Rain ಕುಂದಾಪುರ: ಹಲವು ಮನೆಗಳಿಗೆ ಹಾನಿ
ಬೈಂದೂರು: ಪ್ರಾಥಮಿಕ ಶಾಲೆ ಜಲಾವೃತ
Team Udayavani, Jun 8, 2024, 10:59 PM IST
ಕುಂದಾಪುರ: ಗಾಳಿ- ಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಕುಂದಾಪುರ ತಾಲೂಕಿನ ಕೋಡಿಯ ಲಕ್ಷ್ಮೀ ಗಾಣಿಗ, ಗುಜ್ಜಾಡಿ ಗ್ರಾಮದ ಮುತ್ತು, ಶಂಕರನಾರಾಯಣ ಗ್ರಾಮದ ಶಕುಂತಾಳ ಶೆಟ್ಟಿ, ಹೊಸಂಗಡಿ ಗ್ರಾಮದ ಜ್ಯೋತಿ ಅವರ ಮನೆಗೆ ಹಾನಿ ಸಂಭವಿಸಿದೆ.
ಬೈಂದೂರು ತಾಲೂಕಿನ ಉಳ್ಳೂರು 11 ಗ್ರಾಮದ ಜಗನ್ನಾಥ ಶೆಟ್ಟಿ ಅವರ ಮನೆಗೆ ಮರ ಬಿದ್ದು ಹಾನಿ, ಉಪ್ಪುಂದ ಗ್ರಾಮದ ರಥಬೀದಿಯ ಲಕ್ಷ್ಮೀ ದೇವಾಡಿಗ ಅವರ ಶೌಚಾಲಯಕ್ಕೆ ಮರ ಬಿದ್ದು ಹಾನಿ, ನಾವುಂದ ಅರೆಹೊಳೆಯ ದೇವಿ ಅವರ ಕೊಟ್ಟಿಗೆಗೆ ಮರ ಬಿದ್ದು, ಗುಲಾಬಿ ಶೆಟ್ಟಿ ಅವರ ಮನೆಗೆಸಿಡಿಲು ಬಡಿದು, ವಿದ್ಯುತ್ ಪರಿಕಗಳು ಹಾಗೂ ವಯರಿಂಗ್ ಹಾನಿಗೀಡಾಗಿವೆ.
ಮರ ಬಿದ್ದು ರಿಕ್ಷಾ ಜಖಂ
ಕುಂದಾಪುರ ಮುಖ್ಯ ರಸ್ತೆಯ ಎವಿಎನ್ ಬಿಲ್ಡಿಂಗ್ ಬಳಿ ಮರವೊಂದು ಬುಡ ಸಹಿತ ಧರಾಶಾಯಿಯಾಗಿ ರಿಕ್ಷಾಕ್ಕೆ ಹಾನಿಯಾಗಿದೆ. ವಿದ್ಯುತ್ ತಂತಿ ತಾಗಿ ಮಳಿಗೆಯೊಂದರ ನಾಮಫಲಕಕ್ಕೆ ತುಸು ಹಾನಿಯಾಗಿದೆ.
ಬೈಂದೂರು: ಪ್ರಾಥಮಿಕ ಶಾಲೆ ಜಲಾವೃತ
ಬೈಂದೂರು: ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿ.ಪ್ರಾ. ಶಾಲೆ ಶನಿವಾರ ಮುಂಜಾನೆ ಜಲಾ ವೃತಗೊಂಡಿದೆ. ಬಳಿಕ ಮಕ್ಕಳಿಗೆ ರಜೆ ನೀಡಲಾಯಿತು.
ಶಾಲೆ ಸಮೀಪ ಸಮರ್ಪಕ ವಾದ ಚರಂಡಿ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯ ನೀರುನೇರ ಶಾಲೆಯ ಆವರಣಕ್ಕೆ ಬರುತ್ತದೆ. ಹಲವು ವರ್ಷಗಳಿಂದ ಮಳೆಗಾಲದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಅನೇಕ ಬಾರಿ ವಿನಂತಿಸಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸದ ಪರಿಣಾಮ ಶಾಲೆಗೆ ನೀರು ನುಗ್ಗಿದೆ. ಇದೇ ರೀತಿ ಮುಂದುವರಿದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಆಗುತ್ತಿದೆ. ಕನ್ನಡ ಶಾಲೆಯ ಅಭಿವೃದ್ಧಿಯಲ್ಲಿ ನಿಷ್ಕಾಳಜಿ ಬೇಸರ ತಂದಿದೆ ಎಂದು ಪಾಲಕರು ತಿಳಿಸಿದ್ದಾರೆ.
ಬಿಇಒ ನಾಗೇಶ ನಾಯ್ಕ, ಎಸ್ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ, ಸಹ ಕಾರ್ಯದರ್ಶಿ ಸುಮಾ ಆಚಾರ್, ಉಸ್ತು ವಾರಿ ರಾಘವೇಂದ್ರ, ಎಸ್ಡಿಎಂಸಿ ಅಧ್ಯಕ್ಷೆ ಗೀತಾ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಹೊಸಾಡು: 2 ಮನೆ ಅಪಾಯದಲ್ಲಿ
ಕುಂದಾಪುರ: ನಿರಂತರ ಮಳೆಗೆ ಹೊಸಾಡು ಗ್ರಾಮದ ಭಗತ್ ನಗರದಲ್ಲಿ 2 ಮನೆಗಳು ಕುಸಿತದ ಭೀತಿಯಲ್ಲಿವೆ.
ವಾಸುದೇವ ಖಾರ್ವಿ ಅವರ ಮನೆಯ ಹಿಂಭಾಗದ ಆವರಣ ಗೋಡೆ ಮಳೆ ನೀರಿನ ರಭಸಕ್ಕೆ ಕುಸಿದ ಪರಿಣಾಮ ಮನೆ ಬಿರುಕು ಬಿಟ್ಟಿದೆ. ಸಮೀಪದ ವೀರೇಶ ಅವರ ಮನೆ ಕೂಡ ಕುಸಿಯುವ ಭೀತಿಯಲ್ಲಿದೆ. ಅನಾಹುತ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು, ಸ್ಥಳೀಯಾಡಳಿತವನ್ನು ಆಗ್ರಹಿಸಿದ್ದಾರೆ.
ಹೊಸಾಡು ಗ್ರಾ.ಪಂ. ಆಡಳಿತಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರಸ್ತೆ ಮಾರ್ಜಿನ್ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.
Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ
Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ
Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫಲ ಬಿಡಬಹುದು
Fishing: ಬುಲ್ಟ್ರಾಲ್ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
World Rabies Day 2024: ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿವಳಿಕೆ ಕೊರತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.