ಚಿರತೆ ಹಿಡಿಯಲೆಂದು ಬೋನ್ ಒಳಗೆ ಕುರಿ ಇಟ್ಟರೆ, ಚಿರತೆ ಕುರಿಯನ್ನೇ ತಿಂದು ಪರಾರಿ!
Team Udayavani, Jan 24, 2021, 1:04 PM IST
ಕೊಳ್ಳೇಗಾಲ: ರಾತ್ರಿ ವೇಳೆ ಬಂದು ಗ್ರಾಮಸ್ಥರು ನಿದ್ದೆಗೆಡಿಸಿದ್ದ ಚಾಲಾಕಿ ಚಿರತೆ ಬೋನ್ ಇಟ್ಟಿದ್ದರೂ ಅದರತ್ತ ಸುಳಿಯದೇ
ಕುರಿಗಳನ್ನು ತಿಂದು ಪರಾರಿಯಾಗಿದೆ. ತಾಲೂಕಿನ ಯಡಕುರಿಯ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯೇಕ್ಷವಾಗಿರುವುದು ಗ್ರಾಮದ ಸುತ್ತಮುತ್ತಲಿನ ಜನರು ಭಯಭೀತಗೊಳಿಸಿದೆ. ಕಾಡಿನಿಂದ ಗ್ರಾಮಕ್ಕೆ ಬಂದ ಚಿರತೆ ಎರಡು ಕುರಿಯನ್ನು ತಿಂದು ಪರಾರಿಯಾಗಿದೆ.
ಬೆಳಗಾಗುತ್ತಿದ್ದಂತೆ ನೋಡಿದ ಗ್ರಾಮಸ್ಥರು ಎರಡು ಕುರಿಗಳನ್ನು ತಿಂದಿರುವ ಮೂಳೆ ಬಿಸಾಡಿರುವುದನ್ನು ಕಂಡು ಚಿರತೆಯ ಗುರುತನ್ನೇ ಕಂಡು ಭಯಭೀತರಾಗಿದ್ಧಾರೆ.
ರಾತ್ರಿಯ ಹೊತ್ತು ಗ್ರಾಮದಲ್ಲಿ ಓಡಾಡಿರುವ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಯಡ ಕುರಿಯ ಸೇತುವೆ ಬಳಿ ಮತ್ತು ಸತ್ತೇ ಗಾಲ ನಾಲೆಯ ಬಳಿ ಎರಡು ಬೋನ್ ಅಳವಡಿಸಿದ್ದರು.
ಇದನ್ನೂ ಓದಿ: ಶಿಕ್ಷಕರು, ಎಸ್ಡಿಎಂಸಿಗೂ ತಿಳಿಸದೇ ಶಾಲೆಯಲ್ಲಿ 10 ಬೃಹತ್ ಮರಗಳ ಹನನ
ಚಿರತೆ ಬೋನಿಗೆ ಬಾರದೆ ನಾಪತ್ತೆಯಾಗಿದ್ದು, ಆಹಾರ ತಿಂದು ಕಾಡಿನ ಕಡೆಗೆ ಹೋಗಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ಎಫ್ಒ ಪ್ರವೀಣ್ ಒಲೆಯರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.