![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Oct 31, 2023, 9:05 PM IST
ಇಂಫಾಲ/ನವದೆಹಲಿ: ಈಶಾನ್ಯ ಮಣಿಪುರದಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಮಯೆನ್ಮಾರ್ ಗಡಿ ಸಮೀಪ ಇರುವ ಬಿಎಸ್ಎಫ್ನ ಹೆಲಿಪ್ಯಾಡ್ ಸಮೀಪ ಈ ಘಟನೆ ನಡೆದಿದೆ. ಉಪ ವಿಭಾಗಾಧಿಕಾರಿ ಮಟ್ಟ (ಎಸ್ಡಿಪಿಒ) ಪೊಲೀಸ್ ಅಧಿಕಾರಿ ಚಿಂಗ್ತಾಮ್ ಆನಂದ್ ಎಂಬುವರನ್ನು ಸ್ನೆ„ಪರ್ಗಳು (ದೂರದ ಸ್ಥಳದಿಂದ ಗುರಿ ಇಟ್ಟು ಗುಂಡು ಹಾರಿಸುವವರು ) ಕೊಂದಿದ್ದಾರೆ.
ಮಯೆನ್ಮಾರ್ಗೆ ಹೊಂದಿಕೊಂಡಿರುವ ಮಣಿಪುರದ ಮೊರೆ ಎಂಬಲ್ಲಿ ಈ ಘಟನೆ ನಡೆದಿದೆ. ಹೊಸತಾಗಿ ನಿರ್ಮಾಣವಾಗಿರುವ ಹೆಲಿಪ್ಯಾಡ್ ಅನ್ನು ಪರೀಕ್ಷಿಸುತ್ತಿರುವ ಸಂದರ್ಭದಲ್ಲಿ ಗುಂಡು ಹಾರಾಟದ ಘಟನೆ ನಡೆದಿದೆ. ಮೊರೆ ಎಂಬ ಪಟ್ಟಣದಿಂದ ಮಣಿಪುರ ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಹೊರ ಕಳುಹಿಸಬೇಕು ಎಂಬ ಬೇಡಿಕೆಯ ನಡುವೆಯೇ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂಫಾಲದಲ್ಲಿ ಸಿಎಂ ಎನ್.ಬೀರೇನ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆದು, ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಮೇನಿಂದ ನಡೆಯುತ್ತಿರುವ ಹಿಂಸಾಕೃತ್ಯಗಳಲ್ಲಿ ಕನಿಷ್ಠ 180 ಮಂದಿ ಅಸುನೀಗಿ, 60 ಸಾವಿರಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.