Hindi: ಹಿಂದಿ ಭಾಷೆಯ ತರ್ಜುಮೆ ಕೇಳಿದ್ದಕ್ಕೆ ನಿತೀಶ್ ಸಿಡಿಮಿಡಿ
ಹಿಂದಿ ನಮ್ಮ ರಾಷ್ಟ್ರಭಾಷೆ, ಎಲ್ಲರೂ ಕಲೀಬೇಕು
Team Udayavani, Dec 21, 2023, 12:24 AM IST
ಹೊಸದಿಲ್ಲಿ: ಬಿಜೆಪಿಯನ್ನು ಮಣಿಸುವ ಸಲುವಾಗಿ ವಿಪಕ್ಷಗಳ ನಡುವಿನ ಒಗ್ಗಟ್ಟು ಬಲಪಡಿಸಲು ವಿಪಕ್ಷಗಳ ಒಕ್ಕೂಟ ಐಎನ್ಡಿಐಎ ಸೆಣಸಾಡುತ್ತಿರುವ ನಡುವೆಯೇ ಒಕ್ಕೂಟದ ಪ್ರಮುಖ ನಾಯಕ ಬಿಹಾರ ಸಿಎಂ ನಿತೀಶ್ ಕುಮಾರ್ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಹಿಂದಿ ಭಾಷಣದ ಭಾಷಾಂತರಕ್ಕೆ ಮನವಿ ಮಾಡಿದ ಡಿಎಂಕೆ ನಾಯಕರ ಎದುರು “ಹಿಂದಿ ನಮ್ಮ ರಾಷ್ಟ್ರ ಭಾಷೆ” ಎಂದು ನಿತೀಶ್ ಗುಡುಗಿದ್ದಾರೆ.
ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ನಿತೀಶ್ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಭಾಷಣವನ್ನು ಅರ್ಥೈಸಿಕೊಳ್ಳಲಾಗದೇ ಡಿಎಂಕೆ ನಾಯಕ ಟಿ.ಆರ್. ಬಾಲು ಅವರು ಭಾಷಣವನ್ನು ಭಾಷಾಂತರ ಮಾಡುವಂತೆ ಆರ್ಜೆಡಿ ಸಂಸದ ಮನೋಜ್ ಕೆ ಝಾ ಅವರಿಗೆ ಮನವಿ ಮಾಡಿದರು. ಸಂಸದರು ಈ ಬಗ್ಗೆ ನಿತೀಶ್ ಅವರ ಅನುಮತಿ ಕೋರಲು ಹೋದಾಗ ಅದನ್ನು ನಿರಾಕರಿಸಿದ ನಿತೀಶ್, “ನಾವು ನಮ್ಮ ದೇಶವನ್ನು ಹಿಂದೂಸ್ಥಾನ ಎನ್ನುತ್ತೇವೆ. ಹಿಂದಿ ನಮ್ಮ ರಾಷ್ಟ್ರಭಾಷೆ! ಆ ಭಾಷೆ ನಮಗೆ ತಿಳಿದಿರಬೇಕು’ ಎಂದು ಗುಡುಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.