ದುರ್ಗಾಸಪ್ತಶತಿಯಲ್ಲಿ ಔಷಧ ಸಸ್ಯಗಳ ಉಲ್ಲೇಖ!


Team Udayavani, Oct 21, 2023, 12:39 AM IST

durga

ನವರಾತ್ರಿ ಹಬ್ಬದ ಒಂಬತ್ತು ದಿನ ಗಳಲ್ಲಿ ಸಪ್ತಶತಿ ಪಾರಾಯಣಕ್ಕೆ ಅತೀ ಮಹತ್ವವಿದೆ. ಸಪ್ತಶತಿ, ದುರ್ಗಾಸಪ್ತಶತಿ, ದುರ್ಗಾಮಹಾತ್ಮೆ ಮಾರ್ಕಾಂಡೇಯ ಪುರಾಣದ ಒಂದು ಭಾಗ, 13 ಅಧ್ಯಾ ಯಗಳನ್ನು ಹೊಂದಿದ್ದು, 700 ಶ್ಲೋಕ ಗಳಿಂದ ಕೂಡಿದೆ. ದೇವಿಯ ವರ್ಣನೆ, ವೈಭವವನ್ನು ಸಾರುವ ಮೇರು ಕೃತಿ. ಸಪ್ತಶತಿ ಕೇವಲ ಆಧ್ಯಾತ್ಮಿಕ ಗ್ರಂಥ ವಾಗಿ ರದೆ ಅದರ ಪಾಠದಿಂದ ಇಷ್ಟಾರ್ಥ ಸಿದ್ಧಿ, ಲೌಕಿಕ ಸುಖ ಸಂತೋಷ, ಶ್ರೇಯಸ್ಸೂ ಉಂಟಾಗುತ್ತದೆ ಎಂಬುದು ಅನು ಭವಿಗಳ ಮಾತು.

ಸಪ್ತಶತಿಯ ವೈಶಿಷ್ಟ್ಯ ಎಂದರೆ ಅದು ಅನೇಕ ಔಷಧೀಯ ಸಸ್ಯಗಳು ಮತ್ತು ಹೂವು ಹಣ್ಣುಗಳ ವಿವರವನ್ನು ಒಳಗೊಂಡಿದೆ.

ಕಮಲ: ವಿವಿಧ ಔಷಧೀಯ ಸಸ್ಯಗಳಲ್ಲಿ ಅತೀ ಮುಖ್ಯ ಹೂವು ಕಮಲದ ಹೂವು. ಬ್ರಹ್ಮಾದಿ ದೇವತೆಗಳ ಪ್ರಭಾ ವದಿಂದ ದುರ್ಗಾದೇವಿಯ ಸೃಷ್ಟಿಯಾಯಿತು. ದುರ್ಗೆಯ ಮಹಾಶಕ್ತಿಯನ್ನು ವೃದ್ಧಿಸಲು ವಿವಿಧ ಆಯುಧಗಳು ಮತ್ತು ಆಭರಣಗಳನ್ನು ನೀಡಲಾಯಿತು. ಸಮುದ್ರರಾಜ ಜಲಧಿ ಯು ಎಂದಿಗೂ ಬಾಡಿಹೋಗದ, ವಿಶಿಷ್ಟ ತಾವರೆ ಪುಷ್ಪವನ್ನು ಮತ್ತು ವಿಶ್ವಕರ್ಮನು ಕಮಲದ ಹಾರವನ್ನು ಸಮರ್ಪಿಸಿದನು. ಎಲ್ಲ ದೇವದೇವತೆಗಳು ಗಿರಿರಾಜ ಹಿಮಾಲಯದಲ್ಲಿ ವಿಷ್ಣು ಮಾಯೆಯನ್ನು ಪ್ರಾರ್ಥಿಸುತ್ತಿರುವಾಗ ಭಗವತಿ ಪಾರ್ವತಿ ತನ್ನ ಶರೀರದಿಂದ ಇನ್ನೊಂದು ದೇವಿಯನ್ನು ಸೃಷ್ಟಿಸಿದಳು. ಆ ದಿವ್ಯ ದೇವಿಯ ಆಕರ್ಷಣೀಯ ಸೌಂದರ್ಯವನ್ನು ಶುಂಭ, ಚಂಡಮುಂಡರ ಮೂಲಕ ತಿಳಿದುಕೊಂಡನಂತೆ. ದೇವಿ ಪೂಜೆಯಿಂದ ಕುಬೇರನ ಬಳಿಯಿದ್ದ ಮಹಾಪದವನ್ನು, ಕಿಂಜಲ್ಕಿನಿ ಎಂಬ ಕಮಲದ ಹಾರವನ್ನೂ ಕಸಿದುಕೊಳ್ಳ ಬಹುದೆಂದೂ ಅವರು ಅರುಹಿದರು. ಹೀಗೆ ತಾವರೆ ಪುಷ್ಪದ ವರ್ಣನೆಯನ್ನು ದುರ್ಗಾಸಪ್ತಶತಿಯಲ್ಲಿ ಕಾಣಬಹುದು. ಮಹಾವಿಷ್ಣು ಗಾಢ ನಿದ್ರೆಯಲ್ಲಿದ್ದಾಗ ಮಧುಕೈಠಭರು ಬ್ರಹ್ಮ ನನ್ನು ವಧಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ ಕಮಲದ ಸೃಷ್ಟಿಕರ್ತ ಬ್ರಹ್ಮನು ರಾಕ್ಷಸರಿಂದ ತನ್ನನ್ನು ರಕ್ಷಿಸಬೇಕೆಂದು ವಿಷ್ಣುವಿನಲ್ಲಿ ಪ್ರಾರ್ಥಿಸಿದ ಶ್ಲೋಕವು ಸಪ್ತಶತಿಯಲ್ಲಿದೆ.

ಅಕ್ಷ ಸಸ್ಯದ ವರ್ಣನೆ: ವಿಭೀಟಕ ಅಥವಾ ಬೆಲ್ಲೆರಿಕ್‌ ಮೈರೊಬಲನ್‌. ಹಸನ್ಮುಖೀಯಾದ ದೇವಿಯು ಕಮಲದ ಪುಷ್ಪದಲ್ಲಿ ಅಲಂಕೃತಳಾಗಿದ್ದು ಪರಶು, ಗಧಾ, ವಾನ, ವಜ್ರ, ಪದ್ಮ (ಕಮಲ) ಧನುಸ್ಸು, ಕುಂಡಿಕಾ, ದಂಡ, ಶಕ್ತಿ, ಶಂಖ, ಘಂಟಾ ಮತ್ತು ಮಧುಪಾತ್ರವನ್ನು ಧರಿಸಿದ್ದಳು. ವಿಭೀಟಕೀ ಹಾರ ಮತ್ತು ಬಂಧೂಕದ ವರ್ಣನೆಯ ಉಲ್ಲೇಖವಿದೆ.
ಬಂಧೂಕ  (ಮಿಡ್ಡೇ ಫ್ಲವರ್‌): ಅರ್ಧನಾರೀಶ್ವರನ ಆಶ್ರಯ ದಲ್ಲಿರುವ ನಾನು ಸದಾ ನೆಲೆಸುತ್ತೇನೆ. ಅವನ ಬಣ್ಣ ಬಂಧೂಕ ಪುಷ್ಪದಂತಿದೆ. ಸ್ವರ್ಣದ ಬಣ್ಣ, ಕೆಂಪು ಹಳದಿಯುಕ್ತ. ವಿಭೀ ಟಕೀ ಪುಷ್ಪದ ಹಾರವನ್ನು ಧರಿಸಿದವನು. ಪಾಶಾಂಕುಶ, ವರದ ಮುದ್ರೆಯ ಭಂಗಿಯು ಅವನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ತ್ರಿನೇತ್ರನಾದ ಅವನು ಅರ್ಧಚಂದ್ರ ಆಭರಣವನ್ನು ಧರಿಸಿದ್ದಾನೆ ಎಂದು ವರ್ಣಿಸಲಾಗಿದೆ.

ಚಂದನ ಗಂಧ: ದೇವಾದಿ ದೇವತೆಗಳು ಶ್ರೀದುರ್ಗೆಯನ್ನು ನಂದನವನದಲ್ಲಿ ಪೂಜಿಸುತ್ತಿದ್ದರು. ಅಲ್ಲಿ ಗಂಧಚಂದನ ಇತ್ಯಾದಿ ದಿವ್ಯ ಪುಷ್ಪಗಳಿಂದ ಪುಷ್ಪಾರ್ಚನೆಗೈಯುತ್ತಿದ್ದರು. ದುರ್ಗಾಷ್ಟೋತ್ತರ ಶತನಾಮಸ್ತೋತ್ರ, ದುರ್ಗಾಸಪ್ತಶತಿಯ ಒಂದು ಭಾಗ. ಅದರಲ್ಲಿ ದೇವಿಯ ಸೌಂದರ್ಯವನ್ನು ವರ್ಣಿಸುತ್ತಾ ದೇವಿಯು ಗುಲಾಬಿ ಹೂವುಗಳಿಂದ ಕಂಗೊಳಿಸುತ್ತಿದ್ದು ಪಾಟವತೀ ಎಂದು ಸ್ತುತಿ.

ಕಹ್ಲಾರ ಪುಷ್ಪ: ಕಹ್ಲಾರ ಪುಷ್ಪದ ಹಾರ ದೇವಿಯ ದಿವ್ಯ ಕಾಂತಿಯನ್ನು ಮತ್ತಷ್ಟು ವೃದ್ಧಿಸಿದೆ. ಮಾತುಲಿಂಗ, ಮಾತುಲುಂಗ, ಚಕೋತ (ಸಿಟ್ರಸ್‌ ಹಣ್ಣು): ಸಪ್ತಶತಿಯ ಪ್ರಾಧಾನಿಕ ರಹಸ್ಯಂ ಎಂಬ ಭಾಗದಲ್ಲಿ ಇದರ ವರ್ಣನೆಯಿದೆ.

ಪಾರಿಜಾತ: ಶುಂಭ ಎಂಬ ರಾಕ್ಷಸ ರಾಜನನ್ನು ಚಂಡ ಮುಂಡರು ಅರ್ಚಿಸುತ್ತಿರುವಾಗ ಪಾರಿ ಜಾತ ಪುಷ್ಪದ ವರ್ಣನೆಯಿದೆ.

ಸಪ್ತಶತಿ ಉಕ್ತ ವಿವಿಧ ಪುಷ್ಪಗಳ ಔಷಧೀಯ ಗುಣಗಳು  
ಕಮಲ ಪುಷ್ಪ ರುಚಿಯಲ್ಲಿ ಸಿಹಿ. ಶೀತ ಜಾತಿ. ಕಫ‌ಪಿತ್ತ ನಿವಾರಕ. ಅತಿಸಾರ ವಿರೋಧಿ. ಮೈಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಪಿತ್ತ , ಡಿಪ್ಸಿಯಾ, ಸುಡುವ ಸಂವೇದನೆ, ವಿಷತ್ವ, ಇಸಬು, ಉರಿಗಾಯ, ಮುಂತಾದ ಚಿಕಿತ್ಸೆಯಲ್ಲಿ ಉಪಯೋಗಿ.

ತ್ರಿಫ‌ಲ, ಆಯುರ್ವೇದದ ಒಂದು ಸೂತ್ರ ನಿರೂಪಣೆ. ಇದು ತ್ರಿದೋಷವನ್ನು ನಿವಾರಿಸುತ್ತದೆ. ಕಫ‌ ಚಿಕಿತ್ಸೆಯಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ. ದೃಷ್ಟಿ ದೋಷ ದೂರ ವಾಗುವುದು. ವಯಸ್ಸಿಗೆ ಮೊದಲೇ ತಲೆಕೂದಲು ಬಿಳಿಯಾ ಗುವುದನ್ನು ತಡೆಗಟ್ಟುತ್ತದೆ. ಕಂಠದೋಷ, ಮೂಗು ಸಂಬಂ ಧೀ ದೋಷ, ರಕ್ತದಲ್ಲಿ ದೋಷ, ಗಂಟಲು ಸಮಸ್ಯೆ, ಹೃದಯ ಸಂಬಂಧೀ ರೋಗ ಚಿಕಿತ್ಸೆಗಳಲ್ಲಿ ಇದರ ಹಣ್ಣು ಸಹಕಾರಿ.

ಶ್ರೀಗಂಧ ಸುಗಂಧಭರಿತ ಮತ್ತು ತಂಪು. ಸುಗಂಧ ವಾದ್ದರಿಂದ ಅದು ಗಂಧಸಾರ, ಸಂಸ್ಕೃತದಲ್ಲಿ. ಆಯುರ್ವೇದ ಸಂಹಿತೆ ಮತ್ತು ನಿಘಂಟುಗಳಲ್ಲಿ ಗಂಧದ ಕುರಿತಂತೆ ಉಲ್ಲೇಖ ಗಳಿವೆ. ಚರಕ ಸಂಹಿತೆಯಲ್ಲಿ ದಾಹಪ್ರಶಮನ, ಅಂಗಮ ರ್ಧಪ್ರಶಮನ, ತ್ರಿಷ್ಣನಿಗ್ರಹಣ, ವರ್ಣ್ಯ, ಕಂಡೂಘ್ನ ಮತ್ತು ತಿಕ್ತಸ್ಕಂದ ಇತ್ಯಾದಿಗಳಲ್ಲಿ ಮತ್ತು ಸುಶ್ರುತ ಸಂಹಿತೆಯ ಪ್ರಿಯಂಗವಾದಿ ಗಣ, ಗುಡೂಚ್ಯಾದಿ ಮತ್ತು ಪಿತ್ತಸಂಶಮನ ಗಣದಲ್ಲಿ ಗಂಧದ ವಿವರಣೆಗಳಿವೆ. ಕಫ‌ಪಿತ್ತ, ರಕ್ತಪಿತ್ತವನ್ನು ಹೋಗಲಾಡಿಸುತ್ತದೆ.

ಮಾತುಲುಂಗ ಮಾದಿಫ‌ಲದ ಹೂವು ರಕ್ತಪಿತ್ತ, ವಾತಪಿತ್ತ, ಕಫ‌ವಾತ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತದೆ.

ಪಾರಿಜಾತದ ಹೂವು ಜ್ವರ ನಿವಾರಕ, ಉತ್ತಮ ಟಾನಿಕ್‌, ಜೀರ್ಣಕಾರಿ, ಶುದ್ಧಿಕಾರಕ ಮತ್ತು ನೋವು ನಿವಾರಕದ ಉತ್ತಮ ಔಷಧವಾಗಿದೆ. ಅದರ ಎಲೆಯ ರಸ, ಅಲರ್ಜಿ ನಿವಾರಕ.
ಕಲ್ಹಾರ ಹೂವು ಉತ್ತಮ ಹೃದಯ ಸಂಬಂಧೀ ಟಾನಿಕ್‌. ಕಾಲರಾ, ಅತಿಸಾರ, ಜ್ವರ, ಉದ್ವೇಗ, ಭೇದಿ ನಿವಾರಕ ಔಷಧ. ಈ ಗಿಡದ ಬೇರಿನಿಂದ ತಯಾರಿಸುವ ಕಷಾಯ ಮೂತ್ರಕೋಶ ನೋವು ಉಪಶಮನಕಾರಿ. ಇದರಿಂದ ಬಾಯಿ ಮುಕ್ಕಳಿಸಿದರೆ ಗಂಟಲು ಕೆರತ ನಿವಾರಣೆಯಾಗುತ್ತದೆ.

ಬಂಧುಜೀವ ಹೂವು ವಾತಪಿತ್ತ, ಕಫ‌, ಮುಂತಾದ ತ್ರಿದೋಷ ನಿವಾರಕ. ಜ್ವರ, ಹೃದಯ ಕಾಯಿಲೆಗಳಿಗೆ ಉತ್ತಮ ಔಷಧ.
ಪಾತಲ, ವಾತಪಿತ್ತ, ರಕ್ತಪಿತ್ತ, ಹೊಟ್ಟೆ ಸುಡುವ ಸಂವೇದನೆ ಇತ್ಯಾದಿ ದೋಷಗಳಿಗೆ ಔಷಧವಾಗಿದೆ.

ದುರ್ಗೆ ದುರಿತ ನಿವಾರಿಣಿ. ಸಾವಿರಾರು ವರ್ಷಗಳ ಹಿಂದೆ ಭಾರತದ ನೆಲದಲ್ಲಿ ರಚಿಸಲ್ಪಟ್ಟ ಈ ಗ್ರಂಥದಲ್ಲಿ ಔಷಧೀಯ ಸಸ್ಯಗಳ ಮಹತ್ವವನ್ನೂ ವರ್ಣಿಸಲಾಗಿದ್ದು ದೇವಾತಾರ್ಚನೆ ಮತ್ತು ವಿವಿಧ ಕಾಯಿಲೆಗಳ ನಿವಾರಣೆಗಾಗಿ ಔಷಧಕ್ಕೂ ಬಳಸಲಾಗುತ್ತಿತ್ತು.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.