ಮಂಗಳೂರು ಸಾಹಿತ್ಯ ಉತ್ಸವ ಸಂಪನ್ನ; ಭೂಮಿ ಹುಟ್ಟುವ ಮೊದಲೇ ಜನಿಸಿದ್ದು ಆದಿ ಜಾಂಬವ

ಸಾಮಾಜಿಕ ಜಾಲತಾಣ, ಡಿಜಿಟಲ್‌ ವೇದಿಕೆಗಳಲ್ಲೂ ಅಖ್ಯಾಯಿಕೆಗಳು ಇರುತ್ತವೆ

Team Udayavani, Feb 20, 2023, 6:21 PM IST

ಮಂಗಳೂರು ಸಾಹಿತ್ಯ ಉತ್ಸವ ಸಂಪನ್ನ; ಭೂಮಿ ಹುಟ್ಟುವ ಮೊದಲೇ ಜನಿಸಿದ್ದು ಆದಿ ಜಾಂಬವ

ಭಾರತ್‌ ಫೌಂಡೇಶನ್‌ ವತಿಯಿಂದ ಐದನೇ ಆವೃತ್ತಿಯ ಮಂಗಳೂರು ಲಿಟ್‌ಫೆಸ್ಟ್‌ ನ ಎರಡನೇ ದಿನದ ಕಾರ್ಯಕ್ರಮಗಳು ರವಿವಾರ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಭವನದಲ್ಲಿ ನಡೆಯಿತು. ಬೆಳಗ್ಗಿನಿಂದ ಸಂಜೆಯ ವರಗೆ ವಿವಿಧ ಗೋಷ್ಠಿಗಳು ಆಯೋಜನೆಗೊಂಡು ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು. ರಜಾದಿನವಾದ್ದ ರಿಂದ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಂಡು ಬಂತು.

ಆದಿಜಾಂಬವ ಮೂಲ ಪುರುಷರಾಗಿದ್ದು, ಭೂಮಿ ಹುಟ್ಟುವ 6 ತಿಂಗಳು ಮೊದಲೇ ಆತನ ಜನನ. ಆಗ ಎಲ್ಲ ಕಡೆಗಳಲ್ಲಿ ಸಮುದ್ರವಿತ್ತು. ಕಡಲಿನಲ್ಲಿ ಹುಟ್ಟಿದ ಕಾರಣ ಆತನಿಗೆ ಜಾಂಬವ ಎನ್ನುವ ಹೆಸರು ಬಂತು. ಅನಂತರದಲ್ಲಿ ಆದಿಮಾಯೆ, ಬ್ರಹ್ಮ,ವಿಷ್ಣು ಮಹೇಶ್ವರರ ಜನನವಾಗುತ್ತದೆ ಹೀಗೆಂದು ದಕ್ಕಲ ಜಾಂಬವ ಪುರಾಣದ 18 ಯುಗಗಳ ಕತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟವರು ದಕ್ಕಲ ಮುನಿಸ್ವಾಮಿ.

ಹರಟೆ ಕಟ್ಟೆಯಲ್ಲಿ ತಮ್ಮ ದಕ್ಕಲ ಜಾಂಬವ ಪುರಾಣದ ಕುರಿತು ಮಾತನಾಡಿದರು. ದಕ್ಕಲ ಮುನಿಸ್ವಾಮಿ ಅವರ ಒಡನಾಡಿಯಾಗಿರುವ ಘನಶ್ಯಾಮ್‌ ಅವರು ವಿವರಣೆ ನೀಡಿ, ಊರಿಂದ ಊರಿಗೆ ಹೋಗಿ ದಕ್ಕಲ ಜಾಂಬವ ಪುರಾಣವನ್ನು ಜನರಿಗೆ ಹೇಳಿ, ಕೊಟ್ಟ ಕಾಣಿಕೆಯನ್ನು ಸ್ವೀಕರಿಸಿ ಜೀವನ ನಡೆಸುತ್ತಾರೆ. ಸದ್ಯ ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದಾರೆ ಎಂದ ರು ಸತ್ಯಬೋಧ ಜೋಶಿ ಸಮನ್ವಯಕಾರರಾಗಿದ್ದರು.

ಯಕ್ಷಗಾನಕ್ಕೆ ಅಪಚಾರ ಖಂಡನೀಯ
ಯಕ್ಷಗಾನ ಆರಾಧನಾ ಕಲೆ ಯಾಗಿದ್ದು, ಸಾವಿರಾರು ಮಂದಿ ಅದರಿಂದಲೇ ಜೀವನ ನಡೆಸುತ್ತಿದ್ದಾರೆ. ಇಂತಹ ಕಲೆಯನ್ನು ಜಾಹೀರಾತು ಮತ್ತು ವೇದಿಕೆಗಳಲ್ಲಿ ಹಾಸ್ಯದ ರೀತಿಯಲ್ಲಿ ಬಿಂಬಿಸುತ್ತಿರುವುದು ಖಂಡನೀಯ. ಚೌಕಟ್ಟು ಮೀರಿದರೆ ಅದು ಕಲೆಗೆ ಅಪಚಾರ ಮಾಡಿದಂತೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಲಾಪ್ರೇಮಿಗಳು, ಸಾರ್ವಜನಿಕರ ಸಹಕಾರವೂ ಆಗತ್ಯ ಎಂದರು ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಹೇಳಿದರು.

ಲಿಟ್‌ಫೆಸ್ಟ್‌ ನ ಎರಡನೇ ದಿನದ ಗೋಷ್ಠಿಯಲ್ಲಿ “ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ’ ವಿಚಾರವಾಗಿ ಅವರು ಮಾತನಾಡಿದರು. ಯಕ್ಷಗಾನವನ್ನು ಕರಾವಳಿಗೆ ಮಾತ್ರ ಸೀಮಿತಗೊಳಿಸದೆ ರಾಜ್ಯ ಕಲೆಯಾಗಿ ಘೋಷಣೆ ಮಾಡವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ಮಹಿಳಾ ಯಕ್ಷಗಾನ ಕಲಾವಿದೆ ಸಿಎ ವೃಂದಾ ಕೊನ್ನಾರ್‌ ಅವರು ಮಾತನಾಡಿ, ಯಕ್ಷಗಾನದಲ್ಲಿ ಮಹಿಳೆಯರೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಹಂತದಲ್ಲಿದ್ದು, ಆದರೂ ಪುರುಷ ಪಾತ್ರ ಮಾಡುವ ಮಹಿಳೆಯರ ಸ್ವರ, ಕಾಲುಂಗುರ, ಮೂಗುತ್ತಿಯಂತಹ ಆಭರಣಗಳ ಬಗ್ಗೆ ಮಾತನಾಡುತ್ತಿರುವುದು ಕೇಳಿ ಬರುತ್ತಿದೆಯಾದರೂ, ಅದನ್ನು ಯಥಾಸ್ಥಿತಿ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಪುರುಷೋತ್ತಮ ಭಂಡಾರಿ ಸಮನ್ವಯಕಾರರಾಗಿದ್ದರು.

ಭಾರತದ ರಕ್ಷಣ ಸಾಮರ್ಥ್ಯ ವೃದ್ಧಿ
ಭಾರತ-ಚೀನಾ ಗಡಿಯಲ್ಲಿ ಚೀನಾ 2020ರಲ್ಲಿ ಭಾರೀ ಸಂಖ್ಯೆಯ ಸೇನೆ, ಸೇನಾ ಸೌಲಭ್ಯವನ್ನು ನಿಯೋಜಿಸಿತು. ಇದಕ್ಕೆ ಉತ್ತರವಾಗಿ ಭಾರತವೂ ಸೇನಾ ಸೌಲಭ್ಯವನ್ನು ಗಡಿಯತ್ತ ತಿರುಗಿಸಿತು. ಭಾರತ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಚೀನಾ ಈಗ ಅರ್ಥ ಮಾಡಿಕೊಂಡಿದೆ. ಭಾರತದ ವಾಯುಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವಷ್ಟು ಈಗ ಸಿದ್ಧವಾಗಿದೆ. ಹೀಗಾಗಿ ಯುದ್ಧ ನಡೆಸುವ ಬಗ್ಗೆ ಅದು ಮರು ಚಿಂತನೆ ನಡೆಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಎವಿಎಂ ಮನ್‌ಮೋಹನ್‌ ಬಹದ್ದೂರ್‌. Armed to lead-Indiaʼs way farward ಎಂಬ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಭರತ್‌ ಕರ್ನಾಡ್‌ ಅವರು ಮಾತನಾಡಿ, ಪ್ರಸ್ತುತ ಚೀನಾ ಪ್ರಚೋದನೆಗೆ ಭಾರತ ಕೇವಲ ಪ್ರತಿಕ್ರಿಯಿಸಿಲ್ಲ. ರಕ್ಷಣಾತ್ಮಕ ಕ್ರಮ ತೆಗೆದುಕೊಂಡಿದೆ ಎಂದರು. ಶಿವ್‌ ಕುನಾಲ್‌ ವರ್ಮಾ ಅವರು ಮಾತನಾಡಿ, ಚೀನಾ ಭಾರತವನ್ನು ತನ್ನ ಪ್ರಮುಖ ಶತ್ರು ಎಂದೇ ಪರಿಗಣಿಸುತ್ತದೆ. ನಾವು ಸಾಕಷ್ಟು ಬಲಿಷ್ಠಗೊಂಡಿದ್ದೇವೆ ಎಂದರು.

“ಅಖ್ಯಾಯಿಕೆ’ ಹೀಗೆಯೇ ಎಂದು ಹೇಳಲು ಆಗದು
“ಮಾಧ್ಯಮ ಮತ್ತು ಅಖ್ಯಾಯಿಕೆ- ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಅಸ್ಮಿತೆಗಳು: ಒಂದು ವಿವೇಚನೆ’ ಎಂಬ ವಿಷಯ ಬಗ್ಗೆ ಪತ್ರಕರ್ತ ಅಜಿತ್‌ ಹನುಮಕ್ಕನವರ್‌ ಮಾತನಾಡಿದರು. ಮಾಧ್ಯಮ ಕ್ಷೇತ್ರ ಮಾತ್ರವಲ್ಲ ಸಾಮಾಜಿಕ ಜಾಲತಾಣ, ಡಿಜಿಟಲ್‌ ವೇದಿಕೆಗಳಲ್ಲೂ ಅಖ್ಯಾಯಿಕೆಗಳು ಇರುತ್ತವೆ. ಅದು ಅವರವರ ದೃಷ್ಟಿಕೋನವನ್ನು ಹೊಂದಿಕೊಂಡಂತೆ ಇರುತ್ತದೆ. ಆದರೆ ಅವುಗಳ ನಿಜ ಸ್ವರೂಪವನ್ನು ಅರ್ಥೈಸಲು ಯಾರೂ ಮುಂದಾಗುವುದಿಲ್ಲ ಎಂದರು.

ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಸುಳ್ಳು ಸುದ್ದಿ ಹರಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರವೇ ನೀತಿ ರೂಪಿಸಲು ಮುಂದಾಗಿದೆ. ಆಗ ಪತ್ರಿಕಾ
ರಂಗದ ಘನತೆಯನ್ನೂ ಎತ್ತಿಹಿಡಿಯಲು ಸಾಧ್ಯವಿದೆ ಎಂದರು. ರಾಧಾಕೃಷ್ಣ ಹೊಳ್ಳ ಸಮನ್ವಯಕಾರರಾಗಿದ್ದರು.

ಪ್ರತಿಯೊಬ್ಬ ಯೋಧನಲ್ಲಿಯೂ ಇದೆ ಅದ್ಭುತ ಕತೆ
“ಸ್ಟೋರೀಸ್‌ ಆಫ್ ವಾರಿಯರ್’ (ಇಂಡಿಯಾಸ್‌ ಮೋಸ್ಟ್‌ ಫಿಯರ್‌ಲೆಸ್‌) ಸಂವಾದದಲ್ಲಿ ಶಿವ್‌ ಆರೂರ್‌ ಅವರು, ಸುಮಾರು 18 ವರ್ಷಗಳಿಂದ ಮಿಲಿಟರಿ ವ್ಯವಹಾರಗಳ ವರದಿ ಮಾಡುತ್ತಿದ್ದೇನೆ. ನಿರಂತರವಾಗಿ ಯೋಧರನ್ನು ಭೇಟಿ ಯಾಗುತ್ತಾ ಬಂದಿದ್ದೇನೆ. ಪ್ರತಿಯೊಬ್ಬ ಯೋಧನ ಬಳಿಯೂ ಒಂದು ಅದ್ಭುತ ಕತೆಯಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಹಾಗೂ ಶೌರ್ಯಚಕ್ರದಂತಹ ಪ್ರಶಸ್ತಿಗಳು ಬಂದಾಗ ಮಾತ್ರ ನಾವು ಯೋಧರನ್ನು ನೆನಪಿಸಿಕೊಳ್ಳುತ್ತೇವೆ. ಯೋಧರ ಸಂಪೂರ್ಣ ಕತೆ ಕೇಳುವ ಹಸಿವು ನನಗಿತ್ತು. ಅದುವೇ ಪುಸ್ತಕ ಬರೆಯಲು ಪ್ರೇರೇಪಿಸಿತು.

ಅಪಾಯದ ನಡುವೆಯೂ ತೇಜಸ್‌ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ 24 ವರ್ಷದ ಯೋಧನ ಸಾಹಸಗಾಥೆ ನನ್ನನ್ನು ಪುಸ್ತಕ ಬರೆಯಲು ಮೊದಲ ಹೆಜ್ಜೆ ಇಡುವಂತೆ ಮಾಡಿತು ಎಂದರು. ಗಲ್ವಾನ್‌ ಘರ್ಷಣೆ ಚೀನಾಗೆ ಒಂದು ಪಾಠವೇ ಹೊರತು ಭಾರತಕ್ಕಲ್ಲ. ಚೀನಾ ಪೂರ್ವಯೋಜಿತವಾಗಿ ಆಕ್ರಮಣ ನಡೆಸಿತ್ತು. ಆದರೆ ನಮ್ಮ ಯೋಧರು ಚೀನಾದ ಪ್ರದೇಶದೊಳಗೆ ಹೋಗಿ ಅವರನ್ನು ಹೊಡೆದಿದ್ದಾರೆ. ಎಂದರು. ಕ್ಯಾಪ್ಟನ್‌ ಬೃಜೇಶ್‌ ಚೌಟ ಅವರು ಸಂವಾದ ನಡೆಸಿಕೊಟ್ಟರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.