Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು

ವಿಶೇಷ ಚೇತನ ಮಕ್ಕಳಿಬ್ಬರ ಜತೆ ಶಾಲೆಯಲ್ಲಿರುವ ತಾಯಿ

Team Udayavani, Jul 3, 2024, 7:05 AM IST

Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು

ಕುಂದಾಪುರ: ತುಂಬಿ ಹರಿಯುವ ಹೊಳೆ. ದಾಟಲು ಸೇತುವೆಯಿಲ್ಲ. ವಿಶೇಷ ಚೇತನ ಮಕ್ಕಳಿಬ್ಬರನ್ನು ನಿತ್ಯ ಈ ಹೊಳೆಯಲ್ಲಿ ಎತ್ತಿಕೊಂಡೇ ಹೋಗುವ ತಂದೆ. ಅಲ್ಲಿಂದ 7 ಕಿ.ಮೀ. ದ್ವಿಚಕ್ರ ವಾಹನದಲ್ಲಿ ಪ್ರಯಾಸಪಟ್ಟು ತಂದೆ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟರೆ, ತಾಯಿ ಬೆಳಗ್ಗೆಯಿಂದ ಸಂಜೆಯವರೆಗೆ ಮಕ್ಕಳೊಂದಿಗೆ ಶಾಲೆಯಲ್ಲಿರಬೇಕು. ಸಂಜೆ ಮತ್ತೆ ಇದೇ ರೀತಿ ಮರಳಿ ಮನೆಗೆ.

ಇದು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಯಳಜಿತ್‌ ಗ್ರಾಮದ ಹುಲ್ಕಡಿಕೆ ಪ್ರದೇಶದ ಮರಾಠಿ ನಾಯ್ಕ ಕುಟುಂಬವೊಂದರ ಸಂಕಷ್ಟದ ಬದುಕಿನ ಕಥೆ. ಇಲ್ಲಿ ಸೇತುವೆಯಿಲ್ಲದೆ ಈ ಕುಟುಂಬ ಮಾತ್ರವಲ್ಲ, 10ಕ್ಕೂ ಮಿಕ್ಕಿ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಆದರೂ ಇವರ ಕೂಗು ಇನ್ನೂ ಆಳುವ ವರ್ಗಕ್ಕೆ ಕೇಳಿಸಿದಂತಿಲ್ಲ.

ಹುಲ್ಕಡಿಕೆಯ ಸುರೇಶ್‌ ನಾಯ್ಕ ಹಾಗೂ ಸುಜಾತಾ ದಂಪತಿಯ ಇಬ್ಬರೂ ಮಕ್ಕಳು 2 ವರ್ಷ ಪ್ರಾಯ ಆಗುವಾಗ ಕೈ ಹಾಗೂ ಕಾಲುಗಳೆರಡರ ಸ್ವಾಧೀನ ಕಳೆದುಕೊಂಡಿದ್ದರು. ಅಲ್ಲಿಂದೀಚೆಗೆ ಈ ಮಕ್ಕಳಿಬ್ಬರಿಗೆ ತಂದೆ-ತಾಯಿಯೇ ಎಲ್ಲದಕ್ಕೂ ಆಸರೆ. ಈಗ ಮನೆಯಿಂದ ಸುಮಾರು 7 ಕಿ.ಮೀ. ದೂರದ ಯಳಜಿತ್‌ ಶಾಲೆಯಲ್ಲಿ ಪುತ್ರ 8 ಹಾಗೂ ಪುತ್ರಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರನ್ನು ಮಳೆಗಾಲದಲ್ಲಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ನಿತ್ಯವೂ ಕರೆದುಕೊಂಡು ಹೋಗಿಬರಲು ಈ ದಂಪತಿ ಪಡುವ ಕಷ್ಟ ಅಷ್ಟಿಷ್ಟಲ್ಲ.

ಸುರೇಶ್‌ ಅವರದು ಬಡ ಕುಟುಂಬ. ಮಕ್ಕಳಿಬ್ಬರ ಆರೈಕೆಯಿಂದಾಗಿ ಹೊರಗಡೆ ಕೆಲಸಕ್ಕೆ ಹೋಗುವಂತಿಲ್ಲ. ಮಕ್ಕಳಿಗೆ ರಜೆಯಿದ್ದರೆ ಮಾತ್ರ ಕೆಲಸಕ್ಕೆ ಹೋಗುತ್ತಾರೆ. ಉಳಿದ ದಿನ ಬೆಳಗ್ಗೆ ಹಾಗೂ ಸಂಜೆ ತಂದೆ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕು, ಕರೆತರಬೇಕು. ತಾಯಿ ಬೆಳಗ್ಗೆಯಿಂದ ಸಂಜೆಯವರೆಗೆ ಶಾಲೆಯಲ್ಲಿದ್ದು ಮಕ್ಕಳ ಪಾಲನೆ- ಪೋಷಣೆ ನೋಡಿಕೊಳ್ಳಬೇಕು. ಇರುವ ಸಣ್ಣ ಅಡಿಕೆ ತೋಟವೇ ಇವರ ಬದುಕಿಗೆ ಜೀವನಾಧಾರ.

ಹೊಳೆಯಾಚೆ ಒಂದು ಬೈಕ್‌; ಈಚೆ ಬೈಕ್‌
ಹುಲ್ಕಡಿಕೆಯಲ್ಲಿ 5ನೇ ತರಗತಿಯ ವರೆಗೆ ಮಾತ್ರ ಕಿ.ಪ್ರಾ. ಶಾಲೆಯಿದ್ದು, ಹೆಚ್ಚಿನ ಕಲಿಕೆಗೆ 7 ಕಿ.ಮೀ. ದೂರದ ಯಳಜಿತ್‌ಗೆ ಬರಬೇಕಿದೆ. ಗುಡಿಕೇರಿ ಎಂಬಲ್ಲಿ ಒಂದು ಹೊಳೆಯಿದ್ದು, ಅದನ್ನು ದಾಟಿಯೇ ಯಳಜಿತ್‌ಗೆ ಬರಬೇಕು. ಅನೇಕ ವರ್ಷಗಳಿಂದ ಇಲ್ಲಿನ ಜನ ಮನವಿ ಮಾಡುತ್ತಿದ್ದರೂ ಈವರೆಗೆ ಯಾರಿಂದಲೂ ಸ್ಪಂದನೆ ವ್ಯಕ್ತವಾಗಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಎತ್ತಿಕೊಂಡೇ ಬಂದು ಹೊಳೆ ದಾಟಿಸಬೇಕು. ಇದು ಸುರೇಶ್‌ ಒಬ್ಬರದೇ ಕಥೆಯಲ್ಲ, ಇಲ್ಲಿರುವ ಎಲ್ಲ ಮಕ್ಕಳ ಪೋಷಕರು ಈ ಕಾರ್ಯವನ್ನು ನಿತ್ಯವೂ ಮಾಡಬೇಕಾಗಿದೆ. ಸುರೇಶ್‌ ಕಷ್ಟಪಟ್ಟು 2 ಬೈಕ್‌ ಖರೀದಿಸಿದ್ದು, ಒಂದನ್ನು ಹೊಳೆಯ ಈಚೆ, ಇನ್ನೊಂದನ್ನು ಹೊಳೆಯ ಆಚೆ ಇರಿಸಿರುತ್ತಾರೆ. ಒಂದರಲ್ಲಿ ಮನೆಯಿಂದ ಹೊಳೆಯ ವರೆಗೆ, ಇನ್ನೊಂದರಲ್ಲಿ ಹೊಳೆಯಾಚೆಯಿಂದ ಶಾಲೆಯ ವರೆಗೆ ಮಕ್ಕಳನ್ನು ಕರೆದೊಯ್ಯುತ್ತಾರೆ.

ಸಂಸದರಿಂದ ಪ್ರಯತ್ನ
ಹಿಂದಿನ ಸರಕಾರದ ಅವಧಿಯಲ್ಲಿ ಹುಲ್ಕಡಿಕೆ ಸಹಿತ 3 ಕಡೆಗಳಲ್ಲಿ ಸೇತುವೆಗಾಗಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾವ ಸಲ್ಲಿಸಿದ್ದರು. ಬಳಿಕ ಕಳೆದ ವರ್ಷ ಸರಕಾರ ಬದಲಾದದ್ದರಿಂದ ಈ ಪ್ರಸ್ತಾವನೆಗೆ ಮಂಜೂರಾತಿ ಸಿಕ್ಕಿಲ್ಲ. “ನಾವು 7-8 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಇಲ್ಲಿನ ಹೊಳೆಗೆ ಸೇತುವೆ ಆದರೆ ನಮ್ಮ ಕಷ್ಟ ತಪ್ಪುತ್ತದೆ’ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಸದಸ್ಯ ರಾಜೇಶ್‌ ಕೊಠಾರಿ.

ಶಾಸಕರ ಭೇಟಿ; ತುರ್ತು ವ್ಯವಸ್ಥೆ ಭರವಸೆ
ಸೇತುವೆಯಿಲ್ಲದೆ ಹುಲ್ಕಡಿಕೆ ಪರಿಸರದ ಜನರು ಅನುಭವಿಸುತ್ತಿರುವ ಸಂಕಷ್ಟದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಗುರುರಾಜ್‌ ಗಂಟಿಹೊಳೆ ಮಂಗಳವಾರ ಅಲ್ಲಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಅಲ್ಲದೆ ಲಾರಿ, ಇನ್ನಿತರ ವಾಹನಗಳ ಚಾಸಿಸ್‌ ಬಳಸಿ ತಾತ್ಕಾಲಿಕ ಸೇತುವೆ ಮಾಡಿಕೊಡುವ ಸಂಬಂಧ ಪರಿಶೀಲಿಸಲಾಗುವುದು. ಇದಲ್ಲದೆ ಸುರೇಶ್‌ ಅವರ ಕುಟುಂಬಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಾರದೊಳಗೆ ಯಳಜಿತ್‌ ಪರಿಸರದಲ್ಲಿ ಬಾಡಿಗೆ ಮನೆ ಮಾಡಿಕೊಡಲಾಗುವುದು. ಹಿಂದೆ ಇಲ್ಲಿಗೆ ಸಂಸದರು ಸೇತುವೆಗೆ ಪ್ರಸ್ತಾವನೆ ಕಳುಹಿಸಿದ್ದು, ಆದರೆ ಈಗಿನ ಸರಕಾರದಿಂದ ಅದು ಬಾಕಿಯಾಗಿದೆ. ಅನುದಾನ ಕೊರತೆ, ಕಾಮಗಾರಿ ಹಿಂಪಡೆದದ್ದು, ನರೇಗಾದಡಿ ಕಾಲು ಸಂಕಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. ಮಕ್ಕಳ ಚಿಕಿತ್ಸೆಗೂ ಪ್ರಯತ್ನಿಸಲಾಗುವುದು. ಸೇತುವೆ ಬಗ್ಗೆ ಪರಿಶೀಲಿಸಿ, ವರದಿ ಕೊಡುವಂತೆ ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.

ಏಳು ವರ್ಷಗಳಿಂದ ಸೇತುವೆಗಾಗಿ ಮನವಿ ನೀಡುತ್ತಿದ್ದೇವೆ. ಆದರೆ ಇನ್ನೂ ಆಗಿಲ್ಲ. ಮಕ್ಕಳ ಆರೈಕೆ ನಮಗೆ ಕಷ್ಟವಲ್ಲ. ಆದರೆೆ ತುಂಬಿ ಹರಿಯುವ ಹೊಳೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದೇ ತುಂಬಾ ಭಯ ಹುಟ್ಟಿಸುತ್ತದೆ. ಆದಷ್ಟು ಬೇಗ ಸೇತುವೆ ಆಗಲಿ.
– ಸುಜಾತಾ, ಹುಲ್ಕಡಿಕೆ ನಿವಾಸಿ

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.