![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 25, 2022, 9:42 PM IST
ಬೆಳಗಾವಿ: ಮಹದಾಯಿ ಯೋಜನೆಗಾಗಿ ಗೋವಾ ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದೆ. ನ್ಯಾಯಯುತವಾಗಿ ನಮಗೆ 7.5 ಟಿಎಂಸಿ ಅಡಿ ನೀರು ಸಿಗಬೇಕು ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯಲ್ಲಿ ಕೇವಲ 3.9 ಟಿಎಂಸಿ ಅಡಿ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ನಮಗೆ ಸಂಪೂರ್ಣವಾಗಿ 7.5 ಟಿಎಂಸಿ ಅಡಿ
ನೀರು ಸಿಗಬೇಕು ಎಂಬುದು ನಮ್ಮ ನಿಲುವು. ಮೇಕೆದಾಟು ಪಾದಯಾತ್ರೆ ಮಾದರಿಯಲ್ಲಿ ಮಹದಾಯಿಗಾಗಿ ಪಾದಯಾತ್ರೆ ನಡೆಸುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಈಗಾಗಲೇ ಅಧಿಕೃತವಾಗಿ ಹೇಳಿದ್ದಾರೆ ಎಂದರು. ಖಾನಾಪುರಕ್ಕೆ 1.5 ಟಿಎಂಸಿ ಅಡಿ ನೀರು ಸಿಕ್ಕಿದ್ದು, ಈ ಭಾಗದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಇನ್ನೂ ಹೆಚ್ಚಿನ ನೀರು ಸಿಗಬೇಕಿದೆ. 36 ಟಿಎಂಸಿ ಅಡಿ ನೀರಿಗಾಗಿ ಒತ್ತಾಯ ಮಾಡಿದ್ದೆವು. ಅದರಲ್ಲಿ ವಿಶೇಷವಾಗಿ 7.5 ಟಿಎಂಸಿ ಅಡಿ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕು. ನಾನು ಆಗ ಗೋವಾ ಮುಖ್ಯಮಂತ್ರಿ
ಮನೋಹರ್ ಪರೀಕರ್ ಅವರನ್ನು ಭೇಟಿಯಾಗಿ ಬಂದು ಡಿಪಿಆರ್ ಮಾಡಿ, ಆಡಳಿತಾತ್ಮಕ ಅನುಮೋದನೆ ಕೊಟ್ಟ ನಂತರ ಈಗ ಇವರು ಮಾತನಾಡುತ್ತಿದ್ದಾರೆ. ಅಂದು ಎಂ.ಬಿ. ಪಾಟೀಲ್ ಸುಮ್ಮನೆ ಕೂತಿದ್ದರೆ ಏನಾಗುತ್ತಿತ್ತು?
ನಿಮ್ಮ ಸರ್ಕಾರ, ಜಲಸಂಪನ್ಮೂಲ ಇಲಾಖೆ ಇದಕ್ಕೆ ಸ್ಪಷ್ಟೀಕರಣ ನೀಡಲಿ. ಹೊಂದಾಣಿಕೆ ಮಾಡುವಾಗ ಪಕ್ಷದ ವಿಚಾರ ಬರುತ್ತದೆ. ಆದರೆ ನೀರಿನ ಹಕ್ಕು ಬಂದಾಗ ಯಾವುದೇ ರೀತಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದರು.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.