ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

ಮಠಕ್ಕೆ ಎಂಟು ಶತಮಾನಗಳ ಇತಿಹಾಸ ; ಮಣ್ಣು, ಸೆಗಣಿ, ಗೋಪಿಚಂದನ, ಗೋಂದು ಬಳಕೆ

Team Udayavani, Jun 18, 2020, 5:30 AM IST

ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

ಉಡುಪಿ: ಶ್ರೀಕೃಷ್ಣಮಠಕ್ಕೆ ಸುಮಾರು ಎಂಟು ಶತಮಾನಗಳ ಇತಿಹಾಸವಿದೆ. ಆದರೆ ಬ್ರಿಟಿಷರ ಆಡಳಿತಾವಧಿಯಿಂದಲೇ (1935ರಿಂದ) ಉಡುಪಿ ತಾಲೂಕು ಕೇಂದ್ರಕ್ಕೆ ನಗರಸಭೆ ಮಾನ್ಯತೆ ದೊರಕಿದೆ. 1960ರ ದಶಕದಲ್ಲಿ ನಗರಸಭೆ ಮಾನ್ಯತೆ ಹೋಗಿ ಪುರಸಭೆ ಮಾನ್ಯತೆ ಬಂದರೂ, 1995ರ ವೇಳೆ ಮತ್ತೆ ಅದೇ ನಗರ ಮಟ್ಟ ಬಂತು.

ಎಲ್ಲ ನಗರಗಳೂ ದಿನದಿಂದ ದಿನಕ್ಕೆ ತನ್ನ ನಗರತನವನ್ನು ಬೆಳೆಸಿಕೊಳ್ಳುತ್ತಲೇ ಇವೆ. ಇದರ ಪರಿಣಾಮ ಪರಿಸರ- ಪ್ರಕೃತಿಗೆ ಪೂರಕ, ನೈಸರ್ಗಿಕ ಇತ್ಯಾದಿ ಶಬ್ದಗಳು ನಿಘಂಟಿಗೆ ಸೇರುವ ಹಂತದಲ್ಲಿರುವಾಗ ಒಂದರ್ಥದಲ್ಲಿ ಎಲ್ಲರ ಬದುಕಿನಲ್ಲಿ ಇದರ ಸಹಾಯಕ್ಕೆ ಬಂದದ್ದು ಕೋವಿಡ್-19 ವೈರಸ್‌.

ಕೋವಿಡ್-19 ಕಾರಣದಿಂದ ಲಾಕ್‌ಡೌನ್‌ ಆಗಿರುವಾಗ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಅವಧಿಯಲ್ಲಿ ಬಾಕಿ ಉಳಿದ ಸುಣ್ಣಬಣ್ಣಕ್ಕೆ ಕಾಲಕೂಡಿ ಬಂದಿದೆ. ಜನವರಿಯಲ್ಲಿ ಬಣ್ಣ ಕೊಟ್ಟದ್ದು ಶ್ರೀಕೃಷ್ಣಮಠದ ಕನಕಗೋಪುರ, ಮಹಾದ್ವಾರಗೋಪುರ, ಉತ್ತರ ಭಾಗದ ಗೋಪುರಕ್ಕೆ ಮತ್ತು ಅದಮಾರು ಮಠಕ್ಕೆ ಮಾತ್ರ. ಈಗ ಶ್ರೀಕೃಷ್ಣಮಠದ ಭೋಜನಶಾಲೆ, ಬಡಗುಮಾಳಿಗೆ, ರಾಜಾಂಗಣ ಸಭಾಭವನದ ವೇದಿಕೆಗಳಿಗೆ ನೈಸರ್ಗಿಕ ಬಣ್ಣ ಕೊಡುವ ಕೆಲಸ ನಡೆಯುತ್ತಿದೆ.

ಇಲ್ಲಿ ಕೇವಲ ಮಣ್ಣು, ಸೆಗಣಿ, ಗೋಪಿಚಂದನ, ಗೋಂದು, ಅಂಟನ್ನು ಬಳಸಲಾಗುತ್ತಿದೆ. 3:2ರ ಪ್ರಮಾಣದಲ್ಲಿ ಮಣ್ಣು ಮತ್ತು ಸೆಗಣಿ ಬಳಸಲಾಗುತ್ತದೆ. ಗೋಪಿಚಂದನ, ಅಂಟು, ಗೋಂದಿನ ಪ್ರಮಾಣ ಬಹಳ ಕಡಿಮೆ. ಆಧುನಿಕ ಪೇಂಟಿನಲ್ಲಿ ಜಿಂಕ್‌ ಪ್ರಧಾನ ವಾಗಿರಲಿದ್ದು ಇಲ್ಲಿ ಮಣ್ಣು ಅದರ ಪಾತ್ರ ವಹಿಸುತ್ತದೆ. ಉತ್ತಮ ಗುಣಮಟ್ಟದ ಎರಡು ಟೆಂಪೋ ಕೆಮ್ಮಣ್ಣನ್ನು (ಕೆಂಪು ಮಣ್ಣು) ಅದಮಾರು ಮೂಲ ಮಠದ ಸುತ್ತಮುತ್ತದಿಂದ ತರಿಸಲಾಗಿದೆ. ಮಠದಲ್ಲಿಯೇ ಇರುವ ದೇಸೀ ತಳಿಯ ದನಗಳ ಒಂದು ಟೆಂಪೋ ಸೆಗಣಿ (ಗೋಮಯ) ಸಂಗ್ರಹಿಸಿ ಬಣ್ಣ ತಯಾರಿಸಲಾಗಿದೆ. ಮಣ್ಣಿನಲ್ಲಿರುವ ಸಣ್ಣ ಕಲ್ಲು, ಕಸಗಳನ್ನು ತೆಗೆದು ಶುದ್ಧೀಕರಿಸಿ ಗೋಮಯ, ಗೋಂದು, ಅಂಟು, ಗೋಪಿಯನ್ನು 200 ಲೀ. ಬ್ಯಾರೆಲ್‌ನಲ್ಲಿ ಮಿಶ್ರಣ ಮಾಡಿ ಅದರಿಂದ ತಯಾರಾದ ಬಣ್ಣವನ್ನು ಸ್ಥಳೀಯ ಕಾರ್ಮಿಕರು ಕೊಡುತ್ತಿದ್ದಾರೆ. ವಲಸೆ ಕಾರ್ಮಿಕರು ಊರಿಗೆ ಹೋದರೆಂಬ ಮಾತು ಕೇಳಿಬರುತ್ತಿರುವಾಗಲೇ ಸ್ಥಳೀಯ ಕಾರ್ಮಿಕರ ಕೊರತೆಯಾಗದಿರುವುದು ಕಂಡುಬರುತ್ತಿದೆ.

ಖರ್ಚೂ ಕಡಿಮೆ, ಆರೋಗ್ಯಕ್ಕೂ ಲಾಭ
ನೈಸರ್ಗಿಕ ಬಣ್ಣವೆಂದಾಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಕೊಡಲೇ ಇಲ್ಲ ಎಂದರ್ಥವಲ್ಲ. ಎಲ್ಲಿ ಮಳೆ ನೀರು ಹೆಚ್ಚಾಗಿ ಬೀಳುತ್ತದೋ ಅಲ್ಲಿ ಮಣ್ಣು ತೋಯ್ದು ಹೋಗುವ ಕಾರಣ ಅಂತಹ ಕಡೆ ಮಾರುಕಟ್ಟೆ ಬಣ್ಣವನ್ನು ಕೊಡಲಾಗಿದೆ. ಎಲ್ಲಿ ಮಳೆ ನೀರು ಬೀಳುವುದಿಲ್ಲವೋ, ಎತ್ತರ ಪ್ರದೇಶವೋ ಅಲ್ಲಿ ನೈಸರ್ಗಿಕ ಬಣ್ಣ ಕೊಡಲಾಗುತ್ತಿದೆ. ಬಣ್ಣ ಕೊಡುವುದೆಂದರೆ ಇರುವ ಬಣ್ಣದ ಪದರದ ಮೇಲೆ ಇನ್ನೊಂದು ಪದರ ಕೊಡುವುದೆಂಬ ತಿಳಿವಳಿಕೆ ಇದೆ. ಇದು ಹಾಗಲ್ಲ. ಹಳೆಯ ಪದರಗಳನ್ನು ತೆಗೆದು ಹೊಸ ಪದರವನ್ನು ನೀಡಲಾಗುತ್ತಿದೆ. ಇದು ಆರೋಗ್ಯಕ್ಕೂ ಲಾಭ, ಖರ್ಚೂ ಕಡಿಮೆ, ಏನೇ ಖರ್ಚಿದ್ದರೂ ಅದು ಕೆಲಸದವರಿಗೆ ಮಾತ್ರ. ಕಲಾವಿದ ಪುರುಷೋತ್ತಮ ಅಡ್ವೆಯವರು ನವೀಕರಣ ಕೆಲಸಗಳಿಗೆ ಮಾರ್ಗದರ್ಶನ ಕೊಡುತ್ತಿದ್ದಾರೆ.

ಕಣ್ಮರೆಯ ಕಲೆ ಮೇಲೆ ಕಣ್ಣು
ಮಣ್ಣು, ಸೆಗಣಿ ಮಿಶ್ರಿತ ಬಣ್ಣವು ಹಳೆಯ ಶೈಲಿ, ಹಳೆಯ ಸಂಸ್ಕೃತಿ. ಹಿಂದೆ ಮನೆಗಳಲ್ಲಿ ಇಂತಹ ಗೋಡೆಗಳಿದ್ದವು, ಗೋಮಯದಿಂದ ಮಾಡಿದ ನೆಲಗಳು ಕಾಣುತ್ತಿದ್ದವು. ಮುಖ್ಯವಾದ ಸಂತೃಪ್ತಿ ಎಂದರೆ ಈಗಲೂ 28 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿರುವುದು. ಕೊನೆಗೆ ಶ್ರೀಕೃಷ್ಣಮಠದ ಚಂದ್ರಶಾಲೆ, ಸೂರ್ಯಶಾಲೆಯ ಕೆಲಸ ಮಾಡುತ್ತೇವೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಅದಮಾರು ಮಠ,
ಶ್ರೀಕೃಷ್ಣಮಠ, ಉಡುಪಿ

ಇದು ಸುಮಾರು ನಾಲ್ಕು ತಿಂಗಳ ಕೆಲಸ. 28 ಕೆಲಸದವರು ಇದ್ದಾರೆ. ಮಜೂರಿ ಸುಮಾರು 20 ಲ.ರೂ. ತಗಲುತ್ತದೆ.
-ಗೋವಿಂದರಾಜ್‌, ವ್ಯವಸ್ಥಾಪಕರು, ಶ್ರೀಕೃಷ್ಣಮಠ, ಉಡುಪಿ

ನಾನು ಇದೇ ಮೊದಲ ಬಾರಿಗೆ ಈ ನೈಸರ್ಗಿಕ ಬಣ್ಣವನ್ನು ಕೊಟ್ಟಿದ್ದೇನೆ. ಮಿತವ್ಯಯದಲ್ಲಿ ಬಣ್ಣ ಕೊಡಬೇಕೆನ್ನುವವರಿಗೆ ಇದೊಂದು ಉತ್ತಮ ಅವಕಾಶ.
-ರಮೇಶ್‌, ಬೈಲಕೆರೆ

ಮಾರುಕಟ್ಟೆಯಲ್ಲಿ ಸಿಗುವ ಪೇಂಟಿಂಗ್‌ ಕೈ, ಮೈಗೆ ತಾಗಿದರೆ ಅದನ್ನು ತೆಗೆಯುವುದು ಕಷ್ಟ. ಇದನ್ನು ಕೈಯಲ್ಲಿಯೇ ತಯಾರಿಸುತ್ತೇವೆ. ನಾವೆಲ್ಲರೂ ತುಂಬು ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದೇವೆ.
-ವಿನ್ಸಿ, ಮಣಿಪಾಲ

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.