ಡೆಲ್ಲಿ ಗೆದ್ದದ್ದು 4 ಮ್ಯಾಚ್‌; ಎಲ್ಲದರಲ್ಲೂ ಕುಲದೀಪ್‌ ಮ್ಯಾನ್‌ ಆಫ್ ದ ಮ್ಯಾಚ್‌!


Team Udayavani, Apr 30, 2022, 5:30 AM IST

THUMB 1

ಮುಂಬಯಿ: ಇದು ಈ ಐಪಿಎಲ್‌ನ ಸ್ವಾರಸ್ಯಗಳಲ್ಲೊಂದು. ಪ್ರಸಕ್ತ ಕೂಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಜಯಿಸಿದ್ದು ನಾಲ್ಕೇ ಪಂದ್ಯ. ಈ ನಾಲ್ಕರಲ್ಲೂ ಪಂದ್ಯಶ್ರೇಷ್ಠರಾಗಿ ಮೂಡಿಬಂದವರು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌!

ಯೋಗ್ಯ ನಾಯಕರ ಕೈಯಲ್ಲಿ ಅವಕಾಶ ಲಭಿಸಿದರೆ ಕ್ರಿಕೆಟಿಗನೋರ್ವ ಯಾವ ಮಟ್ಟಕ್ಕೆ ಏರಬಲ್ಲ ಎಂಬುದಕ್ಕೆ ಕುಲದೀಪ್‌ ಯಾದವ್‌ಗಿಂತ ಉತ್ತಮ ನಿದರ್ಶನ ಬೇಕಿಲ್ಲ. ಹಿಂದಿನ ಐಪಿಎಲ್‌ ಋತುಗಳಲ್ಲಿ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿತ್ತು. ಟೀಮ್‌ ಇಂಡಿಯಾದ ಕೆಟ್ಟ ರಾಜಕೀಯಕ್ಕೂ ಬಲಿಪಶು ಆಗಿದ್ದರು. ಆದರೆ ಈ ಐಪಿಎಲ್‌ನಲ್ಲಿ ಕುಲದೀಪ್‌ ಸಾಮರ್ಥ್ಯ ದೊಡ್ಡ ಮಟ್ಟದಲ್ಲೇ ಅನಾವರಣಗೊಂಡಿದೆ.

ಮುಂಬೈ ವಿರುದ್ಧ 18ಕ್ಕೆ 4
ಡೆಲ್ಲಿ ತನ್ನ ಗೆಲುವಿನ ಖಾತೆ ತೆರೆದದ್ದು ಮುಂಬೈ ಇಂಡಿಯನ್ಸ್‌ ವಿರುದ್ಧ. ಅಂತರ 4 ವಿಕೆಟ್‌. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 5 ವಿಕೆಟಿಗೆ 177 ರನ್‌ ಬಾರಿಸಿತು. ಐದರಲ್ಲಿ 3 ವಿಕೆಟ್‌ ಉರುಳಿಸಿದವರು ಕುಲದೀಪ್‌ ಯಾದವ್‌. ನೀಡಿದ್ದು ಬರೀ 18 ರನ್‌. ರೋಹಿತ್‌, ಅನ್ಮೋಲ್‌ಪ್ರೀತ್‌, ತಿಲಕ್‌ ವರ್ಮ ಮತ್ತು ಪೊಲಾರ್ಡ್‌ ಚೈನಾಮನ್‌ ಮೋಡಿಗೆ ಸಿಲುಕಿದರು.

ಕೆಕೆಆರ್‌ ವಿರುದ್ಧ 35ಕ್ಕೆ 4
ಡೆಲ್ಲಿಯ ಎರಡನೇ ಗೆಲುವು ದಾಖಲಾದದ್ದು ಕೆಕೆಆರ್‌ ವಿರುದ್ಧ. ಇಲ್ಲಿ ಡೆಲ್ಲಿ 5ಕ್ಕೆ 215 ರನ್‌ ಪೇರಿಸಿತ್ತು. ಕೆಕೆಆರ್‌ ದಿಟ್ಟ ರೀತಿಯಲ್ಲೇ ಜವಾಬು ನೀಡಲಾರಂಭಿಸಿತು. ಆದರೆ ಕುಲದೀಪ್‌ ಮ್ಯಾಜಿಕ್‌ ಮೊದಲ್ಗೊಂಡ ಬಳಿಕ ತಣ್ಣಗಾಯಿತು. ಶ್ರೇಯಸ್‌, ಕಮಿನ್ಸ್‌, ಸುನೀಲ್‌ ನಾರಾಯಣ್‌ ಮತ್ತು ಉಮೇಶ್‌ ಯಾದವ್‌ ವಿಕೆಟ್‌ ಕುಲದೀಪ್‌ ಪಾಲಾದವು.

ಪಂಜಾಬ್‌ ವಿರುದ್ಧ 24ಕ್ಕೆ 2
ಪಂಜಾಬ್‌ ಕೇವಲ 115ಕ್ಕೆ ಆಲೌಟ್‌ ಆಗಿತ್ತು. ಡೆಲ್ಲಿ 9 ವಿಕೆಟ್‌ಗಳಿಂದ ಗೆದ್ದಿತು. ಇದರಲ್ಲಿ ಕುಲದೀಪ್‌ ಸಾಧನೆ 24ಕ್ಕೆ 2. ಇವೇನೂ ಬಿಗ್‌ ವಿಕೆಟ್‌ ಆಗಿರಲಿಲ್ಲ. ಅಕ್ಷರ್‌ ಪಟೇಲ್‌ 10ಕ್ಕೆ 2 ವಿಕೆಟ್‌ ಹಾರಿಸಿದ್ದರು. ಆದರೂ ಪಂದ್ಯಶ್ರೇಷ್ಠ ಗೌರವ ಕುಲದೀಪ್‌ಗೆ ಲಭಿಸಿದ್ದೊಂದು ಅಚ್ಚರಿ. ಇದಕ್ಕೆ ಅಕ್ಷರ್‌ ಅರ್ಹರಾಗಿದ್ದರು ಎಂದು ಕುಲದೀಪ್‌ ಹೇಳಿದ್ದು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿ.

ಕೆಕೆಆರ್‌ ವಿರುದ್ಧ 14ಕ್ಕೆ 4
ಕೋಲ್ಕತಾ ಎದುರಿನ ದ್ವಿತೀಯ ಸುತ್ತಿನ ಪಂದ್ಯದಲ್ಲೂ ಕುಲದೀಪ್‌ 4 ವಿಕೆಟ್‌ ಉಡಾಯಿಸಿದರು. ನೀಡಿದ ರನ್‌ ಕೇವಲ 14. ಎಸೆದದ್ದು ಮೂರೇ ಓವರ್‌. ಇದು ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಸಾಧನೆ. ಅವರಿಗೆ ಇನ್ನೂ ಒಂದು ಓವರ್‌ ನೀಡಿದ್ದರೆ ವಿಕೆಟ್‌ ಬೇಟೆ ಹೆಚ್ಚುತ್ತಿತ್ತೋ ಏನೋ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಅನಿಸಿಕೆ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.