Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!
Team Udayavani, Sep 6, 2024, 11:11 AM IST
ಕುಷ್ಟಗಿ : ತಾಲೂಕಿನ ಕುಂಬಳಾವತಿ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆಯಲ್ಲಿ ಕುಷ್ಟಗಿ ಟಗರು ( ಗಾಂಧಿ ನಗರದ ಗೂಳಿ) ಸೆಣಸಾಡಿ ಮಾಲೀಕನಿಗೆ ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಹೊಸ ಬೈಕ್ ಗೆದ್ದು ಕೊಟ್ಟಿದೆ.
ಶ್ರಾವಣ ಮಾಸದ ನಿಮಿತ್ತ ಕುಂಬಳಾವತಿ ಗ್ರಾಮದ ಶ್ರೀದ್ಯಾಮಾಂಭಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಟಗರಿನ ಕಾಳಗ ಓಪನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಕಡೆಯಿಂದ 8 ಹಲ್ಲಿನ 40ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು.
4 ಸುತ್ತುಗಳ ಈ ಸ್ಪರ್ಧೆಯಲ್ಲಿ ಬಲಾಢ್ಯ ಎದುರಾಳಿ ಟಗರು ಗಳನ್ನು ಕುಷ್ಟಗಿ ಟಗರು ಸೆಣೆಸಾಡಿ ಮಹಾ ಬಲಾಢ್ಯ ಎನಿಸಿಕೊಂಡಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಗುಡದೂರಿನ ಬಲಿಷ್ಠ ಟಗರಿನ ಜೊತೆಗೆ ತೀವ್ರ ಸೆಣಸಾಡಿ ಕೊನೆಗೆ ಗೆದ್ದ ಕುಷ್ಟಗಿ ಟಗರು, ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಹೊಸ ಬೈಕ್ ಬಹುಮಾನವಾಗಿ ಪಡೆದುಕೊಂಡಿದೆ.
ರಾಜ್ಯದ ಐದು ಕಡೆಗಳಲ್ಲಿ ನಡೆದ ಓಪನ್ ಟಗರಿನ ಕಾಳಗ ಸ್ಪರ್ಧೆಯಲ್ಲಿ ನಮ್ಮ ಟಗರು ಭಾಗವಹಿಸಿತ್ತು. ಸ್ವಲ್ಪ ಅಂತರದಲ್ಲಿಯೇ ಸೋತಿತ್ತು. ಆದರೆ ಎದುರಾಳಿ ಟಗುರುಗಳಿಗೆ ಸಾಕಷ್ಟು ಹಾನಿ ಮಾಡಿತ್ತು. ಒಟ್ಟು 5 ರಾಜ್ಯ ಮಟ್ಟದ ಕಾಳಗ ಸ್ಪರ್ಧೆಗಳಲ್ಲಿ ಎರಡರಲ್ಲಿ ಗೆದ್ದು ಬಹುಮಾನ ಗೆದ್ದುಕೊಟ್ಟಿದೆ. ಈ ಹಿಂದೆ ಸೂಳಿಬಾವಿಯಲ್ಲಿ ನಡೆದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ನಗುದು ಬಹುಮಾನಗಳಿಸಿ ಕೊಟ್ಟಿದೆ. ಮುಂದಿನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಲಿದೆ ಎಂಬ ವಿಶ್ವಾಸ ನಮಗಿತ್ತು. ಸದ್ಯದ ಕುಂಬಳಾವತಿಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ನಮಗೆ ಬಹುಮಾನವಾಗಿ ಬೈಕ್ ತಂದುಕೊಟ್ಟ ನಮ್ಮ ಬಲಾಢ್ಯ ಟಗರಿನ ಬಗ್ಗೆ ನಮಗೆ ಹೆಮ್ಮೆ ಇದೆ ಎನ್ನುತ್ತಾರೆ ಟಗರು ಮಾಲೀಕರಾದ ಬೆಂಚಮಟ್ಟಿ ಗ್ರಾಮದ ಜಂಬಣ್ಣ ಡೊಳ್ಳಿನ್, ಕುಷ್ಟಗಿಯ ದಾವಲ್ ಕಾಯಗಡ್ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ
Darshan, ಸುದೀಪ್ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು
Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ
ಕೊಪ್ಪಳ: ರೋಸಿ ಹೋದ ಗ್ರಾಮಸ್ಥರು- ಡಿಜೆಗೆ ಕೊಡುವ ಹಣದಲ್ಲಿ ರಸ್ತೆ ದುರಸ್ತಿ!
MUST WATCH
ಹೊಸ ಸೇರ್ಪಡೆ
Delhi Govt: ದೆಹಲಿ ಸಿಎಂ ರೇಸ್ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ
Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.