Malaprabha ಮತ್ತೆ ಪ್ರವಾಹದ ಭೀತಿ; ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ
Team Udayavani, Aug 27, 2024, 9:08 PM IST
ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ): ನವಿಲುತೀರ್ಥ ಜಲಾಶಯದಿಂದ ಮತ್ತೆ ಮಲಪ್ರಭಾ ನದಿಗೆ ನೀರನ್ನು ಬಿಡಲಾಗಿದೆ. ಎರಡು ದಿನಗಳ ಹಿಂದೆ 2ರಿಂದ 8ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗಿತ್ತು. ಸದ್ಯ 10ರಿಂದ 15 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದ್ದು ಪ್ರವಾಹದ ನೀರು ನದಿ ಪಾತ್ರದ ಗ್ರಾಮಗಳಿಗೆ ತಟ್ಟಲಿದೆ.
ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು ಸತತ ಮಳೆಗೆ ನವಿಲುತಿರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಆಣೆಕಟ್ಟಿನ ಪೂರ್ಣಮಟ್ಟ 2079.50 ಅಡಿಗಳಿಗೆ ವಿರುದ್ದವಾಗಿ 2078.10 ಅಡಿಗಳಿಗೆ ತಲುಪಿದೆ. ಪ್ರಸ್ತುತ ಒಳಹರಿವು 10,000 ಸಾವಿರ ಕ್ಯೂಸೆಕ್ ಇದ್ದು ಮುಂಜಾಗೃತಾ ಕ್ರಮವಾಗಿ 15,000 ಸಾವಿರ ಕ್ಯೂಸೆಕ್ ನದಿ ಮೂಲಕ ಹೊರ ಬಿಡಲಾಗಿದೆ. ಮಲಪ್ರಭಾ ಅಣೆಕಟ್ಟಿನ ಕೆಳಭಾಗದಲ್ಲಿನ ಗ್ರಾಮಗಳಿಗೆ ಜಲಾಶಯದ ಅಭಿಯಂತರ ವಿವೇಕ ಮುದಿಗೌಡ್ರ ಎಚ್ಚರಿಕೆ ನೀಡಿದ್ದು ಮುಂಜಾಗೃತ ವಹಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರಿಗೆ ವಿನಂತಿಸಿದ್ದಾರೆ.
ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಬೀತಿ ಶುರುವಾಗಿದೆ. ಕಳೆದ ತಿಂಗಳಿಂದ ಪ್ರವಾಹದ ನೀರು ಬಂದು ರೈತರ ಬೆಳೆಗಳು ನಾಶವಾಗಿದ್ದವು. ಸದ್ಯ ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದ ರೈತರು ಮತ್ತೆ ಪ್ರವಾಹದ ಬೀತಿ ಎದುರಿಸುವಂತಾಗಿದೆ. ಚೇತರಿಸಿಕೊಂಡ ಪೇರಲ ಸೇರಿದಂತೆ ತೋಟಗಾರಿಕೆ ಬೆಳೆಗಳು ಮತ್ತೆ ಜಲಾವೃತಗೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೇತುವೆ ಜಲಾವೃತ: ಹುಬ್ಬಳ್ಳಿ-ಸೊಲ್ಲಾಪೂರ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಹಳೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!
Road Mishap: ಸ್ಕೂಟಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಮೃತ್ಯು
Karnataka Govt.,ಅಭಿವೃದ್ದಿ ಮೂಲಕವೇ ಉತ್ತರ ನೀಡುತ್ತೇವೆ: ಸಚಿವ ಆರ್.ಬಿ. ತಿಮ್ಮಾಪುರ
ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳನ್ನು ಅಲೆದಾಡಿಸದಿರಿ- ಸಂಸದ ಪಿ.ಸಿ.ಗದ್ದಿಗೌಡರ
Ration Card; ಬಾಗಲಕೋಟೆಯಲ್ಲಿ 214 ಸರ್ಕಾರಿ ನೌಕರರ ಬಳಿ ಬಿಪಿಎಲ್
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.