![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 1, 2023, 11:33 PM IST
ಉಳ್ಳಾಲ: ದೇರಳಕಟ್ಟೆಯ ಶ್ರೀ ದೇವಿಪ್ರಸಾದ್ ಹೊಟೇಲ್ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮೂಲತಃ ಉತ್ತರಖಂಡ ಅಲ್ಮೋರಾ ಜಿಲ್ಲೆಯ ನಿವಾಸಿ ದೇವೇಂದ್ರ ರಾಮ್ ನಾಪತ್ತೆಯಾಗಿರುವ ಕುರಿತು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುವ ದೇವೇಂದ್ರ ರಾಮ್ ಹೊಟೇಲ್ನ ಮೇಲಿರುವ ರೂಮ್ನಲ್ಲಿ ವಾಸವಾಗಿದ್ದು, ಪ್ರತೀ ದಿನ ದುಡಿದು ಹಣ ತೆಗೆದುಕೊಂಡು ಹೋಗುತ್ತಿದ್ದು, ಕುಡಿಯುವ ಚಟ ಹೊಂದಿದ್ದ ಎನ್ನಲಾಗಿದೆ. ಮೂರ್ಛೆ ರೋಗ ಹೊಂದಿದ್ದ ಇವರು ಈ ಹಿಂದೆಯೂ ಹಣ ತೆಗೆದುಕೊಂಡು ಹೋಗಿ ಎರಡು ಮೂರು ದಿನ ರಜೆ ಹಾಕುತ್ತಿದ್ದು ಇದೇ ರೀತಿ ಹಣ ತೆಗೆದುಕೊಂಡು ಹೋಗಿದ್ದ ಇವರು ಈವರೆಗೆ ಪತ್ತೆಯಾಗಿಲ್ಲ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.