Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

ಅನೇಕ ನಾಸ್ತಿಕರನ್ನು ತನ್ನ ಮಹಿಮೆಯಿಂದ ಆಸ್ತಿಕರನ್ನಾಗಿಸಿದ ಉದಾಹರಣೆಗಳಿವೆ...

Team Udayavani, Dec 20, 2024, 5:36 PM IST

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

ಚಿಕ್ಕರಸಿನಕೆರೆ ಎಂದರೆ ತಕ್ಷಣ ನೆನಪಾಗುವುದೇ ಕಲಿಯುಗದ ದೈವ ಎಂದು ಪ್ರಖ್ಯಾತಿ ಪಡೆದಿರುವ ಬಸವ. ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿರುವ ಬಸವಪ್ಪನ ಪವಾಡಗಳು ಒಂದೆರಡಲ್ಲ. ರಾಜ್ಯ, ಹೊರ ರಾಜ್ಯಗಳಿಂದ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ದೇವಾಲಯಕ್ಕೆ ಆಗಮಿಸುವ ಜನ ತಪ್ಪ ಕಷ್ಟಕಾರ್ಪಣ್ಯಗಳನ್ನು ಬಸವನ ಮುಂದೆ ಹೇಳಿಕೊಂಡು ಪರಿಹಾರ ಪಡೆದಿರುವ ಉದಾಹರಣೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಚಿಕ್ಕರಸಿನಕೆರೆ ಗ್ರಾಮ ನಿರ್ಮಾಣವಾದ ಬಗೆ, ಅಲ್ಲಿ ನಡೆಯುವ ವಿಶೇಷತೆಗಳ ಕುರಿತು ಒಂದು ಲೇಖನ.

ಭಾರತೀನಗರ: ತಾಲೂಕು ಕೇಂದ್ರ ಮದ್ದೂರುನಿಂದ 7 ಕಿ.ಮೀ., ಮಂಡ್ಯದಿಂದ 20 ಕಿ.ಮೀ. ದೂರದಲ್ಲಿರುವ ಚಿಕ್ಕರಸಿನಕೆರೆ ಬಸಪ್ಪ ಕಷ್ಟ ಅಂತ ಬರುವ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ರಾಜ್ಯ, ಅಂತರ ರಾಜ್ಯಗಳಲ್ಲಿ ತನ್ನ ಖ್ಯಾತಿಯನ್ನು
ಪ್ರಖ್ಯಾತಿಗೊಳಿಸಿಕೊಂಡಿರುವ ಕಲಿಯುಗ ದೈವ ಚಿಕ್ಕರಸಿನಕೆರೆ ಬಸವ. ನ್ಯಾಯಾಧೀಶ ಬಸಪ್ಪ ಚಿಕ್ಕರಸಿನಕೆರೆ ಕಾಲಭೈರವೇಶ್ವರ
ದೇಗುಲದಲ್ಲಿರುವ ಬಸಪ್ಪನ ಬಗ್ಗೆ ಅನೇಕ ಕಥೆಗಳಿವೆ. ಕಳ್ಳರು ಹಾಗೂ ಮೋಸಗಾರರಿಗೆ ಸಿಂಹಸ್ವಪ್ನವಾಗಿ ವಿವಿಧ ಗ್ರಾಮಗಳಲ್ಲಿ ದೇವಸ್ಥಾನದ ಜಮೀನುಗಳ ಒತ್ತುವರಿ ತೆರವುಗೊಳಿಸುವ ಮೂಲಕ ಸುತ್ತಮುತ್ತಲ ಗ್ರಾಮಗಳ ಹಾಗೂ ಜಿಲ್ಲೆಗಳ ಜನರಲ್ಲಿ ಅಪಾರ ದೈವಭಕ್ತಿಯನ್ನುಂಟು ಮಾಡುವಲ್ಲಿ ಬಸವ ತನ್ನ ವೈಶಿಷ್ಟತೆ ಮೆರೆಯುತ್ತಾನೆ. ಅನೇಕ ನಾಸ್ತಿಕರನ್ನು ತನ್ನ ಮಹಿಮೆಯಿಂದ ಆಸ್ತಿಕರನ್ನಾಗಿಸಿದ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ಸ್ಥಳೀಯರು.

ಏಪ್ರಿಲ್‌ನಲ್ಲಿ ಕಾಲಭೈರವೇಶ್ವರ ಜಾತ್ರೆ
ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಿನಲ್ಲಿ ನಡೆಯುತ್ತದೆ. ಆದಾದ ನಂತರ ಕಾರ್ತಿಕ ಮಾಸದ ದೀಪಾವಳಿ
ಸಂಭ್ರಮದಲ್ಲಿ ಬಸಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದು ಬಿಟ್ಟರೆ ವಿವಿಧ ಊರುಗಳಿಗೆ ಬಸಪ್ಪನ ಭೇಟಿ ಪೂರ್ವನಿಗದಿಯಂತೆ, ಕೆಲವೊಮ್ಮೆ ಅಚಾನಕ್‌ ಆಗಿ ಆಗುವುದೂ ಉಂಟು. ಚಿಕ್ಕರಸಿನಕೆರೆ ಅಲ್ಲದೇ, ಕಾರ್ಕಹಳ್ಳಿಯಲ್ಲೂ ಬಸವ ಇದ್ದು, ಎರಡು ದೈವಿ ಬಸವಗಳು ಭಾವ ಬಾಮೈದ ಬಸವಗಳು ಜನರ ಆಸ್ತಿಕತೆಯ ಪ್ರತೀಕವಾಗಿವೆ.

ಬಸವನಿಗೆ ಪೂಜೆ
ಬಸಪ್ಪನ ಜಾತ್ರೆಯಂದು ಚಿಕ್ಕರಸಿನಕೆರೆ, ಹುಣ್ಣನದೊಡ್ಡಿ ಹಾಗೂ ಗುರುದೇವರಹಳ್ಳಿ ಗ್ರಾಮದವರಿಂದ ಕೊಂಡಬಂಡಿ ಉತ್ಸವ, ಕಾಳಮ್ಮ ಕಾರ್ಕಹಳ್ಳಿ ಬಸವೇಶ್ವರ, ಕಾಲಭೈರವೇಶ್ವರ ಸೇರಿದಂತೆ ದೇವಾನುದೇವತೆಗಳಿಗೆ ಶಿಂಷಾನದಿಯಲ್ಲಿ ಹೂ-ಹೊಂಬಾಳೆ ಕಾರ್ಯಕ್ರಮ, ಮಹಾಪೂಜೆಯ ಬಳಿಕ ಪ್ರಮುಖ ಬೀದಿಗಳಲ್ಲಿ ಬಸಪ್ಪನ ಮೆರವಣಿಗೆ ನಡೆಸಲಾಗುತ್ತದೆ. ಭಕ್ತರು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ರೀತಿಯ ಪುಷ್ಪಾಭಿಷೇಕ ನಡೆಸಲಾಗುತ್ತದೆ. ಬಸಪ್ಪನ ಕೊಂಬಿಗೆ ಕಟ್ಟಲಾಗಿರುವ ಕಾಣಿಕೆ ದುಡ್ಡನ್ನು ಎಂದಿಗೂ ಯಾರೂ ಮುಟ್ಟುವುದಿಲ್ಲ.

ಗ್ರಾಮ ನಿರ್ಮಾಣದ ಇತಿಹಾಸ
ಹಬ್ಬದ ದಿನದಿಂದು ಬಹುಕಾಲದ ಹಿಂದೆ ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಇಬ್ಬರು ಅಕ್ಕ-ತಂಗಿಯರಿದ್ದರು. ಅವರಿಬ್ಬರು ಎರಡು ಕೆರೆಗಳನ್ನು ಕಟ್ಟಿಸಿದರು. ನಂತರದ ದಿನಗಳಲ್ಲಿ ಚಿಕ್ಕಅರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ಚಿಕ್ಕರಸಿನಕೆರೆ ಎಂತಲೂ, ದೊಡ್ಡರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ದೊಡ್ಡರಸಿನಕೆರೆ ಎಂದು ನಾಮಕರಣ ಮಾಡಲಾಯಿತು.

ಚಿಕ್ಕರಸಿನಕೆರೆಯಲ್ಲಿ ಶತಮಾನದ ದಿನಗಳ ಹಿಂದೆ ಹುತ್ತವೊಂದು ಬೆಳೆದುಕೊಡಿತ್ತು. ದೊಡ್ಡರಸಿನಕೆರೆ ಗ್ರಾಮದ ಬ್ರಾಹ್ಮಣರ ಕುಟುಂಬದ ಹಸುವೊಂದು ಮನೆಯಲ್ಲಿ ಹಾಲಿನ ಬದಲು ರಕ್ತವನ್ನು ನೀಡಿ ಚಿಕ್ಕರಸಿನಕೆರೆ ಬಳಿಗೆ ಬಂದು ಹುತ್ತದ ಬಳಿ ಹಾಲನ್ನು ಸುರಿಸುತ್ತಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಹುತ್ತವನ್ನು ಅಗೆದು ನೋಡುವಷ್ಟರಲ್ಲಿ ಭೂಮಿಯೊಳಗೆ ಶ್ರೀಕಾಲಭೈರವೇಶ್ವರ ಬಸವನ ವಿಗ್ರಹವು ದೊರೆತಿದೆ. ನಂತರ ಗ್ರಾಮಸ್ಥರು ಆ ವಿಗ್ರಹವನ್ನು ಅಲ್ಲೇ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ದೇವರ ಹೆಸರಿನಲ್ಲಿ ಬಸವ ಬಿಡುತ್ತ ಪ್ರತಿವರ್ಷವೂ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವರಿಗೆ ಬೋರದೇವರೆಂಬ ಮತ್ತೊಂದು ಹೆಸರು ಸಹ ಇದೆ.

ಸಿಂಹ ಸ್ವಪ್ನನಾದ ಕಾಲಭೈರವ
ಪರಮಶಿವನ ಸಂಹಾರಿ ಗಣಗಳಾದ ಕಾಲ ಭೈರವ, ಅಸಿತಾಂಗ ಭೈರವ, ಸಂಹಾರ ಭೈರವ, ರುರು ಭೈರವ, ಕ್ರೋಧ ಭೈರವ, ಕಪಾಲ ಭೈರವ, ರುದ್ರ ಭೈರವ ಹಾಗೂ ಉನ್ಮತ್ತ ಭೈರವ. ಈ ಪೈಕಿ ಅತ್ಯಂತ ಬಲಿಷ್ಠ ಹಾಗೂ ದುಷ್ಟರ ಪಾಲಿನ ಸಿಂಹಸ್ವಪ್ನನಾದ ಕಾಲಭೈರವ ಇಲ್ಲಿ ನೆಲೆಸಿದ್ದಾನೆ.

*ಅಣ್ಣೂರು ಸತೀಶ್‌

ಟಾಪ್ ನ್ಯೂಸ್

Team India player who took 27 bags to Aussie tour!

BCCI: ಆಸೀಸ್‌ ಪ್ರವಾಸಕ್ಕೆ ಬರೋಬ್ಬರಿ 27 ಬ್ಯಾಗ್‌ ಕೊಂಡೊಯ್ದಿದ್ದ ಟೀಂ ಇಂಡಿಯಾ ಆಟಗಾರ!

6-thirthahalli

Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?

5-bntwl

ನಿಯಂತ್ರಣ ತಪ್ಪಿ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದ ರಿಕ್ಷಾ; ಚಾಲಕ ಸ್ಥಳದಲ್ಲೇ ಸಾವು

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

1-ckm

Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ

Prayagraj: Car-bus collision: 10 devotees going to Kumbh Mela passed away

Prayagraj: ಕಾರು ಬಸ್‌ ಮುಖಾಮುಖಿ: ಕುಂಭಮೇಳಕ್ಕೆ ಹೋಗುತ್ತಿದ್ದ 10 ಭಕ್ತರು ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ

Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ

ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್‌ ಮಾದರಿ ಪಕ್ಷಿಧಾಮ

Tourism: ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್‌ ಮಾದರಿ ಪಕ್ಷಿಧಾಮ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

MUST WATCH

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

ಹೊಸ ಸೇರ್ಪಡೆ

Team India player who took 27 bags to Aussie tour!

BCCI: ಆಸೀಸ್‌ ಪ್ರವಾಸಕ್ಕೆ ಬರೋಬ್ಬರಿ 27 ಬ್ಯಾಗ್‌ ಕೊಂಡೊಯ್ದಿದ್ದ ಟೀಂ ಇಂಡಿಯಾ ಆಟಗಾರ!

4-shivapadi

Shivapadi: ರಾಜ್ಯಮಟ್ಟದ ಕೃಷಿ ಮೇಳದ ತಯಾರಿಯ ಸಮಾಲೋಚನ ಸಭೆ

6-thirthahalli

Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?

5-bntwl

ನಿಯಂತ್ರಣ ತಪ್ಪಿ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದ ರಿಕ್ಷಾ; ಚಾಲಕ ಸ್ಥಳದಲ್ಲೇ ಸಾವು

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.