ನಾನ್ಯಾವತ್ತೂ ಒಕ್ಕಲಿಗ ವಿರೋಧಿ ಕೆಲಸ ಮಾಡಿಲ್ಲ: ಹುಣಸೂರು ಶಾಸಕ ಮಂಜುನಾಥ್

ಜಿಟಿಡಿಯದ್ದು ನಾಲ್ಕು ದೋಣಿ ಕಥೆ... ನನ್ನ ಮಗ ಒಕ್ಕಲಿಗ ಹುಡುಗಿಯನ್ನು ಮದುವೆಯಾಗಿದ್ದಾನೆ

Team Udayavani, Feb 12, 2023, 8:13 PM IST

1-fasdasdas

ಹುಣಸೂರು : ಪ್ರತಿ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗ ಸಮುದಾಯದ ಬೆಂಬಲವಿಲ್ಲವೆಂದು ಬಿಂಬಿಸಲಾಗುತ್ತಿದೆ. ಇಂದಿನ ಒಕ್ಕಲಿಗರ ಸಭೆ ವಿರೋಧಿ ಪಕ್ಷಕ್ಕೆ ಭ್ರಮನಿರಸನಗೊಳಿಸಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಕಟಕಿದರು.

ನಗರದ ಖಾಸಗಿ ಬಡಾವಣೆಯಲ್ಲಿ ಫೆ 15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕ್ಷೇತ್ರಕ್ಕೆ ಬರುತ್ತಿರುವ ಪ್ರಜಾಧ್ವನಿ ಯಾತ್ರೆ ಸಂಬಂಧ ಒಕ್ಕಲಿಗ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 2008 ರಲ್ಲಿ ಅಂದಿನ ಶಾಸಕ ಜಿ.ಟಿ.ದೇವೇಗೌಡರ ದುರಾಡಳಿತಕ್ಕೆ ಬೇಸತ್ತ ಮತದಾರ ತಮ್ಮನ್ನು ಆಯ್ಕೆ ಮಾಡಿ ಸ್ನೇಹ ಜೀವಿ ಮಂಜುನಾಥ್ ಆಡಳಿತ ಕಂಡ ನಿರಂತರವಾಗಿ ಕಳೆದ ಮೂರು ಅವಧಿಗೂ ಆಯ್ಕೆ ಮಾಡುತ್ತಿದ್ದಾರೆ. ಮತದಾರರು ಪ್ರಜ್ಞಾವಂತರಿದ್ದು, ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾದುಕೊಳ್ಳುವ ಮತ್ತು ಸರ್ವರು ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ದಿಟ್ಟತನ ತೋರಿ ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆಂದರು.

ಒಕ್ಕಲಿಗ ವಿರೋಧಿ ಹಣೆಪಟ್ಟಿ
ಪ್ರತಿ ಚುನಾವಣೆಗಳಲ್ಲಿ ನನ್ನನ್ನು ಒಕ್ಕಲಿಗ ವಿರೋಧಿಎಂದು ಬಿಂಬಿಸಲಾಗುತ್ತಿದೆ. ಒಕ್ಕಲಿಗ ಸಮುದಾಯದ ಮುಖಂಡರಿಗೆ ಒಳ್ಳೆಯ ಅವಕಾಶ ಕೊಟ್ಟು ಬೆಳೆಸಿದ್ದೆ ಆದರೆ ಕೈಕೊಟ್ಟಿರುವವರು ನಿಮ್ಮ ಮುಂದೆಯೇ ಇದ್ದಾರೆ. ನನ್ನ ಮಗ ಒಕ್ಕಲಿಗ ಸಮುದಾಯದ ಹುಡುಗಿಯನ್ನು ಇಷ್ಟಪಟ್ಟಿದ್ದು, ಸಂಬಂಧ ಬೆಳೆಸಿದ್ದೇನೆ, ನಾನು ಒಕ್ಕಲಿಗ ವಿರೋಧಿಯಾಗಿದ್ದರೆ, ಮದುವೆಯನ್ನೇ ವಿರೋಧಿಸುತ್ತಿದ್ದೆನಲ್ಲಾ ಎಂದು ಟಾಂಗ್ ನೀಡಿದರು.
ಪ್ರತಿ ಚುನಾವಣೆಯಲ್ಲಿ ತಮ್ಮನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಸಿ ಒಕ್ಕಲಿಗ ಸಮುದಾಯದ ಮತಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಅದು ಅಸಾಧ್ಯ ಎಂಬ ಸಂದೇಶ ಇಂದಿನ ಸಭೆಯಿಂದ ಸಾಬೀತಾಗಿದೆ, ಎರಡು ದೋಣಿಯಲ್ಲಿ ಕಾಲಿಟ್ಟವರ ಕಥೆ ನೋಡಿದ್ದೆವೆ, ಇವರದು ನಾಲ್ಕು ದೋಣಿಕಥೆ, ಈಗಾಗಲೇ ಮೂರು ಬಾರಿ ತಾಲೂಕು ಜನತೆ ಬುದ್ದಿ ಕಲಿಸಿದ್ದಾರೆ, ಹುಣಸೂರು ಕ್ಷೇತ್ರದಲ್ಲಿ ಹಣ ಹೆಂಡಕ್ಕೆ ಜಾಗ ಇಲ್ಲ. ಏನಿದ್ದರೂ ಮಾನವಿಯ ಮೌಲ್ಯವಿರುವವರಿಗೆ ಮಾತ್ರ ಇಲ್ಲಿ ಜಾಗ ಎಂದರು.

ತಮ್ಮ ಅವಧಿಯಲ್ಲಿ ಮುಗ್ದರ ಮೇಲೆ ಕೇಸ್ ಹಾಕಿಸಿದ್ದೇನೆನ್ನುತ್ತಿದ್ದಾರೆ, ತಾಲೂಕಿನಲ್ಲಿ 200 ರಷ್ಟು ಪ್ರಕರಣ ದಾಖಲಾಗಿದ್ದರೆ ಚಾಮುಂಡೇಶ್ವರಿಯಲ್ಲಿ 900 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಹಾಗಾದರೆ ಅದೂ ಜಿಟಿಡಿ ಹಾಕಿಸಿದ್ದಾ, ಅಪ ಪ್ರಚಾರ ನಡೆಸೋದು ತರವಲ್ಲ. ಈಗ ಹಣ ಕೊಡಲು ಬರುವವರು ಪ್ರವಾಹ, ಕೋವಿಡ್ ವೇಳೆ ಎಲ್ಲಿದ್ದರು, ಅವರಷ್ಟೇ ನಾನೂ ಹಣ ಕೊಡಬಲ್ಲೆ, ಆದರೆ ನನ್ನ ಹಣ ಬಡವರ ಆರೋಗ್ಯ, ಕಷ್ಟ, ದೇವಾಲಯಜೀರ್ಣೋದ್ದಾರ, ಶಿಕ್ಷಣಕ್ಕೆ ಮೀಸಲಾಗಿರಿಸಿದ್ದೇನೆಂದು ಮಾರ್ಮಿಕವಾಗಿ ನುಡಿದು. ಫೆ.15ರಂದು ತಾಲೂಕಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಕಾರ್ಯಕರ್ತರು ಸಭೆಗೆ ಆಗಮಿಸಿ ಯಶಸ್ವಿ ಮಾಡಬೇಕೆಂದು ಶಾಸಕರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದ ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.

ಕಾರ್ಯಕ್ರಮದಲ್ಲಿ ಮಾವಿನಹಳ್ಳಿ ಸಿದ್ದೇಗೌಡ, ಮಾದೇಗೌಡ, ಬೀರಿಹುಂಡಿ ಬಸವಣ್ಣ ಜಿ.ಟಿ.ದೇವೇಗೌಡರ ವಿರುದ್ಧ ಸಭೆಯಲ್ಲಿ ಹರಿಹಾಯ್ದರು.

ವೇದಿಕೆಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್, ರಮೇಶ್, ದೇವರಾಜ್, ಒಕ್ಕಲಿಗ ಮುಖಂಡ ವೆಂಕಟೇಶ್, ಸುನಿತಾ ಜಯರಾಮೇಗೌಡ, ಶ್ವೇತಾ,ರಾಜು ಶಿವರಾಜೇಗೌಡ, ಬಿಳಿಕೆರೆ ಬಾಬು, ಗಣೇಶ್, ಕಸ್ತೂರಿಗೌಡ, ಸಿಂಡೆನಹಳ್ಳಿ ಜವರೇಗೌಡ, ಹಿರಿಕ್ಯಾತನಹಳ್ಳಿ ಸುರೇಶ್, ಗದ್ದಿಗೆ ದೇವರಾಜ್, ಜವರೇಗೌಡ, ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.