![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Mangaluru ಜೆಪ್ಪು ಸೆಮಿನರಿ: ಮನೆಯಿಂದ ಕಳವು
Team Udayavani, Jul 2, 2024, 1:15 AM IST
![Mangaluru ಜೆಪ್ಪು ಸೆಮಿನರಿ: ಮನೆಯಿಂದ ಕಳವು](https://www.udayavani.com/wp-content/uploads/2024/07/Kumbra-620x439.jpg)
ಮಂಗಳೂರು: ಜೆಪ್ಪು ಸೆಮಿನರಿ ಸೈಂಟ್ ಜೋಸೆಫ್ ನಗರದ ಸ್ಟಾನಿ ಅವರ ಮನೆಯಲ್ಲಿ ಕಳವಾಗಿದೆ.
ಸ್ಟಾನಿ ಅವರು ಪುತ್ರಿಯ ಜತೆಗೆ ಜೂ.28ರಂದು ಮುಂಬಯಿಗೆ ತೆರಳಿದ್ದರು. ಹೋಗುವಾಗ ನೆರೆಕರೆಯವರಾದ ಡೆರಿಕ್ ಲೋಬೋ ಅವರಲ್ಲಿ ಮನೆಯ ಕಡೆಗೆ ನಿಗಾ ವಹಿಸಲು ತಿಳಿಸಿ ಮನೆಯ ಕೀಯನ್ನು ಕೊಟ್ಟು ಹೋಗಿದ್ದರು. ಜೂ.29ರಂದು ಡೆರಿಕ್ ಅವರು ಸ್ಟಾನಿಯವರ ಮನೆಗೆ ಬಂದು 10.30ಕ್ಕೆ ಬೀಗ ಹಾಕಿ ವಾಪಸ್ ಹೋಗಿದ್ದರು.
ಮತ್ತೆ 12.30ಕ್ಕೆ ಬಂದು ನೋಡಿದಾಗ ಮನೆಯ ಬಾಗಿಲಿನ ಚಿಲಕದ ಕೊಂಡಿ ಬೆಂಡಾಗಿತ್ತು. ಒಳಗಡೆ ಹಾಲ್ಗೆ ಹೋಗಿ ನೋಡಿದಾಗ ಮರದ ಟೇಬಲ್ ಡ್ರಾವರ್ನಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಬೆಡ್ರೂಮ್ನ 3 ಕಪಾಟುಗಳಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ಕಳವಾದ ಸೊತ್ತುಗಳ ವಿವರವನ್ನು ದೂರುದಾರರು ಇನ್ನಷ್ಟೇ ನೀಡಬೇಕಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.