ಉಕ್ರೇನ್‌ನಲ್ಲಿ ದಕ್ಷಿಣ ಕನ್ನಡ 15 ವಿದ್ಯಾರ್ಥಿಗಳು ಅತಂತ್ರ

ಉಡುಪಿಯ ಏಳು ವಿದ್ಯಾರ್ಥಿಗಳು

Team Udayavani, Feb 27, 2022, 6:45 AM IST

ಉಕ್ರೇನ್‌ನಲ್ಲಿ ದ.ಕ. 15 ವಿದ್ಯಾರ್ಥಿಗಳು ಅತಂತ್ರ

ಮಂಗಳೂರು: ಉಕ್ರೇನ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ದ.ಕ. ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆ 15ಕ್ಕೇರಿದೆ. ಅವರೆಲ್ಲ ಸದ್ಯ ಕ್ಷೇಮ ವಾಗಿದ್ದಾರೆ. ಆದರೂ ಕ್ಷಿಪಣಿ ದಾಳಿಯ ಭೀತಿ ದೂರವಾಗಿಲ್ಲ. ಶುಕ್ರವಾರ ತನಕ ಉಕ್ರೇನ್‌ನಲ್ಲಿ ಜಿಲ್ಲೆಯ 9 ಮಂದಿ ಇದ್ದಾರೆಂದು ಹೇಳಲಾಗಿತ್ತು. ವಿದೇಶಾಂಗ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 15 ಮಂದಿ ಇರುವುದು ದೃಢಪಟ್ಟಿದೆ.

ಉಕ್ರೇನ್‌ನಲ್ಲಿ ಇರುವ ತಮ್ಮ ಮಕ್ಕಳ ಬಗ್ಗೆ ದ.ಕ. ಜಿಲ್ಲಾಡಳಿತಕ್ಕೆ ಹೆತ್ತವರು ಕರೆ ಮಾಡಿ ವಿಚಾರಿಸು ತ್ತಿದ್ದಾರೆ. ಜಿಲ್ಲಾಡಳಿತವೂ ಸಂತ್ರಸ್ತ ಮಕ್ಕಳ ಹೆತ್ತವರ ವಾಟ್ಸ್‌ಆ್ಯಪ್‌ ಗುಂಪು ರಚಿಸಿದ್ದು, ಅದರಲ್ಲಿ ಎಲ್ಲ ಮಾಹಿತಿಗಳನ್ನು ರವಾನಿ ಸುತ್ತಿದೆ. ಸ್ವತಃ ಜಿಲ್ಲಾಧಿಕಾರಿ ಕೂಡ ದಿನದಲ್ಲಿ ಹಲವು ಬಾರಿ ಮಕ್ಕಳ ಕುಟುಂಬಸ್ಥರ ಜತೆ ಮಾತುಕತೆ ನಡೆಸುತ್ತಿದ್ದಾರೆ. ವಿದೇ ಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರ ತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದ್ದರೂ ಯುದ್ಧಪೀಡಿತ ಉಕ್ರೇನ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ತುಂಬಾ ದೂರವಿದೆ. ರಾತ್ರಿಯೂ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಇದರಿಂ ದಾಗಿ ಕಾಲ್ನಡಿಗೆಯಲ್ಲಿ ಕ್ರಮಿಸ ಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಆದ್ದರಿಂದ ಸಂತ್ರಸ್ತರನ್ನು ಕರೆತರಲು ಏರ್‌ ಲಿಫ್ಟ್ ಸಹಿತ ಎಲ್ಲ ರೀತಿಯ ಕಾರ್ಯಾಚರಣೆಗೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ತಿಳಿಸಿದ್ದಾರೆ.

ಕ್ಷಿಪಣಿ ಆತಂಕ
ಪಶ್ಚಿಮ ಉಕ್ರೇನ್‌ನ ಖಾರ್ಕಿವ್‌ ನಗರದಲ್ಲಿರುವ ದೇರೆಬೈಲಿನ ಅನೈನಾ ಅನಾ ಸಂಗಡಿಗರೊಂದಿಗೆ ಶನಿವಾರ ಮಧ್ಯಾಹ್ನ ವೇಳೆಗೆ ಮೆಟ್ರೋ ಅಂಡರ್‌ ಗ್ರೌಂಡ್‌ನಿಂದ ಹೊರಬಂದಿದ್ದು, ಹಾಸ್ಟೆಲ್‌ಗೆ ಸ್ಥಳಾಂತರಗೊಂಡಿದ್ದಾರೆ.
ಕೀವ್‌ನಲ್ಲಿರುವ ಪಡೀಲಿನ ಕ್ಲೇಟನ್‌ ಡಿ’ಸೋಜಾ ಕೂಡ ಕಾಲೇಜು ಬಂಕರಿನಿಂದ ಹಾಸ್ಟೆಲ್‌ ಸೇರಿದ್ದಾರೆಂದು ಮನೆಯವರು ತಿಳಿಸಿದ್ದಾರೆ.

ಓರ್ವನ ಸಂಪರ್ಕ ಇಲ್ಲ
ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಪೈಕಿ ಓರ್ವನನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಕುಟುಂಬದ ಜತೆ ಸಂಪರ್ಕದಲ್ಲಿದ್ದಾರೆ. ಒಬ್ಟಾತ ಶುಕ್ರವಾರ ವರೆಗೆ ಕುಟುಂಬದ ಸಂಪರ್ಕದಲ್ಲಿ ಇದ್ದ. ಶನಿವಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಮಾಹಿತಿ ಇಲ್ಲದೆ ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲಾಡಳಿತ ಅವರಿಗೆ ಧೈರ್ಯ ಹೇಳಿದೆ.

ಖಾರ್ಕಿವ್‌ ಮಾರ್ಕೆಟ್‌ ಓಪನ್‌
ರಷ್ಯಾ ಗಡಿಯಿಂದ 40 ಕಿ.ಮೀ. ದೂರದ ಖಾರ್ಕಿವ್‌ನ ಕಾಲೇ ಜಿನಲ್ಲಿ 3ನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಅನೈನಾ ಅನಾ ತಾಯ್ನಾಡಿಗೆ ಬರಬೇಕಾದರೆ ಪೋಲೆಂಡ್‌, ಹಂಗೇರಿ ಮೂಲಕ ಪಶ್ಚಿಮದಿಂದ ಪೂರ್ವ ಉಕ್ರೇನ್‌ ಕಡೆಗೆ ಬರಬೇಕು. ಇಡೀ ಉಕ್ರೇನ್‌ಗೆ ಒಂದು ಸುತ್ತು ಹಾಕ ಬೇಕಾಗುತ್ತದೆ. ಯಾವುದೇ ಸಂದರ್ಭ ಕ್ಷಿಪಣಿ ದಾಳಿಗೆ ಒಳಗಾಗುವ ಅಪಾಯ ಇರುವುದರಿಂದ ಆಕೆಯನ್ನು ಏರ್‌ ಲಿಫ್ಟ್ ಮಾಡುವುದೂ ಸುಲಭವಲ್ಲ. ಮೆಟ್ರೋ ಸುರಂಗದಲ್ಲಿ ಆಶ್ರಯ ಪಡೆದಿರುವ ಆಕೆಗೆ ಆಹಾರ ಸಮಸ್ಯೆ ಎದುರಾಗಿತ್ತು. ಶನಿವಾರ ಬೆಳಗ್ಗೆ ಇಲ್ಲಿನ ಕಾಲಮಾನ 11 ಗಂಟೆ ಸುಮಾರಿಗೆ ಮಾರ್ಕೆಟ್‌ ತೆರೆಯಲಾಗಿದೆ. ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕಳುಹಿಸಲಾಗಿದೆ. ಮಾರ್ಕೆಟ್‌ಗೆ ತೆರಳಿದರೂ ನಗದು ವಹಿವಾಟಿಗೆ ಅವಕಾಶ, ಕ್ಯಾಶ್‌ಲೆಸ್‌ಗೆ ಆಸ್ಪದ ಇಲ್ಲ ಎಂದಿದ್ದಾರಂತೆ. ನಗದು ಬೇಕಾದರೆ ಎಟಿಎಂಗಳಲ್ಲಿ ಉದ್ದದ ಸರತಿ ಸಾಲು ಇದೆ. ನಾನೀಗ ಸಾಲಿನಲ್ಲಿ ನಿಂತುಕೊಂಡಿದ್ದೇನೆ ಎಂದು ಅನೈನಾ ತಿಳಿಸಿರುವುದಾಗಿ ಅವರ ತಾಯಿ ಸಂಧ್ಯಾ ಹೇಳಿದ್ದಾರೆ.

ರಾತ್ರಿ ಮತ್ತೆ ಬಂಕರ್‌ಗೆೆ
ನನ್ನ ಮಗ ಕ್ಲೇಟನ್‌ ಇರುವ ಕಾಲೇಜು ಹಾಸ್ಟೆಲ್‌ನಲ್ಲಿ ಶುಕ್ರವಾರ ರಾತ್ರಿ ಇದ್ದಾಗ ಇಲ್ಲಿನ ಕಾಲಮಾನ 11.30ರ ಸುಮಾರಿಗೆ ಅಪಾಯದ ಸೈರನ್‌ ಮೊಳಗಿತ್ತು. ಕೂಡಲೇ ಎಲ್ಲ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನ ಬಂಕರಿಗೆ ಕಳುಹಿಸಿದ್ದರು. ರಾತ್ರಿ ಇಡೀ ಬಂಕರ್‌ನಲ್ಲಿ ಆತ ಕಳೆದಿದ್ದ. ಶನಿವಾರ ಮಧ್ಯಾಹ್ನ ವೇಳೆಗೆ ಬಂಕರಿನಿಂದ ಮತ್ತೆ ಹಾಸ್ಟೆಲ್‌ಗೆ ಕರೆಸಿಕೊಂಡಿದ್ದಾರೆ. ಸ್ನಾನ, ಊಟಕ್ಕೆ ಅವಕಾಶ ನೀಡಿದ್ದಾರೆ ಎನ್ನುತ್ತಾರೆ ಕ್ಲೇಟನ್‌ನ ತಾಯಿ ಒಲಿನ್‌.

ಉಡುಪಿಯ ಏಳು ವಿದ್ಯಾರ್ಥಿಗಳು
ಉಡುಪಿ: ಉಕ್ರೇನ್‌ನಲ್ಲಿ ಓದುತ್ತಿರುವ ಉಡುಪಿ ಜಿಲ್ಲೆಯ 7 ವಿದ್ಯಾರ್ಥಿಗಳ ಬಗ್ಗೆ ಅವರ ಕುಟುಂ ಬಸ್ಥರು ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತದಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೂ ಕಳುಹಿಸಲಾಗಿದೆ. ಒಡೆಸ್ಸಾ ನ್ಯಾಶನಲ್‌ ಮೆಡಿಕಲ್‌ ವಿವಿಯಲ್ಲಿ ಎಂಬಿಬಿಎಸ್‌ ಓದುತ್ತಿರುವ ನಂದಿನಿ ಅರುಣ್‌, ವಿ.ಎನ್‌. ಕರಝೀನ್‌ ಖಾರ್ಕಿವ್‌ ನ್ಯಾಷನಲ್‌ ಮೆಡಿಕಲ್‌ ವಿವಿಯಲ್ಲಿ ಎಂಬಿಬಿಎಸ್‌ ಓದುತ್ತಿರುವ ಅಂಕಿತಾ ಜಗದೀಶ್‌ ಪೂಜಾರಿ ಯವರ ಮಾಹಿತಿ ಶನಿವಾರ ಜಿಲ್ಲಾಡಳಿತಕ್ಕೆ ಲಭಿಸಿದೆ ಎಂದು ಪ್ರಕಟನೆ ತಿಳಿಸಿದೆ.

ಎಂಬಿಬಿಎಸ್‌ ವಿದ್ಯಾರ್ಥಿ ನಿಯಮ್‌ ಅವರ ತಂದೆ ಬಿ.ವಿ. ರಾಘವೇಂದ್ರ ಅವರು ಮಾತನಾಡಿ, ಮಗನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ಪೋಲೆಂಡ್‌ ಮೂಲಕ ಭಾರತಕ್ಕೆ ಕರೆ ತರುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಎಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಬರಲಿದ್ದಾರೆ ಎಂದರು.

ಟಾಪ್ ನ್ಯೂಸ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.