![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 16, 2021, 5:31 PM IST
ನವ ದೆಹಲಿ : ಕೊಹ್ಲಿ ಅವರ ಹೇಳಿಕೆಯ ಕುರಿತು ನನ್ನಿಂದ ಯಾವುದೇ ಹೇಳಿಕೆಗಳಿಲ್ಲ, ಪತ್ರಿಕಾಗೋಷ್ಠಿ ಇಲ್ಲ. ನಾವು ಅದನ್ನು ನಿಭಾಯಿಸುತ್ತೇವೆ, ಅದನ್ನು ಬಿಸಿಸಿಐಗೆ ಬಿಡುತ್ತೇವೆ ”ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಟಿ20 ನಾಯಕತ್ವದಲ್ಲಿ ಮುಂದುವರಿಯುವಂತೆ, ಏಕದಿನ ನಾಯಕತ್ವದಿಂದ ಕೈಬಿಡಲಾಗುವ ಕುರಿತು ಬಿಸಿಸಿಐ ವರಿಷ್ಠರು ತನ್ನ ಜತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೇ ಕೊಹ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ಕೊಟ್ಟಿದ್ದರು.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಲು ಗಂಗೂಲಿ ನಿರಾಕರಿಸಿದರು.
ಕೊಹ್ಲಿಯವರ ಸ್ಫೋಟಕ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಅವರೊಂದಿಗೆ ಚರ್ಚೆ ಇತ್ತು. ಆದರೆ ಮಂಡಳಿಯು ಅಂತಿಮವಾಗಿ ಯಾವುದೇ ಪ್ರತಿ ಹೇಳಿಕೆಗಳನ್ನು ನೀಡಲಿಲ್ಲ.
“ಟಿ20 ನಾಯಕತ್ವ ಬಿಡಬೇಡಿ. ಸೀಮಿತ ಓವರ್ ತಂಡಗಳಿಗೆ ಇಬ್ಬರು ನಾಯಕರ ಆಯ್ಕೆ ಸೂಕ್ತವಲ್ಲ’ ಎಂದು ಕೊಹ್ಲಿ ಅವರಿಗೆ ಸೂಚಿಸಲಾಗಿತ್ತೆಂದೂ, ಕೊಹ್ಲಿ ಇದನ್ನು ನಿರಾಕರಿಸಿದ ಕಾರಣ ಏಕದಿನ ನಾಯಕತ್ವವನ್ನೂ ರೋಹಿತ್ಗೆ ನೀಡುವುದು ಅನಿವಾರ್ಯವಾಯಿತು ಎಂದು ಗಂಗೂಲಿ ಈ ಹಿಂದೆ ಹೇಳಿದ್ದರು.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.