![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್ ಮನೆ, ಕಚೇರಿಗೆ ಲೋಕಾಯುಕ್ತ ಶೋಧ
Team Udayavani, Jun 30, 2024, 1:27 AM IST
![Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್ ಮನೆ, ಕಚೇರಿಗೆ ಲೋಕಾಯುಕ್ತ ಶೋಧ](https://www.udayavani.com/wp-content/uploads/2024/06/loks-620x355.jpg)
ಮಂಗಳೂರು: ಮಂಗಳೂರಿನ ಭೂ ಮಾಪನ ಇಲಾಖೆಯ ಅಧಿಕಾರಿ(ಡಿಡಿಎಲ್ಆರ್) ಮತ್ತು ಇಬ್ಬರು ಸರ್ವೇಯರ್ಗಳ ಕಚೇರಿ ಹಾಗೂ ಮನೆಗಳಲ್ಲಿ ಶನಿವಾರ ಮಂಗಳೂರು ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಮಂಗಳೂರು ಡಿಡಿಎಲ್ಆರ್ ಕಚೇರಿ ಮತ್ತು ದೇರಳಕಟ್ಟೆ ಬಳಿ ಇರುವ ಉಳ್ಳಾಲದ ಸರ್ವೇಯರ್ ಕಚೇರಿಯಲ್ಲಿ ತಪಾಸಣೆ ನಡೆಸಲಾಗಿದೆ. ಅಲ್ಲದೆ ಅಧಿಕಾರಿ ಮತ್ತು ಸರ್ವೇಯರ್ಗಳಿಗೆ ಸೇರಿದ ಬಂಟ್ವಾಳ, ಸೋಮೇಶ್ವರ, ಮಂಗಳೂರು ನಗರ ಮತ್ತು ಕಾರ್ಕಳದ ಮನೆಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ನಟರಾಜ್ ಅವರ ನೇತೃತ್ವದಲ್ಲಿ ಒಟ್ಟು 6 ತಂಡಗಳು ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಇಲಾಖೆಯ ಕಚೇರಿಯಲ್ಲಿ ಲಂಚ ಸ್ವೀಕಾರ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.