದೇಶಗಳನ್ನು ಸ್ಥಳೀಯವಾಗಿ ಸರಕಾರಿ ವ್ಯವಸ್ಥೆಯ ಕಾರ್ಯಪಡೆ ಗುರುತಿಸಿ ಸನ್ನದ್ಧರಾಗಿರಬೇಕು. ವಿಪತ್ತು ನಡೆದ ಬಳಿಕ ಅಲ್ಲಿಗೆ ಹೋಗುವಂತಹ ಪರಿಸ್ಥಿತಿ ಇರಲೇಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ರಾತ್ರಿ ವಿಪತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಸೂಚನೆ ನೀಡಿದ್ದು, ಮುಂದೆ ವಿಪತ್ತು ನಡೆದರೆ ಒಂದೂ ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದರು.

ಸ್ಥಳೀಯವಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್‌ ಕಲೆಕ್ಟರ್‌, ಗ್ರಾಮ ಸಹಾಯಕರಿಂದ ತೊಡಗಿ ಪೊಲೀಸ್‌ ಇಲಾಖೆಯವರಿಗೆ ಸಂಭಾವ್ಯ ಅಪಾಯಕಾರಿ ಪ್ರದೇಶಗಳ ಮಾಹಿತಿ ಇರುತ್ತದೆ. ಸಾಧ್ಯವಾದಷ್ಟೂ ಅವಘಡ ದುರಂತ ಆಗುವ ಸಾಧ್ಯತೆ ಇದ್ದಲ್ಲಿ ಮೊದಲೇ ಅಲ್ಲಿಗೆ ತೆರಳಿ ಪರಿಶೀಲಿಸಿ ಅದನ್ನು ಎದುರಿಸಲು ಸಜ್ಜಾಗಿರುವುದು ಮುಖ್ಯ, ದುರಂತ ನಡೆದ ಬಳಿಕ ತೆರಳಿ ಪರಿಹಾರ ಕೊಡು ವುದಕ್ಕೆ ಸೀಮಿತವಾಗಬಾರದು ಎಂದರು.

ಇಂಥ ಸನ್ನಿವೇಶಗಳನ್ನು ಎದುರಿಸುವ ಬಗ್ಗೆ ಜಿಲ್ಲಾಧಿಕಾರಿ ಸ್ಥಳೀಯವಾಗಿ ವಿಕೇಂದ್ರಿತ ವ್ಯವಸ್ಥೆ ರಚಿಸಿರುವ ಬಗ್ಗೆ ಸಚಿವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಕೇಂದ್ರಿತ ವ್ಯವಸ್ಥೆ ಸರಿಯಾಗಿ ವ್ಯವಸ್ಥೆಯಾಗಬೇಕಾ ದರೆ ಮೊದಲು ವಿಕೇಂದ್ರಿತ ಇಂಟೆಲಿಜೆನ್ಸ್‌ ಇರಬೇಕಾದುದು ಮುಖ್ಯ. ಇದರಿಂದ ದುರಂತಗಳಿಗೆ ಸ್ಪಂದನೆ ಚುರುಕಾಗುತ್ತದೆ ಹಾಗೂ ಸುಲಭವಾಗುತ್ತದೆ ಎಂದರು.

ವಿಪತ್ತು ನಿರ್ವಹಣ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ,ಪಂ ಸಿಇಒ ಡಾ| ಆನಂದ್‌, ಮನಪಾ ಆಯುಕ್ತ ಆನಂದ್‌ ಸಿ.ಎಲ್‌, ಮಂಗಳೂರು ಡಿಸಿಪಿ ಸಿದ್ದಾರ್ಥ ಗೋಯಲ್‌ ಉಪಸ್ಥಿತರಿದ್ದರು.

ತಹಶೀಲ್ದಾರ್‌ ಉತ್ತರಕ್ಕೆ ಸಚಿವರ ಆಸಮಾಧಾನ
ಜಿಲ್ಲೆಯ ಕೆಲವು ತಹಶೀಲ್ದಾರ್‌ ಬಳಿ ಸ್ಥಳೀಯವಾಗಿ ಸಂಭಾವ್ಯ ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿ ಕೇಳಿದ ಸಚಿವ ಬೈರೇಗೌಡ ಅವರ ಉತ್ತರದಿಂದ ಆಕ್ರೋಶಿತರಾದರು. ಎಲ್ಲ ವಿಪತ್ತು ಎದುರಿಸಲು ಸನ್ನದ್ಧರಿದ್ದೇವೆ ಎನ್ನುವ ಗಡಿಬಿಡಿಯ ಉತ್ತರ ನೀಡಿದ ತಹಶೀಲ್ದಾರ್‌ ಒಬ್ಬರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ವ್ಯಾಪ್ತಿಯಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ವಹಿಸಿಕೊಳ್ಳುತ್ತೀರಾ ಎಂದು ಚಾಟಿ ಬೀಸಿದರು. ಅಧಿಕಾರಿಗಳು ಇಂತಹ ಗಂಭೀರ ವಿಚಾರಗಳಿಗೆ ಸಂವೇದನೆ ಬೆಳೆಸಿಕೊಳ್ಳಿ ಎಂದರು.

 

ಟಾಪ್ ನ್ಯೂಸ್

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

1-Pak

Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್

Byndoor; ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್

NEET Row: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್‌ ನಲ್ಲಿ ಸಿಬಿಐ ಶೋಧ ಕಾರ್ಯ

NEET Row: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್‌ ನಲ್ಲಿ ಸಿಬಿಐ ಶೋಧ ಕಾರ್ಯ

satish jarakiholi

CM ಬದಲಾವಣೆ ವಿಷಯ ಮುಗಿದು ಹೋದ ಅಧ್ಯಾಯ: ಸತೀಶ್ ಜಾರಕಿಹೊಳಿ

18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಮುರಿದ ಹಲ್ಲಿನಿಂದ ಪತ್ತೆ ಹಚ್ಚಿದ ತಂಗಿ

18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಪತ್ತೆ ಹಚ್ಚಲು ನೆರವಾಗಿದ್ದು ಆ ಮುರಿದ ಹಲ್ಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

1-Pak

Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..

Kannada movie Taj releasing soon

Sandalwood; ಟ್ರೇಲರ್‌ನಲ್ಲಿ ‘ತಾಜ್‌’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ

ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್

Byndoor; ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.