Jailer ಸಿನೆಮಾದ `ವರ್ಮಾ’ ಪಾತ್ರಕ್ಕೆ ಮೊದಲ ಆಯ್ಕೆಯಾಗಿದ್ದ ಮಲಯಾಳಂ ಸ್ಟಾರ್ ಮಮ್ಮುಟ್ಟಿ
ರಜನಿಕಾಂತ್ ಸ್ವತಃ ಕರೆ ಮಾಡಿ ಮಮ್ಮುಟ್ಟಿಗೆ ವಿಚಾರ ತಿಳಿಸಿದ್ದರು... ಆದರೆ...
Team Udayavani, Aug 17, 2023, 6:14 PM IST
ಚೆನ್ನೈ: ತಮಿಳು ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ʻಜೈಲರ್ʼ ಸಿನೆಮಾ ಆಗಸ್ಟ್ 10 ರಂದು ರಿಲೀಸ್ ಆಗಿದೆ. ಕನ್ನಡ ಸೂಪರ್ಸ್ಟಾರ್ ಶಿವರಾಜ್ಕುಮಾರ್ ಮತ್ತು ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರನ್ನೊಳಗೊಂಡ ಈ ಸಿನೆಮಾದ ಕಲೆಕ್ಷನ್ ಬಿಡುಗಡೆಯಾದ ಒಂದೇ ವಾರದಲ್ಲಿ 350 ಕೋಟಿ ರೂ ಸನಿಹ ತಲುಪಿ ದಾಖಲೆ ಬರೆದಿದೆ.
ಈ ಸಿನೆಮಾದಲ್ಲಿನ ʻವರ್ಮಾʼ ಹೆಸರಿನ ಖಳ ಪಾತ್ರದಲ್ಲಿ ಮಲಯಾಳಂ ನಟ ವಿನಾಯಕನ್ ಅಭಿನಯಿಸಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಆದರೆ ಖಳ ನಾಯಕ ʻವರ್ಮಾʼ ಪಾತ್ರಕ್ಕೆ ಮೊದಲ ಆಯ್ಕೆ ವಿನಾಯಕನ್ ಆಗಿರಲಿಲ್ಲ. ಬದಲಾಗಿ ಈ ಪಾತಯ್ರದ ಮೊದಲ ಆಯ್ಕೆ ಮಲಯಾಳಂ ದಿಗ್ಗಜ ನಟ ಮ್ಮಮ್ಮುಟ್ಟಿ ಆಗಿದ್ದರಂತೆ. ʻಜೈಲರ್ʼ ನಲ್ಲಿ ರಜನಿಕಾಂತ್ನ ಮಗನ ಪಾತ್ರದಲ್ಲಿ ಅಭಿನಯಿಸಿರುವ ವಸಂತ್ ರವಿ ಅವರೇ ಈ ಮಾಹಿತಿಯನ್ನು ಹೊರಹಾಕಿದ್ದಾರೆ.
ಮಾಧ್ಯಮವೊಂದಕ್ಕೆ ಮಾತನಾಡುವ ವೇಳೆ ವಸಂತ್ ರವಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ʻಜೈಲರ್ನಲ್ಲಿನ ವಿಲನ್ ರೋಲ್ಗೆ ಮಮ್ಮುಟ್ಟಿ ಅವರೇ ಮೊದಲ ಆಯ್ಕೆಯಾಗಿದ್ದರು. ಈ ವಿಚಾರವನ್ನು ಸ್ವತ ರಜನಿ ಸರ್ ಅವರೇ ನನ್ನೊಂದಿಗೆ ಹೇಳಿದ್ದರು. ನಿರ್ದೇಶಕ ನೆಲ್ಸನ್ ಅವರು ಮಮ್ಮುಟ್ಟಿ ಅವರು ವರ್ಮಾ ರೋಲ್ಗೆ ಮೊದಲ ಆಯ್ಕೆ ಎಂಬುದಾಗಿ ರಜನಿಕಾಂತ್ ಅವರ ಬಳಿ ಹೇಳಿದಾಗ ನೇರವಾಗಿ ಮಮ್ಮುಟ್ಟಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದರೆ ಆ ಬಳಿಕ ವಿನಾಯಕ್ ಅವರನ್ನು ಎರಡನೇ ಆಯ್ಕೆಯಾಗಿ ಮಾಡಿಕೊಳ್ಳಲಾಗಿತ್ತು. ಮಮ್ಮುಟ್ಟಿ ಅವರು ಮಲಯಾಳಂನ ಹಿರಿಯ ದಿಗ್ಗಜ ನಟನಾಗಿರುವುದರಿಂದ ಅವರು ವರ್ಮಾ ಪಾತ್ರದಲ್ಲಿ ನಟಿಸುವುದು ರಜನಿಕಾಂತ್ ಅವರಿಗೆ ಯಾಕೋ ಸರಿ ಕಾಣಿಸಿರಲಿಲ್ಲʼ ಎಂದು ಹೇಳಿದ್ದಾರೆ.
ʻಇಷ್ಟೊಂದು ನೆಗೆಟಿವಿಟಿ ಇರುವ ಪಾತ್ರವನ್ನು ದಿಗ್ಗಜ ಎನಿಸಿಕೊಂಡಿರುವ ಮಮ್ಮುಟ್ಟಿ ಅವರಿಂದ ಮಾಡಿಸುವುದು ಉತ್ತಮ ನಡೆಯಾಗಿರಲಿಲ್ಲ. ಅದು ಅವರಿಗಾಗಿ ಮಾಡಿರುವ ಪಾತ್ರವೂ ಆಗಿರಲಿಲ್ಲ. ಹಾಗಾಗಿ ಈ ವಿಚಾರವನ್ನು ಮಮ್ಮುಟ್ಟಿ ಅವರಿಗೆ ಮನವರಿಕೆ ಮಾಡಿಕೊಟ್ಟ ರಜನಿಕಾಂತ್ ಮುಂದೊಂದು ದಿನ ನಾವಿಬ್ಬರೂ ಜೊತೆಯಾಗಿ ಇನ್ನೊಂದು ಸಿನೆಮಾದಲ್ಲಿ ನಟಿಸೋಣʼ ಎಂದಿದ್ದರು ಎಂದು ವಸಂತ್ ರವಿ ಹೇಳಿದ್ದಾರೆ.
ಇದನ್ನೂ ಓದಿ: Jailer: ರಜಿನಿಕಾಂತ್ ʼಜೈಲರ್ʼಗೂ ಪ್ರಭಾಸ್ ʼಸಲಾರ್ʼಗೂ ಇದೆ ಒಂದು ಕನೆಕ್ಷನ್: ಏನದು?
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್
Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ
Kadaba: ಕಾರು – ಬೈಕ್ ಅಪಘಾತ; ಸವಾರ ಮೃತ್ಯು
Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.