![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 3, 2021, 4:22 PM IST
ಕುದೂರು: ಹಾವು ಹಿಡಿಯುವುದು ಒಂದು ಅದ್ಭುತವಾದ ಕಲೆ. ಹಿಡಿದ ಹಾವನ್ನು ಜೋಪಾನವಾಗಿ ಸುರಕ್ಷಿತ ಸ್ಥಳಕ್ಕೆ ಬಿಡುವುದೂ
ಕೂಡ ಸವಾಲಿನ ಕೆಲಸವಾಗಿದೆ ಎಂದು ಉರಗ ತಜ್ಞ ಸುಗ್ಗನಹಳ್ಳಿ ಅರುಣ್ಕುಮಾರ್ ಹೇಳಿದರು.
ಡಾಬಸ್ಪೇಟೆಯ ತೋಟದ ಮನೆಯಲ್ಲಿ ಸೇರಿಕೊಂಡಿದ್ದ ಹೆಬ್ಟಾವನ್ನು ಹಿಡಿದು ಮಾಗಡಿ ತಾಲೂಕು ಕುದೂರು ಹೋಬಳಿಯ ಚೀಲೂರು ಬೆಟ್ಟಕ್ಕೆ ಬಿಡುವ ಸಂದರ್ಭದಲ್ಲಿ ಮಾತನಾಡಿ, ಹೆಬ್ಟಾವು ಅತ್ಯಂತ ಅಮಾಯಕ ಹಾವುಗಳಲ್ಲಿ ಒಂದು. ಒಮ್ಮೆ ಹೊಟ್ಟೆ ತುಂಬಾ ಆಹಾರ ಸಿಕ್ಕ ನಂತರ ಒಂದು ತಿಂಗಳು ಆಹಾರವಿಲ್ಲದೆ ಇರಬಲ್ಲದು. ಇದು ವಿಷಪೂರಿತ ಹಾವಲ್ಲ. ಆದರೆ, ಅದು ಕಡಿದರೆ ದೊಡ್ಡ ಗಾಯವಾಗುತ್ತದೆ.ಇದರಿಂದ ಎಚ್ಚರವಾಗಿರಬೇಕು ಎಂದು ತಿಳಿಸಿದರು.
ಸುರಕ್ಷಿತ ಸ್ಥಳಕ್ಕೆ ಬಿಡುವುದು ನಮ್ಮ ಜವಾಬ್ದಾರಿ: ಹೆಬ್ಟಾವನ್ನು ಹಿಡಿದು ಬೆಟ್ಟ-ಗುಡ್ಡಗಳಿಗೆ ಬಿಡುವಂತಿಲ್ಲ. ಈಗ ಹಿಡಿದಿರುವುದು ಗಂಡು ಹೆಬ್ಟಾವಾಗಿದೆ. ಅದರ ಸಂತಾನೋತ್ಪತ್ತಿಗೆ ಹಾಗೂ ಆಹಾರಕ್ಕೆ ಅನುಕೂಲವಾಗುವ ಕಾಡಿಗೆ ಬಿಡಬೇಕು. ಮಾಗಡಿ ತಾಲೂಕಿನ ಚೀಲೂರು ¸ಬೆಟ್ಟದಲ್ಲಿ ಹೆಬ್ಟಾವಿನ ಸಂಖ್ಯೆ ಹೆಚ್ಚಿದೆ .ಹೆಬ್ಟಾವುಗಳ ಸಂತತಿ ಇಲ್ಲದ ಕಡೆಗೆ ಇದನ್ನು ಬಿಟ್ಟರೆ ಆಹಾರಕ್ಕೂ ಪರದಾಡುತ್ತದೆ. ಆಗ ದನ-ಕರು, ಕುರಿ ಮೇಕೆಗಳನ್ನುಹಿಡಿದು ನುಂಗುತ್ತದೆ. ಜನರು ಇದನ್ನು ಗಮನಿಸಿದರೆ ಹಾವನ್ನು ಹೊಡೆದು ಹಾಕದೆ ಬಿಡಲಾರರು. ಅದಕ್ಕಾಗಿ
ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಅದನ್ನು ಬಿಡುವುದು ನಮ್ಮಜವಾಬ್ದಾರಿ ಎಂದು ತಿಳಿಸಿದರು.
ಹಾವನ್ನು ಕಂಡಾಗ ದಯವಿಟ್ಟು ಅದನ್ನು ಹೊಡೆದು ಕೊಲ್ಲಬೇಡಿ. ಪೋನಾಯಿಸಿದರೆ (ಮೊ.ನಂ: 9902252765) ಸಾಕು ಬಂದು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅವರ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.