ನಾಗರಹೊಳೆಯಲ್ಲಿ ಫೆ.12ರವರೆಗೆ ಪಕ್ಷಿಗಳ ಸಮೀಕ್ಷೆ

ಅರಣ್ಯ ಸಿಬ್ಬಂದಿಗಳೊಂದಿಗೆ ಹೊರ ರಾಜ್ಯದ 45 ಮಂದಿ ಸೇರಿದಂತೆ 118 ಮಂದಿ ಸ್ವಯಂ ಸೇವಕರು ಭಾಗಿ

Team Udayavani, Feb 11, 2023, 12:25 PM IST

3-hunsur1

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಅತ್ತ ತಮಿಳುನಾಡಿನ ಮಧುಮಲೈ ಇತ್ತ ಕೇರಳದ ವೈನಾಡು ಅರಣ್ಯದ ಮದ್ಯೆ ಸಮತೋಲನ ಕಾಯ್ದುಕೊಳ್ಳುವ ಹರಿಧ್ವರ್ಣದ ಕಾನನವಾಗಿದ್ದು, ವನ್ಯಪ್ರಾಣಿ, ಸಸ್ಯ ಪ್ರಭೇಧಗಳು ಜೊತೆಗೆ ಅಪರೂಪದ ಸಸ್ಯ ಪ್ರಬೇಧಗಳನ್ನು ಕಾಪಾಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿ.ಎಫ್) ಸಿ.ಎನ್.ಎನ್.ಮೂರ್ತಿ ತಿಳಿಸಿದರು.

ನಾಗರಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿ ವಲಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪಕ್ಷಿಗಳ ಸಮೀಕ್ಷೆಗೆ ಚಾಲನೆ ನೀಡಿ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಅವರು ಫೆ.12ರವರೆಗೆ ನಾಗರಹೊಳೆ ಉದ್ಯಾನದ ಎಲ್ಲ 8 ವಲಯಗಳಲ್ಲೂ ಏಕಕಾಲಕ್ಕೆ ಪಕ್ಷಿಗಳ ಸಮೀಕ್ಷೆ ನಡೆಯಲಿದೆ ಎಂದರು.

ವಿಶ್ವದಲ್ಲೇ ಹೆಸರುವಾಸಿಯಾಗಿರುವ ಪ್ರವಾಸಿ ತಾಣಗಳಲ್ಲೊಂದಾಗಿರುವ ನಾಗರಹೊಳೆ ಉದ್ಯಾನವನದಲ್ಲಿ ಹುಲಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅರಣ್ಯದಲ್ಲಿ ಸಮತೋಲನ ಕಾಪಾಡಿಕೊಂಡಿರುವುದರಿಂದ  ಹುಲಿಯೊಂದಿಗೆ ಆನೆ ಮತ್ತಿತರ ಸಸ್ಯಹಾರಿ ಪ್ರಾಣಿಗಳು, ಸಸ್ಯಪ್ರಭೇಧದ ಮತ್ತು ಅಪರೂಪಗಳಲ್ಲಿ ಅಪರೂಪವಾದ ವಿವಿಧ ಪ್ರಭೇಧದ ಪಕ್ಷಿ ಸಂಕುಲಗಳು ಇಲ್ಲಿವೆ ಎಂದು ಹೇಳಿದರು.

ಇಷ್ಟೆ ಅಲ್ಲದೆ ಹರಿಧ್ವರ್ಣದ ಅರಣ್ಯಗಳ್ಲೊಂದಾಗಿರುವ ಈ ಅರಣ್ಯದಲ್ಲಿ ಹಲವು ಔಷಧಗುಣಗಳುಳ್ಳ ಸಸ್ಯ ಪ್ರಬೇಧಗಳು ಇಲ್ಲಿವೆ. ಒಟ್ಟಾರೆ ಈ ಎಲ್ಲವನ್ನೂ ಜತನದಿಂದ ಕಾಪಾಡುವ ಹೊಣೆಗಾರಿಕೆ ಮನುಷ್ಯರಾದ ನಮ್ಮ ಮೇಲಿದೆ ಎಂದರು.

ನಾಗರಹೊಳೆಯಲ್ಲಿ ಫೆ.12ರವರೆಗೆ ಪಕ್ಷಿಗಳ ಸಮೀಕ್ಷೆ

 

ನಿಯಮ ಪಾಲಿಸಿ: ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ, ಸ್ವಯಂಸೇವಕರು ಪಕ್ಷಿ ವೀಕ್ಷಣೆ ಹಾಗೂ ದಾಖಲೆ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲಾಖೆ ಸಿಬ್ಬಂದಿಗಳು ಹೇಳುವ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಮೂರು ದಿನಕಾಲ ಸಾಮಾಜಿಕ ಜಾಲತಾಣ, ವ್ಯಾಟ್ಸಪ್‌ನಿಂದ ದೂರುವಿರುವುದೇ ಒಳಿತು. ಸಮೀಕ್ಷೆವೇಳೆ ಸಿಗುವ ವನ್ಯಪ್ರಾಣಿಗಳ ಪೋಟೋ ತೆಗೆಯದಂತೆ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡದಂತೆ ಸೂಚಿಸಿದರು.

ಅಂತರಾಷ್ಟ್ರೀಯ ಪಕ್ಷಿತಜ್ಞ ಮಹಾರಾಷ್ಟದ ಸ್ವರಾಜ್ ಅಮ್ಟೆ ಪಕ್ಷಿ ಸಮೀಕ್ಷೆ ನಡೆಸುವ ಮತ್ತು ಪಕ್ಷಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಸಮೀಕ್ಷೆಗೆ 118 ಮಂದಿ: ಸಮೀಕ್ಷೆಗಾಗಿ ಹೊರ ರಾಜ್ಯಗಳಿಂದ 45 ಮಂದಿ ಸೇರಿದಂತೆ ಒಟ್ಟು 118 ಮಂದಿ ನೊಂದಾಯಿಸಿಕೊಂಡಿದ್ದು, ಉದ್ಯಾನದ 8 ವಲಯಗಳಲ್ಲಿ ತಂಡಗಳಾಗಿ ರಚಿಸಲಾಗಿದ್ದು, ಎಲ್ಲರಿಗೂ ವಸತಿ-ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಆಯಾ ತಾಣಗಳಲ್ಲೇ ಸಮೀಕ್ಷೆ ನಡೆಸಲು ಸಿಬ್ಬಂದಿಗಳೊಂದಿಗೆ ನೆರವಾಗಬೇಕೆಂದು ಎಸಿಎಫ್ ದಯಾನಂದ್ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ನವೀನ್ ಬೋಪಣ್ಣ, ಎಸಿಎಫ್‌ಗಳಾದ ಗೋಪಾಲ್, ದಯಾನಂದ್, ಆರ್.ಎಫ್.ಓ.ಗಳಾದ ನವೀನ್ ಪಟಗಾರ್, ರತನ್, ಸಿದ್ದರಾಜು,  ಹರ್ಷಿತಾ, ನ್ಯಾಚುರಲಿಸ್ಟ್ ಗೋಪಿ,  ಡಿ.ಆರ್.ಎಫ್.ಓಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

 

ಟಾಪ್ ನ್ಯೂಸ್

sanjay-raut

Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್

BSP president Armstrong case; Chennai police arrested 8 suspects

BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ; 8 ಶಂಕಿತರನ್ನು ಬಂಧಿಸಿದ ತಮಿಳುನಾಡು ಪೊಲೀಸ್

Ludhiana; Shiv Sena leader attacked by Nihang Sikhs in the middle of the day. Video

Ludhiana;ಶಿವಸೇನಾ ನಾಯಕನ ಮೇಲೆ ಹಾಡಹಗಲೇ ನಡುರಸ್ತೆಯಲ್ಲಿ ನಿಹಾಂಗ್ ಸಿಖ್ಖರಿಂದ ದಾಳಿ| Video

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

Harish-Poonja

Belthangady ಶಾಸಕ ಹರೀಶ್‌ ಪೂಂಜ ಪ್ರಕರಣ: ವಿಚಾರಣೆಗೆ ವಿನಾಯಿತಿ ನೀಡಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

Hunsur ಮೊಬೈಲ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್‌

Hunsur ಮೊಬೈಲ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್‌

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

sanjay-raut

Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್

Kaagada movie review

Kaagada movie review; ಕಾಗದ ಮೇಲೆ ಅರಳಿದ ಮುಗ್ಧ ಪ್ರೀತಿ

BSP president Armstrong case; Chennai police arrested 8 suspects

BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ; 8 ಶಂಕಿತರನ್ನು ಬಂಧಿಸಿದ ತಮಿಳುನಾಡು ಪೊಲೀಸ್

Rashmika Mandanna is in kubera movie

Rashmika Mandanna; ಕುಬೇರ ಮೂಲೆಯಲ್ಲಿ ನಿಂತ ರಶ್ಮಿಕಾ ಮಂದಣ್ಣ

Ludhiana; Shiv Sena leader attacked by Nihang Sikhs in the middle of the day. Video

Ludhiana;ಶಿವಸೇನಾ ನಾಯಕನ ಮೇಲೆ ಹಾಡಹಗಲೇ ನಡುರಸ್ತೆಯಲ್ಲಿ ನಿಹಾಂಗ್ ಸಿಖ್ಖರಿಂದ ದಾಳಿ| Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.