Milestone: ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರೈಸಿದ ಸ್ಟೀವ್‌ ಸ್ಮಿತ್‌

ಹತ್ತು ಸಾವಿರ ಕ್ಲಬ್‌ ಸೇರಿದ ಆಸ್ಟ್ರೇಲಿಯಾದ ನಾಲ್ಕನೇ, ವಿಶ್ವದ 15ನೇ ಬ್ಯಾಟ್ಸ್‌ಮನ್‌

Team Udayavani, Jan 29, 2025, 7:16 PM IST

Steve-Smith

ಗಾಲೆ: ಆಸ್ಟ್ರೇಲಿಯಾ ತಂಡದ ಸ್ಟಾರ್‌ ಬ್ಯಾಟರ್‌ ಸ್ವೀವ್‌ ಸ್ಮಿತ್‌  ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಆ  ಮೈಲುಗಲ್ಲು ತಲುಪಿದ ಆಸ್ಟ್ರೇಲಿಯಾದ ನಾಲ್ಕನೇ ಹಾಗೂ ಒಟ್ಟಾರೆಯಾಗಿ ವಿಶ್ವದ 15ನೇ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

ಗಾಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್‌ನ ಮೊದಲ ದಿನದಂದು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್  ಒಂಟಿರನ್‌ ತೆಗೆಯುವ ಮೂಲಕ 10 ಸಾವಿರ ರನ್‌ಗಳ ಪೂರೈಸುವ ಮೂಲಕ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ರಿಕಿ ಪಾಂಟಿಂಗ್‌ ಹಾಗೂ ಬ್ರಿಯಾನ್‌ ಲಾರಾ ಗುಂಪಿಗೆ ಸೇರ್ಪಡೆಯಾಗಿದ್ದಾರೆ.

ರಾಹುಲ್‌ ದ್ರಾವಿಡ್‌ ದಾಖಲೆ ಮುರಿದ ಸ್ಮಿತ್‌:
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ (13,378) ಹಾಗೂ ಅಲನ್ ಬಾರ್ಡರ್ (11,174) ಈ ದಾಖಲೆ ಬರೆದಿದ್ದರು. ಇದೀಗ ಈ ಸಾಧಕ ಪಟ್ಟಿಗೆ ಸ್ಟೀವ್ ಸ್ಮಿತ್ ಕೂಡ ಪ್ರವೇಶ ಪಡೆದಿದ್ದಾರೆ. ಇನ್ನು ಸ್ಟೀವ್ ಸ್ಮಿತ್ ಈ ಸಾಧನೆಯ ಟೆಸ್ಟ್ ಕ್ರಿಕೆಟ್​ನಲ್ಲಿ 115 ಪಂದ್ಯ  205 ಇನ್ನಿಂಗ್ಸ್‌ಗಳ ಮೂಲಕ ವೇಗವಾಗಿ 10 ಸಾವಿರ ರನ್ ಪೂರೈಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 5ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ 2ನೇ ದಾಂಡಿಗ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಐದನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ರಾಹುಲ್ ದ್ರಾವಿಡ್  ಇದ್ದರು. ದ್ರಾವಿಡ್ 206 ಇನಿಂಗ್ಸ್​ಗಳ ಮೂಲಕ 10 ಸಾವಿರ ರನ್ ಪೂರೈಸಿದ್ದರು.

ಇನ್ನು ಟೆಸ್ಟ್​ ಇತಿಹಾಸದಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್​ನ ಬ್ರಿಯಾನ್ ಲಾರಾ, ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾದ ಕುಮಾರ ಸಂಗಾಕ್ಕರ​ ಹೆಸರಿನಲ್ಲಿದೆ. ಈ ಮೂವರು ದಿಗ್ಗಜರು ಕೇವಲ 195 ಇನಿಂಗ್ಸ್​ಗಳ ಮೂಲಕ 10,000 ರನ್ ಪೂರೈಸಿದ್ದರು.

10 ಸಾವಿರ ರನ್‌ ಪೂರೈಸಿ ಭರ್ಜರಿ ಶತಕ ಸಿಡಿಸಿದ ಸ್ಮಿತ್‌: 
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಪರ ಆರಂಭಿಕ ಉಸ್ಮಾನ್ ಖ್ವಾಜಾ (147 ) ಸ್ಟೀವ್ ಸ್ಮಿತ್ (104) ಇಬ್ಬರು ಬ್ಯಾಟ್ಸ್‌ಮನ್‌ಗಳು ಭರ್ಜರಿ ಶತಕ ಸಿಡಿಸಿದರು. ಟ್ರಾವಿಸ್ ಹೆಡ್‌  (57) ಅರ್ಧಶತಕ ಬಾರಿಸಿದರೆ ಮಾರ್ನಸ್‌ ಲಬುಶೇನ್‌ (20) ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾಗಿದ್ದಾರೆ. ಶ್ರೀಲಂಕಾ ಪರ ಪ್ರಭಾತ್‌ ಜಯಸೂರ್ಯ, ವಾಂಡರ್ಸೆ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್‌ – 330-2


ಟಾಪ್ ನ್ಯೂಸ್

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

New-CEC

CEC Appoint: ಜ್ಞಾನೇಶ್‌ ಕುಮಾರ್‌ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ 

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tennis

ಫೆ. 24ರಿಂದ ಬೆಂಗಳೂರು ಓಪನ್‌ ಟೆನಿಸ್‌

1-s-n

ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಡರ್ಟ್‌ ಕಾರ್‌ ರೇಸ್‌ಗೆ ತೆರೆ

1-manu-bhaker

BBC; ಸ್ಟಾರ್‌ ಪಿಸ್ತೂಲ್‌ ಶೂಟರ್‌ ಮನು ಭಾಕರ್‌ ವರ್ಷದ ಆಟಗಾರ್ತಿ

1-ranaji

Ranji Trophy ಸೆಮಿಫೈನಲ್‌: ದೊಡ್ಡ ಮೊತ್ತದ ಸೂಚನೆಯಿತ್ತ ವಿದರ್ಭ

1-wpl

WPL; ಭರ್ಜರಿ ಜಯ:ಆರ್‌ಸಿಬಿ ಅಜೇಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

1-pm

US ಆರ್ಥಿಕ ನೆರವು ದೊಡ್ಡ ಹಗರಣ: ಪ್ರಧಾನಿಯ ಸಲಹೆಗಾರ

1-cec

One Election: 25ರ ಜೆಪಿಸಿ ಸಭೆಗೆ ನಿವೃತ್ತ ನ್ಯಾಯಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.