![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Nandini: ಚಿಲ್ಲರೆ ಸಮಸ್ಯೆ- 10 ML ಹೆಚ್ಚಿಗೆ ಹಾಲು
Team Udayavani, Aug 3, 2023, 7:17 AM IST
![kmf](https://www.udayavani.com/wp-content/uploads/2023/08/kmf-1-620x372.jpg)
ಬೆಂಗಳೂರು: ಅರ್ಧ ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ನಲ್ಲಿ 10 ಮಿಲಿ ಲೀಟರ್(ಎಂಎಲ್) ಹೆಚ್ಚುವರಿ ಹಾಲು ಕೊಡುವ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಚಿಲ್ಲರೆ ಸಮಸ್ಯೆ ಎದುರಾಗದಂತೆ ಕೆಎಂಎಫ್ ಎಚ್ಚರ ವಹಿಸಿದೆ.
ಪ್ರತಿ ಲೀಟರ್ ಹಾಲಿನ ದರವು ಸರಾಸರಿ 3 ರೂ. ಹೆಚ್ಚಳವಾಗಿದ್ದು, ಅರ್ಧ ಲೀಟರ್ ಹಾಲಿಗೆ 1.50 ರೂ. ಹೆಚ್ಚಳವಾಗಬೇಕಿತ್ತು. ಆದರೆ, 2 ರೂ. ಹೆಚ್ಚಿಸಿದ್ದು, ಗ್ರಾಹಕರಿಗೆ ವಂಚನೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಕೆಎಂಎಫ್, ಅರ್ಧ ಲೀಟರ್ ಹಾಲಿನಲ್ಲಿ 500 ಎಂ.ಎಲ್. ಬದಲು 510 ಎಂ.ಎಲ್. ಸೇರಿಸಲಾಗುತ್ತಿದೆ.
ಟೋನ್ಡ್ ಹಾಲು (ನೀಲಿ ಪೊಟ್ಟಣ) ಪ್ರತಿ ಲೀಟರ್ಗೆ 39ರಿಂದ 42 ರೂ. ಹೆಚ್ಚಾಗಿದ್ದು, ಅರ್ಧ ಲೀಟರ್ಗೆ 20.50 ಪೈಸೆ ಆಗಬೇಕಿತ್ತು. ಆದರೆ, ಇದರಿಂದ ಚಿಲ್ಲರೆ ಸಮಸ್ಯೆ ಉಂಟಾಗಲಿದೆ ಎಂಬುದನ್ನು ಅರಿತ ಕೆಎಂಎಫ್, ಅರ್ಧ ಲೀಟರ್ ಹಾಲಿಗೆ 21 ರೂ. ಮಾಡಿದ್ದು, 10 ಎಂಎಲ್ ಹೆಚ್ಚಿಗೆ ಹಾಕಿ ಪ್ಯಾಕ್ ಮಾಡುತ್ತಿದೆ.
ಇದೇ ರೀತಿ ಹೋಮೋಜಿನೈಸ್ಡ್ ಟೋನ್x ಹಾಲು, ಹಸುವಿನ ಹಾಲು (ಹಸಿರು ಪೊಟ್ಟಣ), ಶುಭಂ (ಕೇಸರಿ) ಸ್ಪೆಷಲ್ ಹಾಲಿನ ಪ್ರತಿ ಲೀಟರ್ಗೆ 3 ರೂ. ಹೆಚ್ಚಾಗಿದ್ದರೆ, ಅರ್ಧ ಲೀಟರ್ಗೆ 1.50 ರೂ. ಬದಲು 2 ರೂ. ಏರಿಕೆಯಾಗಿದ್ದು, 10 ಎಂಎಲ್ ಹೆಚ್ಚಿಗೆ ಹಾಲನ್ನೂ ಕೊಡುತ್ತಿದೆ.
ಟಾಪ್ ನ್ಯೂಸ್
![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BJP-Member](https://www.udayavani.com/wp-content/uploads/2024/07/BJP-Member-140x115.jpg)
Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
![VIjayendra](https://www.udayavani.com/wp-content/uploads/2024/07/VIjayendra-150x90.jpg)
CM Siddaramaiah ರಾಜೀನಾಮೆ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
![Congress-Symbol](https://www.udayavani.com/wp-content/uploads/2024/07/Congress-Symbol-150x90.jpg)
By Election: ಸಚಿವ ಜಾರಕಿಹೊಳಿ ಮುಂದೆಯೇ ಶಿಗ್ಗಾವಿ ಟಿಕೆಟ್ ಕಿತ್ತಾಟ
![Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ](https://www.udayavani.com/wp-content/uploads/2024/07/magu-150x82.jpg)
Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ
![BK-hariprasad](https://www.udayavani.com/wp-content/uploads/2024/07/BK-hariprasad-150x90.jpg)
RSSನಿಂದ ತುರ್ತು ಪರಿಸ್ಥಿತಿಗೆ ಬೆಂಬಲ: ಎಂಎಲ್ಸಿ ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.