![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 25, 2024, 1:58 AM IST
ಸ್ವರಾನಂದ್ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಎರಡು ಗಾಯನ ಕಛೇರಿಗಳು ಇತ್ತೀಚೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್ನ ಸಭಾಭವನದಲ್ಲಿ ನಡೆಯಿತು.
ಮೊದಲಿಗೆ ಮಂಗಳೂರಿನ ಯುವ ಗಾಯಕರಾದ ದಯಾಕರ್ ಭಟ್ ಮಾರೂ ಬಿಹಾಗ್ ರಾಗದಲ್ಲಿ ವಿಲಂಬಿತ್ ತಿಲವಾಡ ದ್ರುತ್ ತೀನ್ ತಾಳದ ಬಂಧಿಶ್ಗಳನ್ನು ಹಾಡಿ, ಒಂದು ಸುಂದರ ರಾಗ್ ಮಾಲದೊಂದಿಗೆ ತನ್ನ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಇವರಿಗೆ ದೀಪಕ್ ನಾಯಕ್ ಹರಿಖಂಡಿಗೆ ಹಾಗೂ ವಿಶ್ವಜಿತ್ ಕಿಣಿ ಇವರು ತಬಲಾ ಹಾಗೂ ಹಾರ್ಮೋನಿಯಂ ಸಾಥ್ ನೀಡಿದರು. ತಂಬೂರದಲ್ಲಿ ಸ್ಮತಿ ಹಾಗೂ ನರಸಿಂಹ ಪೈ ಸಹಕರಿಸಿದರು.
ಎರಡನೆಯ ಬೈಠಕ್ನಲ್ಲಿ ಪುಣೆಯ ಡಾ| ರುಚಿರಾ ಕೇದಾರ್ ಇವರು ಸೂರ್ ಮಲ್ಹಾರ್ ರಾಗದಲ್ಲಿ ತೀನ್ ತಾಳದ ಬಂಧಿಶ್ಗಳನ್ನು ಪ್ರಸ್ತುತ ಪಡಿಸಿ, ಠುಮ್ರಿ ದಾದ್ರಗಳನ್ನು ಹಾಡಿ ಸಂಗೀತ ವಿದ್ಯಾರ್ಥಿಗಳಿಗೆ ಅವುಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. ವಿಘ್ನೇ ಶ್ ಕಾಮತ್ ಕೋಟೇಶ್ವರ ಹಾಗೂ ಪ್ರಸಾದ್ ಕಾಮತ್ ಉಡುಪಿ, ತಬಲಾ ಹಾಗೂ ಸಂವಾದಿನಿಗಳಲ್ಲಿ ಸಮರ್ಥ ಸಾಥ್ ನೀಡಿದರು. ತಂಬೂರದಲ್ಲಿ ನಿತ್ಯಾ ಶಿಖಾರಿಪುರ್ ಹಾಗೂ ಮಂಗಳೂರಿನ ಮೇಘಾ ಸಹಕರಿಸಿದರು.
- ಭಾರವಿ ದೇರಾಜೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.