ನವರಾತ್ರಿ: ಇಂದಿನ ಆರಾಧನೆ- ಆತ್ಮಶಕ್ತಿ ಕರುಣಿಸುವ ದೇವಿ “ಚಂದ್ರಘಂಟಾ”
Team Udayavani, Oct 16, 2023, 11:19 PM IST
ನವರಾತ್ರಿಯ ಮೂರನೇ ದಿವಸ, ತೃತೀಯಾದಂದು ದೇವಿ ದುರ್ಗೆಯ ಮೂರನೇ ರೂಪವಾದ ಚಂದ್ರಘಂಟಾ ಶಕ್ತಿಯನ್ನು ಸಾಧಕನು ಅರ್ಚಿಸುತ್ತಾನೆ.
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
“ಘಂಟಾಕಾರದ ಅರ್ಧಚಂದ್ರನನ್ನು ಶಿರಸ್ಸಿನಲ್ಲಿ ಧರಿಸಿರುವವಳು ಚಂದ್ರಘಂಟಾ. ಇವಳ ಶರೀರದ ಕಾಂತಿ ಚಿನ್ನದಂತೆ ಹೊಳೆಯುತ್ತಿರುವುದು. ಖಡ್ಗ, ಧನಸ್ಸು, ತ್ರಿಶೂಲ ಮುಂತಾದ ದಿವ್ಯಾಸ್ತ್ರಗಳನ್ನು ಹತ್ತು ಕೈಯಲ್ಲಿ ಧರಿಸಿದ್ದಾಳೆ. ಸಿಂಹಾರೂಢಳಾಗಿ ಯುದ್ಧಕ್ಕೆ ಸನ್ನದ್ಧಳಾಗಿರುವಂತೆ ತೋರುವಳು. ಘಂಟಾನಾದದಂತೆ ಈಕೆಯ ಗಂಭೀರ ಧ್ವನಿ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ದೇವಿ ದುಷ್ಟರನ್ನು ಶಿಕ್ಷಿಸುತ್ತಾಳೆ, ಸಜ್ಜನರಿಗೆ ರಕ್ಷಾಕವಚವಾಗಿ ನಿಂತಿದ್ದಾಳೆ. ಈಕೆಯನ್ನು ಆರಾಧಿಸುವ ಭಕ್ತರಿಗೆ ನಿರ್ಭಯತೆ, ಪರಾಕ್ರಮ ಮತ್ತು ಆತ್ಮಶಕ್ತಿಗಳು ದೊರೆಯುತ್ತವೆ.’
ಈ ಆದಿಶಕ್ತಿಯ ಉಪಾಸನೆಯಿಂದ ಸಂಸಾರದ ತ್ರಿತಾಪಗಳು ದೂರವಾಗುತ್ತವೆ. ಇಹ-ಪರದಲ್ಲಿ ಸದ್ಗತಿಯು ದೊರಕುತ್ತದೆ. ಸಾಧಕನು ಈಕೆಯನ್ನು ಪೂಜಿಸುವುದರಿಂದ ಮನಸ್ಸು ಮಣಿಪುರ ಚಕ್ರವನ್ನು ಪ್ರವೇಶಿಸುತ್ತದೆ. ಸಾಧಕನಿಗೆ ದೇವಿಯ ಕೃಪೆಯಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ಮಂಗಳ ಧ್ವನಿಗಳು ಕೇಳಿಬರುತ್ತವೆ. ಸಾಧಕನು ಧ್ಯಾನಸಿದ್ಧನಾದಾಗ ಘಂಟೆಯ ಧ್ವನಿಯೂ ಅಂದರೆ ಅನಾಹತ ಧ್ವನಿಯೂ ಕೇಳಿಬರುತ್ತದೆ ಎಂದು ತಂತ್ರಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್
ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ
Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು
Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು
Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.