Mumbai Marathon; ಇಥಿಯೋಪಿಯ ಪ್ರಾಬಲ್ಯ: ಮೊಳಗಿದ ‘ಜೈಶ್ರೀರಾಮ್’ ಘೋಷಣೆ
Team Udayavani, Jan 21, 2024, 11:57 PM IST
ಮುಂಬಯಿ: ಮುಂಬಯಿ ಮ್ಯಾರಥಾನ್ನಲ್ಲಿ ಪ್ರಾಬಲ್ಯ ಸ್ಥಾಪಿಸಿದ ಇಥಿಯೋಪಿಯದ ಓಟಗಾರರಾದ ಹಾಲಿ ಚಾಂಪಿಯನ್ ಹೇಲ್ ಲೆಮಿ ಬರ್ಹಾನು ಮತ್ತು ಅಬೆರಾಶ್ ಮಿನ್ಸೆವೊ ಅವರು ಪುರುಷರ ಮತ್ತು ವನಿತೆಯರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಲೆಮಿ 2:07.50 ನಿಮಿಷದಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ ಹೆಮನಾಟ್ ಅಲೆವ್ ಬೆಳ್ಳಿ ಮತ್ತು ಮಿಟುR ತಾಫ ಅವರು ಕಂಚು ಗೆದ್ದರು. ಈ ಸ್ಪರ್ಧೆಯಲ್ಲಿ ಭಾರತೀಯರ ಪೈಕಿ ಶ್ರಿನು ಬುಗತ ಅವರು 2.17.29 ನಿಮಿಷಗಳಲ್ಲಿ ಗುರಿ ತಲುಪಿದ ಸಾಧನೆ ಮಾಡಿದರು.
ವನಿತೆಯರ ಪ್ರಶಸ್ತಿಯನ್ನು ಮಿನ್ಸೆವೊ ಪ್ರಶಸ್ತಿ ಗೆದ್ದರೆ ಅದೇ ದೇಶದ ಮುಲುಹಟ್ ಸೆಗ ಬೆಳ್ಳಿ ಮತ್ತು ಮೇಧಿನ್ ಬೆಜೆನೆ ಕಂಚು ಪಡೆದರು. ಭಾರತೀಯರ ಪೈಕಿ ನಿರ್ಮಬೆನ್ ಥಾಕೋರ್ ಭಾರತ್ಜೀ ಮೊದಲಿಗರಾಗಿ ಗುರಿ ತಲುಪಿದರು.
ಮೊಳಗಿದ “ಜೈಶ್ರೀರಾಮ್’ ಘೋಷಣೆ
ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ನೆರವೇರುವ ಮುನ್ನಾ ದಿನ ನಡೆದ ಮುಂಬಯಿ ಮ್ಯಾರಥಾನ್ನಲ್ಲೂ “ಜೈಶ್ರೀರಾಮ್’ ಘೋಷಣೆ ಮೊಳಗಿದೆ. ಶ್ರೀರಾಮದ ಚಿತ್ರವಿರುವ ಕೇಸರಿ ಧ್ವಜ ಹಿಡಿದ ಓಟಗಾರರು ಜೈಶ್ರೀರಾಮ್ ಎಂದು ಹೇಳುತ್ತ ಮ್ಯಾರಥಾನ್ನಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.