ಮಂಗಳೂರು ವಿ.ವಿ. ಸಿಂಡಿಕೇಟ್: ಸದಸ್ಯರ ನಾಮನಿರ್ದೇಶನ
Team Udayavani, Jan 5, 2024, 12:50 AM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ಗೆ ನೂತನ ಸದಸ್ಯರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬಂಟ್ವಾಳ ತಾಲೂಕು ನಾವೂರಿನ ನಿವಾಸಿ ವಕೀಲ ಮತ್ತು ನೋಟರಿ ಸುರೇಶ್ ಕುಮಾರ್ ಬಿ. ನಾವೂರು (ಮೀಸಲಾತಿ ಪ್ರವರ್ಗ- ಸಾಮಾನ್ಯ), ಮಂಗಳೂರಿನ ಲೆಕ್ಕಪರಿಶೋಧಕ ನಿತಿನ್ ಚ. ಶೆಟ್ಟಿ (ಸಾಮಾನ್ಯ), ಕುಂದಾಪುರ ತಾಲೂಕು ತಲ್ಲೂರಿನ ಜೂಡಿತ್ ಮೆಂಡೋನ್ಸ (ಮಹಿಳೆ), ಮಂಗಳೂರಿನ ರಘುರಾಜ್ ಕದ್ರಿ (ಪರಿಶಿಷ್ಟ ಜಾತಿ), ಕೊಣಾಜೆಯ ಅಚ್ಯುತ ಗಟ್ಟಿ (ಹಿಂದುಳಿದ ವರ್ಗ) ಮತ್ತು ಸುಳ್ಯದ ಸವಾದ್ ಸುಳ್ಯ (ಅಲ್ಪಸಂಖ್ಯಾಕ) ನಾಮನಿರ್ದೇಶನಗೊಂಡವರು.
ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ದ ಪ್ರಕರಣ 28(1)(ಜಿ)ರಡಿ ಪ್ರದತ್ತವಾದ ಅಧಿಕಾರದನ್ವಯ ಮತ್ತು ಪ್ರಕರಣ 38-39ರ ಉಪನಿಬಂಧನೆಗೊಳಪಟ್ಟು ಆಡಳಿತಾತ್ಮಕ ಹಿತದೃಷ್ಟಿಯಿಂದ ತತ್ಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷ ಅಥವಾ ಮುಂದಿನ ಆದೇಶದ ವರೆಗೆ ನಾಮನಿರ್ದೇಶನ ಮಾಡಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾನಿಲಯಗಳು-2)ಯ ಸರಕಾರದ ಅಧೀನ ಕಾರ್ಯದರ್ಶಿಯವರು ಈ ಅಧಿಸೂಚನೆ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್
Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್ ಆಗ್ರಹ
Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ
Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್ ವ್ಯೂ ರೆಸಾರ್ಟ್ ಸಮುದ್ರ ಪಾಲಾಗುವ ಸಾಧ್ಯತೆ
ಸುರತ್ಕಲ್ ಟೋಲ್ ತೆರವು ಹೋರಾಟಗಾರರು ನ್ಯಾಯಾಲಯಕ್ಕೆ ಹಾಜರು; ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.