![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 21, 2022, 8:05 AM IST
ಬೆಳ್ಮಣ್ : ಇಲ್ಲಿನ ಕೋಡಿ ಪರಿಸರದಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಅಲ್ಲದೆ ಈ ಪರಿಸರದಲ್ಲಿ ಇನ್ನೂ ಎರಡು ಚಿರತೆಗಳು ಇವೆ ಎಂಬ ಆತಂಕ ಊರಿನ ಜನರಲ್ಲಿ ಮನೆಮಾಡಿದೆ.
ಕೋಡಿಯಲ್ಲಿ ಚಿರತೆ ಸಂಚಲನ ಇರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೋಡಿಯಲ್ಲಿ ಬೋನ್ ಇಟ್ಟಿದ್ದರು ಅದರಂತೆ ಶುಕ್ರವಾರ ರಾತ್ರಿ ಚಿರತೆ ಬಿದ್ದಿದೆ. ಬೋಳ ಕೋಡಿ ಗುಣವತಿ ಎಂಬವರ ಮನೆಯ ಪಕ್ಕದಲ್ಲಿ ನಡೆದ ಘಟನೆ ಇದಾಗಿದ್ದು. ಈ ಪರಿಸರದಲ್ಲಿ ಇನ್ನೂ ಎರಡು ಚಿರತೆಗಳನ್ನು ಕಂಡಿದ್ದೇವೆ ಎಂದು ಈ ಭಾಗದ ಜನ ಹೇಳಿದ್ದಾರೆ.
ಬೆಳ್ಮಣ್ ವಿಭಾಗದ ಅರಣ್ಯ ಅಧಿಕಾರಿ ಹುಕ್ರಪ್ಪ ಹಾಗೂ ಪ್ರಕಾಶ್ ಬೋನು ಇಟ್ಟಿದ್ದು. ಸೆರೆ ಹಿಡಿದ ಚಿರತೆಯನ್ನು ಕುದುರೆಮುಖ ಅಭಯಾರಣ್ಯಕ್ಕೆ ಬಿಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.