![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 16, 2021, 6:47 PM IST
ಮಂಗಳೂರಿನ ಮಾಂಡೋವಿ ತಂಡ ಇದೀಗ ಮತ್ತೆ ಕಾರು ರೇಸಿಗೆ ಸಜ್ಜಾಗಿದೆ. ಮೂರು ವರ್ಷಗಳ ಬಳಿಕ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುತ್ತಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ತಂಡ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದೆ.
ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನಲ್ಲಿ ಮಾಂಡೋವಿ ತಂಡ ಭಾರತದಲ್ಲಿ ಸಿದ್ಧಗೊಂಡಿರುವ ಮಾರುತಿ ಸುಜುಕಿ ಬೆಲೆನೊ ಆರ್ ಎಸ್ ಕಾರಿನ ಜೊತೆ ಕಣಕ್ಕಿಳಿಯಲಿದೆ. ಈ ಕಾರನ್ನು ಅನುಭವಿ ಚಾಲಕ ಆರೂರ್ ಅರ್ಜುನ್ ರಾವ್ ಮತ್ತು ಮತ್ತೋರ್ವ ಅನುಭವಿ ಹಿರಿಯ ಸಹ ಚಾಲಕ ಸತೀಶ್ ರಾಜಗೋಪಾಲ್ ಡ್ರೈವ್ ಮಾಡಲಿದ್ದಾರೆ.
ಅರ್ಜುನ್ ರಾವ್ ಬಗ್ಗೆ ಹೇಳುವುದಾದರೆ ಕಾರ್ ರೇಸಿಂಗ್ ನಲ್ಲಿ ಇವರು ಪರಿಣಿತರು. ಇವರು ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ ನಾಲ್ಕು ಬಾರಿ ಐಎನ್ಆರ್ ಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. 1600 ವಿಭಾಗದಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದಾರೆ. ಒಂದು ಬಾರಿ ರ್ಯಾಲಿ ಸ್ಟಾರ್ ಕಪ್ ಗೆ ಮುತ್ತಿಕ್ಕಿದ್ದಾರೆ. ಇವುಗಳ ಜೊತಗೆ ಮಲೇಷಿಯಾದ ರ್ಯಾಲಿ ಗ್ರೂಪ್ ನಲ್ಲಿದ್ದ ಇವರು 2009ರಲ್ಲಿ ಚಾಂಪಿಯನ್ ಆಗಿಯೂ ಹೊರ ಹೊಮ್ಮಿದ್ದಾರೆ.
ಇನ್ನು ರೇಸಿನಲ್ಲಿ ಪಾಲ್ಗೊಳ್ಳುತ್ತಿರುವ ಮಾಂಡೋವಿ ತಂಡಕ್ಕೆ ಪ್ರಸಿದ್ಧ ಎಂಆರ್ ಎಫ್ ಟೈರ್ ಕಂಪನಿ ಕೈ ಜೋಡಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.