ಸಂಕಷ್ಟದ ಮಧ್ಯೆ ಮೆಸ್ಕಾಂ ಶಾಕ್‌

2 ತಿಂಗಳ ಬಿಲ್‌ನಲ್ಲಿ ದುಪ್ಪಟ್ಟು ಶುಲ್ಕ; ಗ್ರಾಹಕರ ಅಳಲು

Team Udayavani, May 7, 2020, 6:41 AM IST

ಸಂಕಷ್ಟದ ಮಧ್ಯೆ ಮೆಸ್ಕಾಂ ಶಾಕ್‌

ಸಾಂದರ್ಭಿಕ ಚಿತ್ರ.

ವಿಶೇಷ ವರದಿ- ಉಡುಪಿ: ಲಾಕ್‌ಡೌನ್‌ನಿಂದಾಗಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದೀಗ ಮೆಸ್ಕಾಂ ಶಾಕ್‌ ನೀಡಿದ್ದು, ಎರಡು ತಿಂಗಳ ಬಿಲ್‌ ಅನ್ನು ಒಟ್ಟಿಗೆ ಕಳುಹಿಸುವ ಮೂಲಕ ಕಳೆದ ತಿಂಗಳ ಬಿಲ್‌ ಪಾವತಿಸಿದವರಿಗೂ ದುಪ್ಪಟ್ಟು ಶುಲ್ಕ ವಿಧಿಸಿದೆ.

ಎಪ್ರಿಲ್‌ನಲ್ಲಿ ಮಾಪಕ ಓದುವ ಸಿಬಂದಿ ಬಂದಿರಲಿಲ್ಲ. ಆದ್ದರಿಂದ ಎಪ್ರಿಲ್‌ನ ಬಿಲ್‌ ಅನ್ನು ಆನ್‌ಲೈನ್‌ ಮುಖಾಂತರ ಪಾವತಿಸಲು ಅವಕಾಶ ಗ್ರಾಹಕರಿಗೆ ಕಲ್ಪಿಸಲಾಗಿತ್ತು. ಆನ್‌ಲೈನ್‌ ಪಾವತಿ ಸಾಧ್ಯವಾಗದ ಗ್ರಾಹಕರು ಮೊತ್ತವನ್ನು ಬಾಕಿ ಇರಿಸಿಕೊಂಡಿದ್ದರು. ಇದೀಗ ಮೇಯಲ್ಲಿ ಮಾಪಕದ ರೀಡಿಂಗ್‌ ಆಧರಿಸಿ ಎಪ್ರಿಲ್‌ ಮತ್ತು ಮೇ ತಿಂಗಳ ಬಿಲ್ಲನ್ನು ಒಟ್ಟಿಗೆ ಮಾಡಲಾಗಿದೆ. ದುಪ್ಪಟ್ಟು ಬಿಲ್‌ ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ. ಎರಡು ತಿಂಗಳ ಬಿಲ್‌ ನೀಡಿದ್ದರೂ ಅದರಲ್ಲಿ ಎರಡು ತಿಂಗಳಿಗೆ ಸರಾಸರಿ ಬಳಕೆಗಿಂತ ಹೆಚ್ಚುವರಿ ಶುಲ್ಕ ನಮೂದಾಗಿದೆ ಎಂದು ಕೆಲವು ಗ್ರಾಹಕರು “ಉದಯವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಮೆಸ್ಕಾಂ ಅಧಿಕಾರಿಗಳ ಪ್ರಕಾರ, ಗೃಹ ಬಳಕೆಯ ಜಕಾತಿಯಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳಿನ ಮೊದಲ 30 ಯೂನಿಟ್‌ಗಳಿಗೆ 1 ಸ್ಲ್ಯಾಬ್ ದರ ಅನ್ವಯವಾದರೆ, ಮೇ ತಿಂಗಳಿನಲ್ಲಿ ನೀಡಲ್ಪಡುವ ಎರಡು ತಿಂಗಳ ಬಿಲ್‌ನಲ್ಲಿ 30 ಯೂನಿಟ್‌ಗಳ ಬದಲಾಗಿ ಒಟ್ಟು 2×30=60 ಯುನಿಟ್‌ಗಳಿಗೆ ಮೊದಲ ಸ್ಲ್ಯಾಬ್ ದರ ಅನ್ವಯವಾಗುತ್ತದೆ. ಅದರಂತೆಯೇ ಉಳಿದ ರೇಟ್‌ ಸ್ಲ್ಯಾಬ್ ಗಳೂ (2ನೇ ಸ್ಲ್ಯಾಬ್ 70 ಯೂನಿಟ್‌ ಬದಲಾಗಿ 140, 3ನೇ ಸ್ಲ್ಯಾಬ್ 100 ಯೂನಿಟ್‌ ಬದಲಾಗಿ 200) ಎರಡು ತಿಂಗಳಿನ ಲೆಕ್ಕದಲ್ಲಿಯೇ ಅನ್ವಯವಾಗುವುದರಿಂದ ಗ್ರಾಹಕರಿಗೆ ಯಾವುದೇ ತರಹದ ನಷ್ಟವಾಗುವುದಿಲ್ಲ. ಇದೇ ರೀತಿ ಇತರ ಜಕಾತಿಗಳಿಗೂ ಬಿಲ್ಲಿಂಗ್‌ ಮಾಡಲಾಗುತ್ತದೆ.

ಶುಲ್ಕ ಪಾವತಿಸಿದವರಿಗೂ ಹೆಚ್ಚು ಬಿಲ್‌
ಎಪ್ರಿಲ್‌ನಲ್ಲಿ ಬಿಲ್‌ ಪಾವತಿಸಿದವರಿಗೆ ಮೇ ತಿಂಗಳ ಬಿಲ್‌ ನೀಡುವಾಗ ಎಪ್ರಿಲ್‌ನ ಮೊತ್ತವನ್ನು ಕಡಿತಗೊಳಿಸಿ ನೀಡಲಾಗಿದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ಆದರೆ ಎಪ್ರಿಲ್‌ನಲ್ಲಿ ಬಿಲ್‌ ಪಾವತಿಸಿದವರಿಗೂ ಮೇಯಲ್ಲಿ ದುಪ್ಪಟ್ಟು ಬಿಲ್‌ ಬಂದಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, “ನಮ್ಮ ವಿದ್ಯುತ್‌ ಬಳಕೆ ಪ್ರತಿ ತಿಂಗಳಿನಂತೆಯೇ ಇತ್ತು. ಪ್ರತಿ ತಿಂಗಳು 1,800-2,000 ರೂ. ಬಿಲ್‌ ಬರುವ ನಮಗೆ ಈ ಬಾರಿ 7,000 ರೂ. ಬಂದಿದೆ.ಕಳೆದ ತಿಂಗಳು ಬಿಲ್‌ ಪಾವತಿಸಿದ್ದರೂ ಇಷ್ಟು ಬಿಲ್‌ ವಿಧಿಸಿರುವುದು ಯಾಕೆ ಎಂದು ತಿಳಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೊಂದಲ ಬೇಡ
ಲಾಕ್‌ಡೌನ್‌ ಕಾರಣ ಎಪ್ರಿಲ್‌ನಲ್ಲಿ ಮೆಸ್ಕಾಂ ಗ್ರಾಹಕರಿಗೆ ಸರಾಸರಿ ವಿದ್ಯುತ್‌ ಬಿಲ್ಲನ್ನು ನೀಡಲಾಗಿರುತ್ತದೆ. ಮೇಯಲ್ಲಿ ಮಾಪಕ ಓದುಗರು ಮನೆಮನೆಗೆ ತೆರಳಿ ಆ್ಯಕುcವಲ್‌ ರೀಡಿಂಗ್‌ ದಾಖಲಿಸಿ, ಎಪ್ರಿಲ್‌ ಮತ್ತು ಮೇ ಎರಡೂ ತಿಂಗಳಿಗೆ ಸೇರಿಸಿ ಒಂದೇ ಬಿಲ್‌ ಪ್ರತಿ ನೀಡುತ್ತಾರೆ. ಹಾಗೆ ಬಿಲ್‌ ನೀಡುವಾಗ ಪ್ರತಿ ತಿಂಗಳಿಗೆ ಅನ್ವಯವಾಗುವ ರೇಟ್‌ ಸ್ಲ್ಯಾಬ್ ಗಳನ್ನು ಗಣನೆಗೆ ತೆಗೆದುಕೊಂಡು ಎರಡೂ ತಿಂಗಳಿಗೆ ಅನ್ವಯಿಸಿ ಬಿಲ್ಲಿಂಗ್‌ ಮಾಡಲಾಗುತ್ತದೆ. ಗ್ರಾಹಕರಲ್ಲಿ ಯಾವುದೇ ಗೊಂದಲ ಬೇಡ.
– ಕೃಷ್ಣರಾಜ್‌, ಮೆಸ್ಕಾಂ ಅಧಿಕಾರಿ

ಟಾಪ್ ನ್ಯೂಸ್

Yaakshagana-Artist

Kumble Shridhar Rao; ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ನಿಧನ

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yaakshagana-Artist

Kumble Shridhar Rao; ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ನಿಧನ

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Yaakshagana-Artist

Kumble Shridhar Rao; ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ನಿಧನ

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.