![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 21, 2020, 7:58 AM IST
21-12-2020
ಮೇಷ: ನೂತನ ಕಾರ್ಯಾರಂಭಕ್ಕೆ ವಿಘ್ನ ಭೀತಿಯಿಂದ ಮುನ್ನಡೆಯಲಿದೆ. ಚಿತ್ರೋದ್ಯಮ, ಸಂಗೀತ ನರ್ತನ ಮುಂತಾದವುಗಳಲ್ಲಿ ವಿಶೇಷ ಕೀರ್ತಿ ಲಾಭ. ಮಾರಾಟಗಾರರು, ಚಿತ್ರೋದ್ಯಮಿಗಳಿಗೆ ಹೆಚ್ಚಿನ ಲಾಭವಿರದು.
ವೃಷಭ: ಕುಶಲಕಲೆ, ಕಟ್ಟಡ ಸಾಮಗ್ರಿಗಳ ತಯಾರಿಕೆ. ಯಂತ್ರ ಸ್ಥಾವರ ಕೆಲಸದವರು ಚೆನ್ನಾಗಿ ಆದಾಯ ಗಳಿಸಬಹುದು. ಆರೋಗ್ಯ ಮಾತ್ರ ಹದಗೆಡಲಿದೆ. ಅಸ್ತಮಾ, ಅಲರ್ಜಿಯಂತಹ ಪೀಡೆ ಕಡಿಮೆಯಾಗಲಿದೆ.
ಮಿಥುನ: ಗಣಿ, ಚಿನ್ನ- ಬೆಳ್ಳಿ, ವೃತ್ತಿಯವರು ಪರಿಶ್ರಮದಿಂದ ಲಾಭ ಗಳಿಸಬಹುದಾಗಿದೆ. ವಿದ್ಯಾಭ್ಯಾಸದಲ್ಲಿ ಅಸಡ್ಡೆಯಿಂದ ಪ್ರಗತಿ ಕುಂಠಿತವಿದೆ. ವಾದ-ವಿವಾದದಿಂದ ನ್ಯಾಯಾಲಯದ ದರ್ಶನವಾಗಲಿದೆ. ಶುಭವಿದೆ.
ಕರ್ಕ: ಎಲ್ಲಾ ಕೆಲಸಕಾರ್ಯಗಳಲ್ಲಿ ಇಷ್ಟಸಿದ್ಧಿ ಉಂಟಾಗಲಿದೆ. ಹೆಚ್ಚಿನ ಲಾಲಸೆ ಬೇಡ. ಹೆಚ್ಚಿನ ಸಂಚಾರ ಬೇಡ. ಹಿರಿಯರ ಆಸೆ, ಹರಕೆಯ ಫಲದಿಂದ ನಿಮ್ಮ ಮನಸ್ಸಿನ ಇಚ್ಛೆ ಪೂರೈಕೆಯಾಗಲಿದೆ. ಶುಭವಿದೆ.
ಸಿಂಹ: ಅಧಿಕಾರಿ ವರ್ಗದವರಿಗೆ ಭಡ್ತಿಯ ಸಂಭವವಿದೆ. ಹತ್ತು ಹಲವು ಖರ್ಚುಗಳ ಪಟ್ಟಿ ಬೆಳೆದೀತು. ಆರೋಗ್ಯದಲ್ಲಿ ಸುಧಾರಣೆ ಇದೆ. ವ್ಯವಹಾರಕ್ಕಾಗಿ ದೂರ ಸಂಚಾರ ಒದಗಿ ಬಂದೀತು. ವ್ಯಾಸಂಗದಲ್ಲಿ ಅಭಿವೃದ್ಧಿ ಇದೆ.
ಕನ್ಯಾ: ಸ್ವಂತ ವೃತ್ತಿ, ತಾಂತ್ರಿಕ ಕೃತ್ಯ, ಧರ್ಮಕಾರ್ಯಗಳಲ್ಲಿ ವಿಘ್ನ ಭೀತಿ ಇದ್ದೀತು. ರಕ್ಷಣೆ, ಶಿಕ್ಷಣ ವರ್ಗದವರಿಗೆ ಲಾಭವಿರುತ್ತದೆ. ಆರೋಗ್ಯವು ಸಾಮಾನ್ಯವಾಗಿರುವುದು. ಯಶೋವೃದ್ಧಿ, ಕಾರ್ಯಸಿದ್ಧಿ ಇರುವುದು.
ತುಲಾ: ನಿಮ್ಮ ಪಾಲಿಗೆ ಸುಖದುಃಖ, ಶುಭಾಶುಭ, ಲಾಭಾಲಾಭಗಳು ಮಿಶ್ರಣವಿರುತ್ತದೆ. ಆರೋಗ್ಯವು ಸ್ವಲ್ಪ ಕೈಕೊಡಬಹುದು. ಸಹೋದ್ಯೊಗಿಗಳೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ.
ವೃಶ್ಚಿಕ: ಬಂಧುಗಳ ಸಮಾಗಮದಿಂದ ಸಂತಸವಾಗಲಿದೆ. ಗೃಹೋಪಕರಣಗಳ ಖರೀದಿಯಿಂದ ಸಂತಸ. ಖರ್ಚು ಲೆಕ್ಕಮಿಕ್ಕಿ ಹೋದೀತು. ಕಲ್ಲು, ಮಣ್ಣು, ಇಟ್ಟಿಗೆ ಮುಂತಾದ ವ್ಯವಹಾರದವರಿಗೆ ಯಶಸ್ಸು ಸಿಗಲಿದೆ.
ಧನು: ಯಾತ್ರೆ, ಪ್ರವಾಸಾದಿಗಳಿಂದ ಸಂತಸವಿದೆ. ನೂತನ ಮಿತ್ರರ ಸಂಯೋಗವಿದೆ. ಪರೋಪಕಾರವು ನಿಮಗೇ ಮುಳು ತಂದೀತು. ಸಂಗೀತ, ನಾಟ್ಯ ಕಲೆಯವರಿಗೆ ಮಾನ ಸಮ್ಮಾನಗಳು ದೊರೆತು ಯಶಸ್ಸು.
ಮಕರ: ವಿದ್ಯಾರ್ಜನೆಯಲ್ಲಿ ಭಂಗವಿದೆ. ಆಟೋಟ ಸ್ಪರ್ಧೆಯಲ್ಲಿ ಕೀರ್ತಿ ಗಳಿಸುವಿರಿ. ಲೇಖನ ಸಾಮಗ್ರಿಗಳ ವಿಕ್ರಯದಲ್ಲಿ ಲಾಭವಿದೆ. ಅಲಂಕರಣ ಸಾಮಗ್ರಿಗಳ ವ್ಯಾಪಾರ ಭರಾಟೆಯಿಂದ ನಡೆದೀತು. ಯಶಸ್ಸಿದೆ.
ಕುಂಭ: ಗುಡಿ ಕೈಗಾರಿಕೆಯಲ್ಲಿ ತೊಡಗಿರುವವರಿಗೆ ಒಳ್ಳೆಯ ಲಾಭವಿದೆ. ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶೋ ಲಾಭವಿದೆ. ಕೃಷಿಯಲ್ಲಿ ಆದಾಯ ವೃದ್ಧಿಯಿದ್ದು ನೆಮ್ಮದಿ ತರಲಿದೆ. ಸಹನೆ ಇರಲಿ.
ಮೀನ: ವರ್ತಕ ವರ್ಗದವರಿಗೆ ವ್ಯವಹಾರದಲ್ಲಿ ಏಳಿಗೆ ಕಂಡು ಬರಲಿದೆ. ತಾಮ್ರ, ಹಿತ್ತಾಳೆ ಪದಾರ್ಥಗಳಿಗೆ ಬೇಡಿಕೆ ಹೆಚ್ಚಲಿದೆ. ವ್ಯಾಪಾರವು ಉತ್ತಮವಿದ್ದೀತು. ಮಂಗಲ ಕಾರ್ಯದ ಸೂಚನೆ ಕಂಡು ಬರಲಿದೆ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.