![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Jun 4, 2020, 6:30 AM IST
ಹೊಸದಿಲ್ಲಿ: ಖೇಲ್ರತ್ನ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಗಡುವನ್ನು ಜೂ.22ರ ತನಕ ವಿಸ್ತರಿಸಲಾಗಿದೆ. ಮಾತ್ರವಲ್ಲ ಕ್ರೀಡಾಪಟುಗಳು ಸ್ವಯಂ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಬುಧವಾರ ಶಿಫಾರಸು ನಡೆಸುವುದಕ್ಕೆ ವಿವಿಧ ಕ್ರೀಡಾ ಸಂಸ್ಥೆಗಳಿಗೆ ಕೊನೆಯ ದಿನವಾಗಿತ್ತು. ಸದ್ಯದ ಕೋವಿಡ್ -19 ವೈರಸ್ ಲಾಕ್ಡೌನ್ ಪರಿಸ್ಥಿತಿಯಲ್ಲಿ ಕ್ರೀಡಾಪಟುಗಳಿಗೆ ವಿವಿಧ ಅಧಿಕಾರಿಗಳನ್ನು ಭೇಟಿಯಾಗಿ ವ್ಯಕ್ತಿಗಳ ಶಿಫಾರಸು ಪಡೆಯುವಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡಿರುವ ಕ್ರೀಡಾ ಸಚಿವಾಲಯವು ಸ್ವಯಂ ಶಿಫಾರಸು ನಡೆಸುವುದಕ್ಕೆ ಅಥ್ಲೀಟ್ಗಳಿಗೆ ಅವಕಾಶ ನೀಡಿದೆ. ವ್ಯಕ್ತಿಗಳ ಶಿಫಾರಸು ಅಗತ್ಯವಿರುವ ಅರ್ಜಿಯ ಭಾಗ ವನ್ನು ಖಾಲಿ ಬಿಡಬಹುದು ಎಂದು ಪ್ರಕಟಿಸಿದೆ. ಮಾತ್ರವಲ್ಲ ಎಲ್ಲರು ಕಡ್ಡಾಯವಾಗಿ ತಮ್ಮ ಶಿಫಾರಸು ಅರ್ಜಿಗಳನ್ನು ಇ-ಮೇಲ್ ಮೂಲಕವೇ ಕಳಿಸಬೇಕು ಎಂದು ಸೂಚಿಸಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.