ಎಲ್ಐಸಿ ಪಾಲಿಸಿಗಳ ಮುಂದುವರಿಕೆಗೆ ಅವಕಾಶ
ಅರ್ಧಕ್ಕೆ ನಿಂತು ಹೋದ ಪಾಲಿಸಿಗಳ ಪುನರುಜ್ಜೀವನಕ್ಕೆ ಸುಸಂದರ್ಭ
Team Udayavani, Feb 6, 2022, 7:25 AM IST
ನವದೆಹಲಿ: ಭಾರತೀಯ ಜೀವವಿಮಾ ನಿಗಮದ (ಎಲ್ಐಸಿ) ವಿಮೆಗಳನ್ನು ನೀವು ಈ ಹಿಂದೆ ಕೊಂಡಿದ್ದು, ಅವುಗಳ ಪ್ರೀಮಿಯಂಗಳನ್ನು ಕಟ್ಟಲಾಗದೇ ಅವು ಅರ್ಧಕ್ಕೆ ನಿಂತಿದ್ದರೆ ಅಂಥ ಪಾಲಿಸಿಗಳನ್ನು ಪುನರಾರಂಭಿಸುವ ಸುವರ್ಣಾವಕಾಶವನ್ನು ನಿಗಮ ಮಾಡಿಕೊಟ್ಟಿದೆ.
ಫೆ.7ರಿಂದ ಮಾ.25ರವರೆಗೆ ಗ್ರಾಹಕರು ತಮ್ಮ ಪಾಲಿಸಿಗಳನ್ನು ಪುನರುಜ್ಜೀವನ ಮಾಡಿಕೊಳ್ಳಬಹುದು. ಅವಧಿ ಮುಗಿಯದ ಹಾಗೂ ಪ್ರೀಮಿಯಂ ಕಟ್ಟುವ ಅವಧಿಯಲ್ಲೇ ಅರ್ಧಕ್ಕೇ ನಿಂತಿರುವ ವಿಮಾ ಪಾಲಿಸಿಗಳಿಗೆ ಇದು ಅನ್ವಯವಾಗುತ್ತದೆ.
ಸಾಂಪ್ರದಾಯಿಕ ಹಾಗೂ ಆರೋಗ್ಯ ಪಾಲಿಸಿಗಳ ಪ್ರೀಮಿಯಂ ಕಟ್ಟುವುದು ತಡವಾದಾಗ ವಿಧಿಸಲಾಗುವ ದಂಡ (ಲೇಟ್ ಫೀ)ನಲ್ಲೂ ವಿನಾಯಿತಿ ಕೊಡಲಾಗಿದೆ. ಅದರಂತೆ, ಕನ್ವೆನ್ಶನಲ್ ಮತ್ತು ಆರೋಗ್ಯ ವಿಮೆಗಳ ಬಾಕಿ ಪ್ರೀಮಿಯಂ 1 ಲಕ್ಷ ರೂ. ಇದ್ದರೆ ಅದರ ಮೇಲೆ ವಿಧಿಸಲಾಗುವ ಲೇಟ್ ಫೀ ಮೇಲೆ ಶೇ. 20 ವಿನಾಯಿತಿ ನೀಡುವುದಾಗಿ ಸಂಸ್ಥೆ ಹೇಳಿದೆ. ಆದರೆ, ಈ ವಿನಾಯಿತಿ ಮಿತಿ ಗರಿಷ್ಠ 2 ಸಾವಿರ ರೂ. ಎಂಬ ಷರತ್ತನ್ನೂ ವಿಧಿಸಿದೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 731.03 ಕೋಟಿ ರೂ. ಅನುದಾನ ಬಿಡುಗಡೆ
ಹಾಗೆಯೇ 1 ಲಕ್ಷ ರೂ.ದಿಂದ 3 ಲಕ್ಷ ರೂ.ವರೆಗಿನ ಬಾಕಿ ಪ್ರೀಮಿಯಂ ಮೇಲಿನ ಲೇಟ್ ಫೀ ಮೇಲೆ ಶೇ. 25ರಷ್ಟು ವಿನಾಯ್ತಿಯಿದ್ದು ಈ ಶ್ರೇಣಿಯ ವಿಮಾದಾರರು ಗರಿಷ್ಠ 2,500 ರೂ. ವಿನಾಯ್ತಿಯನ್ನು, 3 ಲಕ್ಷ ರೂ.ಗಿಂತ ಹೆಚ್ಚು ಹಣ ಬರಬೇಕಿರುವ ಪಾಲಿಸಿಗಳ ಮೇಲಿನ ಲೇಟ್ ಫೀ ಮೇಲೆ ಶೇ. 30ರಷ್ಟು ವಿನಾಯ್ತಿ (ಗರಿಷ್ಠ 3,000 ರೂ.) ಇದೆ. ಇನ್ನು, ಮೈಕ್ರೋ ವಿಮಾ ಯೋಜನೆಗಳ ಮೇಲಿನ ಲೇಟ್ ಫೀ ಮೇಲೆ ಶೇ. 100ರಷ್ಟು ವಿನಾಯ್ತಿ ಇದೆ ಎಂದು ನಿಗಮ ಪ್ರಕಟಿಸಿದೆ.
ಆದರೆ, ಈ ವಿನಾಯ್ತಿ ಸೌಲಭ್ಯ ಹೈ ರಿಸ್ಕ್ ಪ್ಲಾನ್ಗಳು ಮತ್ತು ಮಲ್ಟಿಪಲ್ ರಿಸ್ಕ್ ಪಾಲಿಸಿ ಸೇರಿ ಕೆಲವು ಪಾಲಿಸಿಗಳಿಗೆ ವಿನಾಯಿತಿ ಅನ್ವಯವಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ
Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ
AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!
Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ
Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.