30 ಕೃಷಿ ಉತ್ಪನ್ನಗಳ ರಾಶಿ ಮಾಡುವ ಯಂತ್ರ

ಇತರೆ ಕೃಷಿ ಕಾರ್ಯಗಳಿಗೂ ಬಳಕೆ ; ಇಲೆಕ್ಟ್ರಿಕ್‌ ವಾಹನ ಸಹಿತ ಆವಿಷ್ಕಾರ ; ರೈತರಿಂದ ಉತ್ತಮ ಪ್ರತಿಕ್ರಿಯೆ

Team Udayavani, Jun 15, 2022, 10:26 AM IST

2

ಹುಬ್ಬಳ್ಳಿ: ರೈತರು ಕೃಷಿ ಉತ್ಪನ್ನಗಳ ರಾಶಿ ಮಾಡುವುದನ್ನು ಸುಲಭವಾಗಿಸಲು ವಿಶ್ವಕರ್ಮ ಅಗ್ರಿಕಲ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ, ಇಲೆಕ್ಟ್ರಿಕ್‌ ವಾಹನದೊಂದಿಗೆ ಸುಮಾರು 30 ಕೃಷಿ ಉತ್ಪನ್ನಗಳನ್ನು ರಾಶಿ ಮಾಡಬಹುದಾದ ಯಂತ್ರವನ್ನು ರೈತರಿಗೆ ಪರಿಚಯಿಸಿದ್ದು, ಈ ವಾಹನ ಕೇವಲ ಕೃಷಿ ಉತ್ಪನ್ನಗಳ ರಾಶಿ ಮಾಡುವುದಷ್ಟೇ ಅಲ್ಲದೆ ಇತರೆ ಕೃಷಿ ಕಾರ್ಯಗಳಿಗೂ ಬಳಕೆಯಾಗಲಿದೆ.

ಗುಜರಾತ್‌ನ ತಾಂತ್ರಿಕ ವಿಶ್ವವಿದ್ಯಾಲಯದ ಇನೊವೇಶನ್‌ ಪರಿಷತ್ತು ಮತ್ತು ವಿನ್ಯಾಸ ಇನೋವೇಶನ್‌ ಕೇಂದ್ರ ಇಲೆಕ್ಟ್ರಿಕ್‌ ವಾಹನ ಸಹಿತವಾಗಿ ಒಂದೇ ಯಂತ್ರದಲ್ಲಿ ಸುಮಾರು 30 ತರಹದ ಕೃಷಿ ಉತ್ಪನ್ನಗಳನ್ನು ರಾಶಿ ಮಾಡುವ ಯಂತ್ರವನ್ನು ಅವಿಷ್ಕರಿಸಿದ್ದು, ವಿಶ್ವಕರ್ಮ ಅಗ್ರಿಕಲ್ಚರ್‌ ಕಂಪೆನಿ ಇದನ್ನು ರಾಜ್ಯದ ರೈತರಿಗೆ ಪರಿಚಯಿಸಲು ಮುಂದಾಗಿದೆ.

ರೈತರು ಕೃಷಿ ಉತ್ಪನ್ನಗಳ ರಾಶಿ ಮಾಡುವುದಕ್ಕೆ ಕೃಷಿ ಕೂಲಿಕಾರರ ಕೊರತೆ, ಹವಾಮಾನ ಇನ್ನಿತರೆ ಸಮಸ್ಯೆಗಳಿಂದ ಸಕಾಲಕ್ಕೆ ರಾಶಿ ಮಾಡದೆ ಹೋದರೆ ಬೆಳೆದ ಬೆಳೆ ಹಾನಿಗೀಡಾಗಲಿದ್ದು, ಇದನ್ನು ತಪ್ಪಿಸಿ ರಾಶಿ ಮಾಡುವುದನ್ನು ಸುಲಭವಾಗಿಸಲು ಈ ಯಂತ್ರ ಮಹತ್ವದ ಸಹಕಾರಿ ಆಗಲಿದೆ.

ಇಲೆಕ್ಟ್ರಿಕ್‌ ವಾಹನ ವಿಎ ಇ100: ವಿಶ್ವಕರ್ಮ ಅಗ್ರಿಕಲ್ಚರ್‌ ಕಂಪೆನಿ ನವೋದ್ಯಮ ಆಗಿದ್ದು, ದೇಶಪಾಂಡೆ ಫೌಂಡೇಶನ್‌ ನೆರವಿನೊಂದಿಗೆ ರಾಜ್ಯದಲ್ಲೇ ಮೊದಲೆನ್ನಬಹುದಾದ ಇಲೆಕ್ಟ್ರಿಕ್‌ ಟ್ರಾÂಕ್ಟರ್‌ ಸಹಿತ 30 ಕೃಷಿ ಉತ್ಪನ್ನಗಳ ರಾಶಿ ಯಂತ್ರವನ್ನು ರೈತರಿಗೆ ಪರಿಚಯಿಸಲು ಮುಂದಾಗಿದೆ. ಗುಜರಾತ್‌ನಲ್ಲಿ ಇಂತಹ ಯಂತ್ರಗಳು ಈಗಾಗಲೇ ರೈತರಿಗೆ ಮಾರಾಟವಾಗಿದ್ದು, ರೈತರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ರಾಶಿ ಯಂತ್ರಕ್ಕೆ ಪೂರಕವಾಗಿ ಇಲೆಕ್ಟ್ರಿಕ್‌ ವಾಹನವನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಎ ಇ100 ಹೆಸರಿನ ಈ ವಾಹನ ಸ್ಮಾರ್ಟ್‌ ಸೌಲಭ್ಯಗಳನ್ನು ಹೊಂದಿದ್ದು, ಬಹುಪಯೋಗಿಯಾಗಿದೆ. ಈ ವಾಹನ ಸುಮಾರು 10 ಕಿಲೋವ್ಯಾಟ್‌ ಇವಿ ಸಾಮರ್ಥ್ಯದ ಪವರ್‌ಟ್ರೇನ್‌ ಸಿಸ್ಟಮ್‌ ಹೊಂದಿದ್ದು, 6 ಕಿಲೋವ್ಯಾಟ್‌ ಲಿ-ಐಯೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದೆ. ಬ್ಯಾಟರಿಯನ್ನು ಎರಡು ತಾಸು ಚಾರ್ಚ್‌ ಮಾಡಿದರೆ ಸಾಕು ಸುಮಾರು 8 ತಾಸುಗಳವರೆಗೆ ಕಾರ್ಯ ನಿರ್ವಹಿಸಲಿದೆ. ಇದದಲ್ಲಿ ಸುಮಾರು 30 ತರಹದ ಕೃಷಿ ಉತ್ಪನ್ನಗಳ ರಾಶಿ ಮಾಡಬಹುದಾಗಿದೆ. ಜತೆಗೆ ತುರ್ತು ಸಂದರ್ಭದ ಬ್ಯಾಟರಿ ನೀಡಲಾಗಿದ್ದು, ಇದು ಹೆಚ್ಚುವರಿಯಾಗಿ 2 ತಾಸುಗಳವರೆಗೆ ಕಾರ್ಯ ನಿರ್ವಹಣೆ ಮಾಡಲಿದೆ.

ಇಲೆಕ್ಟ್ರಿಕ್‌ ವಾಹನ ಸಮೇತ 30 ತರಹದ ಕೃಷಿ ಉತ್ಪನ್ನಗಳ ರಾಶಿ ಮಾಡುವ ಯಂತ್ರ 2.5ರಿಂದ 3 ಲಕ್ಷ ರೂ.ನಲ್ಲಿ ರೈತರಿಗೆ ದೊರೆಯಲಿದೆ. ಮಧ್ಯಮ ರೈತರು ಸಹ ಇದನ್ನು ಖರೀದಿಸಬಹುದಾಗಿದೆ. ಜತೆಗೆ ರೈತರಿಗೆ ನಿರ್ವಹಣೆ ಸುಲಭವಾಗಿಸುವ ವ್ಯವಸ್ಥೆ ಅಳವಡಿಸಲಾಗಿದೆಯಂತೆ. ರೈತರಿಗೆ ಪ್ರಯೋಜನಕಾರಿ ಆಗಬಹುದಾದ ಸುಲಭ ನಿರ್ವಹಣೆ ಹಾಗೂ ತೈಲ ಬಳಕೆ ಇಲ್ಲದ ಪರಿಸರ ಸ್ನೇಹಿ ಇಲೆಕ್ಟ್ರಿಕ್‌ ವಾಹನ ಸಮೇತ 30 ಕೃಷಿ ಉತ್ಪನ್ನಗಳ ರಾಶಿ ಯಂತ್ರದ ಉತ್ಪಾದನೆ ರೈತರಿಗೆ ನೀಡಲು ಮುಂದಾಗಿರುವುದು ಸಂತಸ ತರಿಸಿದೆ ಎಂಬುದು ವಿಶ್ವಕರ್ಮ ಅಗ್ರಿಕಲ್ಚರ್‌ ಕಂಪೆನಿಯ ಸಂಸ್ಥಾಪಕರಾದ ವೃತಿಕ ಪಂಚಾಲ, ಅರುಣ ಪಂಚಾಲ ಅವರ ಅನಿಸಿಕೆ.

ಒಂದು ತಾಸಿಗೆ ಒಂದೂವರೆ ಟನ್‌ ಶೇಂಗಾ ರಾಶಿ: ಕೃಷಿ ಉತ್ಪನ್ನಗಳ ರಾಶಿ ಯಂತ್ರ ಒಟ್ಟು 24 ಬ್ಲೇಡ್‌ಗಳನ್ನು ಒಳಗೊಂಡಿದೆ. ರೈತರು ರಾಶಿ ಮಾಡುವ ಸಂದರ್ಭದಲ್ಲಿ ಬೇರೆ ಬೇರೆ ಕೃಷಿ ಉತ್ಪನ್ನಗಳಿಗೆ ಬ್ಲೇಡ್‌ಗಳನ್ನು ಬದಲಾಯಿಸಬೇಕಾದ ಪದ್ಧತಿ ಸದ್ಯದ ರಾಶಿ ಯಂತ್ರಗಳಲ್ಲಿ ಇದೆ. ಆದರೆ ಈ ಯಂತ್ರದಲ್ಲಿ ಯಾವುದೇ ಬ್ಲೇಡ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲ. ಯಂತ್ರಕ್ಕೆ ವೇಗ ನಿಯಂತ್ರಕ ವ್ಯವಸ್ಥೆ ಅಳವಡಿಸಲಾಗಿದೆ. ಇದು ಮೂರು ಹಂತದ ವೇಗ ಹೊಂದಿದೆ. ಅತಿಯಾದ ವೇಗ, ಮಧ್ಯಮ ವೇಗ, ನಿಧಾನ ವೇಗ ವ್ಯವಸ್ಥೆ ಇರಿಸಲಾಗಿದೆ. ಯಾವ ಉತ್ಪನ್ನದ ರಾಶಿಗೆ ಯಾವ ವೇಗ ಇರಿಸಬೇಕೆಂಬ ಸ್ಪಷ್ಟ ಮಾಹಿತಿಯನ್ನು ಯಂತ್ರದೊಂದಿಗೆ ನೀಡಲಾಗುತ್ತಿದೆ. ರೈತರು ಆಯಾ ಬೆಳೆಯ ರಾಶಿಗೆ ತಕ್ಕಂತೆ ವೇಗ ನಿಗದಿ ಪಡಿಸಿದರೆ ಸಾಕು ಸುಲಭವಾಗಿ ರಾಶಿ ಮಾಡಬಹುದಾಗಿದೆ.

ಹೆಸರು, ಜೋಳ, ಮೆಕ್ಕೆಜೋಳ, ಶೇಂಗಾ, ಭತ್ತ, ಸಿರಿಧಾನ್ಯಗಳು, ಕಡಲೆ, ತೊಗರಿ ಹೀಗೆ ಸುಮಾರು 30 ತರಹದ ಕೃಷಿ ಉತ್ಪನ್ನಗಳ ಒಂದೇ ಯಂತ್ರದಲ್ಲಿ ರಾಶಿ ಮಾಡಬಹುದಾಗಿದೆ. ಒಂದು ತಾಸಿಗೆ ಸುಮಾರು ಒಂದು ಟನ್‌ನಷ್ಟು ಶೇಂಗಾ ರಾಶಿ ಮಾಡಬಹುದಾದ ಸಾಮರ್ಥ್ಯ ಈ ಯಂತ್ರ ಹೊಂದಿದೆಯಂತೆ. ಜತೆಗೆ ರಾಶಿ ಮಾಡುವಾಗ ರೈತರಿಗೆ ಯಾವುದೇ ಅಪಾಯ ಆಗದಂತೆಯೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ವಾಹನ ಸಮೇತ ಯಂತ್ರದ ನಿರ್ವಹಣೆ ವಿಚಾರಕ್ಕೆ ಬಂದರೆ ಸುಲಭ-ಸರಳ ರೀತಿಯ ನಿರ್ವಹಣೆ ವ್ಯವಸ್ಥೆ ಕಲ್ಪಿಸಲಾಗಿದೆ. ವರ್ಷಕ್ಕೊಮ್ಮೆ ಬ್ಲೇಡ್‌ಗಳ ಸ್ಥಿತಿಗತಿ ಗಮನಿಸಿ ಬದಲಾಯಿಸಬೇಕಾಗುತ್ತದೆ. ಇಲೆಕ್ಟ್ರಿಕ್‌ ವಾಹನ 8 ವರ್ಷಗಳು ಹಾಗೂ ಬ್ಯಾಟರಿ 3-5 ವರ್ಷಗಳವರೆಗೆ ವಾರೆಂಟಿ ಹೊಂದಿದೆ. ­

ರೈತರಿಗೆ ಪ್ರಯೋಜನಕಾರಿ ಕೃಷಿ ಉತ್ಪನ್ನಗಳ ರಾಶಿ ಯಂತ್ರದ ಜತೆಗೆ ಪರಿಸರ ಸ್ನೇಹಿ ಇಲೆಕ್ಟ್ರಿಕ್‌ ವಾಹನ ನೀಡಲಾಗುತ್ತಿದೆ. ವಿಎ ಇ-100 ವಾಹನವನ್ನು ಹೊಲ-ಗದ್ದೆಗಳಿಗೂ ಸುಲಭವಾಗಿ ಬಳಕೆಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಹೊಲಗಳಲ್ಲಿ ಕೆಸರು ಇರುತ್ತದೆ ಅದಕ್ಕೂ ಹೊಂದಿಕೊಳ್ಳುವ ರೀತಿ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಹೊಸತನ ಸೇರಿಸುವ ಚಿಂತನೆ ಹೊಂದಲಾಗಿದೆ. –ಕಾರ್ತಿಕ ಅರ್ಥೇಯ, ವಿಶ್ವಕರ್ಮ ಅಗ್ರಿಕಲ್ಚರ್‌

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.